ಕೊಹ್ಲಿ ಪಡೆಗೆ ಗುದ್ದಿದ ಕಾಂಗರೂ


Team Udayavani, Feb 25, 2019, 12:44 AM IST

2-tt.jpg

ವಿಶಾಖಟ್ಟಣ: ಮ್ಯಾಕ್ಸ್‌ವೆಲ್‌ (56 ರನ್‌) ಅರ್ಧಶತಕ ಹಾಗೂ ನಥನ್‌ ಕಲ್ಟರ್‌ ನೈಲ್‌ ಭರ್ಜರಿ ಬೌಲಿಂಗ್‌ ಪ್ರದರ್ಶನದಿಂದ ಭಾರತ ವಿರುದ್ಧ ಪ್ರವಾಸಿ ಆಸ್ಟ್ರೇಲಿಯ ಎರಡು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ರೋಚಕ 3 ವಿಕೆಟ್‌ ಗೆಲುವು ಸಾಧಿಸಿದೆ.

ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ಕೆ.ಎಲ್‌.ರಾಹುಲ್‌ (50 ರನ್‌) ಏಕಾಂಗಿ ಅರ್ಧಶತಕ ನೆರವಿನಿಂದ ನೂರು ರನ್‌ ಗಡಿ ದಾಟಿತು. ಈ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯ ಆರಂಭದಲ್ಲೇ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಬೌಲರ್‌ ಗಳಾದ ಜಸ್‌ಪ್ರೀತ್‌ ಬುಮ್ರಾ, ಯಜುವೇಂದ್ರ ಚಾಹಲ್‌ ಹಾಗೂ ಕೃಣಾಲ್‌ ಪಾಂಡ್ಯ ಆಸೀಸ್‌ ಬ್ಯಾಟ್ಸ್‌ಮನ್‌ಗಳಿಗೆ ಅಪಾಯಕಾರಿಯಾದರು. ಕೊನೆಯ ಎರಡು ಓವರ್‌ಗಳ ವೇಳೆ ಗೆಲುವು ಭಾರತದ ಕಡೆ ವಾಲಿತ್ತು. ಆಸೀಸ್‌ಗೆ 6 ಎಸೆತಗಳ ಮುಂದೆ 14 ರನ್‌ ಅವಶ್ಯಕತೆ ಇತ್ತು. ಈ ವೇಳೆ ಉಮೇಶ್‌ ಯಾದವ್‌ ಎರಡು ಬೌಂಡರಿ ಬಿಟ್ಟುಕೊಟ್ಟರು, ಇದರಿಂದಾಗಿ ಭಾರತ ಸೋಲು ಅನುಭವಿಸುವಂತಾಯಿತು. ಕೊನೆಯ ಹಂತದಲ್ಲಿಪ್ಯಾಟ್‌ ಕಮಿನ್ಸ್‌ (ಅಜೇಯ 7 ರನ್‌) ಹಾಗೂ ರಿಚರ್ಡ್‌ಸನ್‌ (ಅಜೇಯ 4 ರನ್‌) ಸಾಹಸಮಯ ಆಟ ಪ್ರದರ್ಶಿಸಿ ರೋಚಕ ಗೆಲುವಿನ ರೂವಾರಿಗಳಾದರು. ಆಸೀಸ್‌ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮುಂದಿನ ಪಂದ್ಯ ಗೆದ್ದರಷ್ಟೇ ಭಾರತ ಸರಣಿ ಸಮ ಸಾಧಿಸಲಿದೆ.

ಭಾರತೀಯರ ರನ್‌ ಬರಗಾಲ: ಭಾರೀ ನಿರೀಕ್ಷೆ ಮೂಡಿಸಿದ ಈ ಟಿ20 ಪಂದ್ಯದಲ್ಲಿ ಭಾರತದ ಬ್ಯಾಟಿಂಗ್‌ ನಿರೀಕ್ಷಿತ ಮಟ್ಟದಲ್ಲಿ ಕ್ಲಿಕ್‌ ಆಗಲಿಲ್ಲ. ಆರಂಭದ 10 ಓವರ್‌ಗಳಲ್ಲಿ ರನ್‌ ಹರಿದು ಬಂದರೂ ಕೊನೆಯ 10 ಓವರ್‌ಗಳಲ್ಲಿ ತೀವ್ರ ರನ್‌ ಬರಗಾಲ ಕಾಡಿತು.

ಮೊದಲ 10 ಓವರ್‌ ಮುಗಿದಾಗ ಭಾರತ 3 ವಿಕೆಟಿಗೆ 80 ರನ್‌ ಮಾಡಿತ್ತು. ಇದೇ ಲಯದಲ್ಲಿ ಸಾಗಿದರೆ 160 ರನ್ನಿಗೇನೂ ಕೊರತೆ ಇರಲಿಲ್ಲ. ಆದರೆ ದ್ವಿತೀಯಾರ್ಧದಲ್ಲಿ ಆಸೀಸ್‌ ಬೌಲಿಂಗ್‌ ದಾಳಿ ತೀವ್ರ ಗೊಂಡಿತು; ಭಾರತದ ಬ್ಯಾಟಿಂಗ್‌ ಕುಂಠಿತಗೊಂಡಿತು. ಈ ಅವಧಿಯಲ್ಲಿ ಅನುಭವಿ ಧೋನಿ ಕ್ರೀಸಿನಲ್ಲಿದ್ದರೂ ರನ್‌ ಹರಿದು ಬರಲಿಲ್ಲ. ಅಂತಿಮ 10 ಓವರ್‌ಗಳಲ್ಲಿ ಭಾರತ ಗಳಿಸಿದ್ದು 4 ವಿಕೆಟಿಗೆ 46 ರನ್‌ ಮಾತ್ರ!

ರಾಹುಲ್‌ ಅರ್ಧಶತಕ: ರೋಹಿತ್‌ ಶರ್ಮ ಕೇವಲ 5 ರನ್‌ ಮಾಡಿ ನಿರ್ಗಮಿಸಿದರೂ ಕೆ.ಎಲ್‌. ರಾಹುಲ್‌ ಒಂದೆಡೆ ಕ್ರೀಸ್‌ ಆಕ್ರಮಿಸಿಕೊಂಡು ಮುನ್ನುಗ್ಗತೊಡಗಿದರು. ಸಣ್ಣದೊಂದು ನಿಷೇಧದ ಬಳಿಕ ಟೀಮ್‌ ಇಂಡಿಯಾಕ್ಕೆ ಮರಳಿದ ಅವರು ಭರ್ತಿ 50 ರನ್‌ ಹೊಡೆದರು. ಇದು 26ನೇ ಟಿ20 ಪಂದ್ಯದಲ್ಲಿ ರಾಹುಲ್‌ ಬಾರಿಸಿದ 5ನೇ ಅರ್ಧಶತಕ, 36 ಎಸೆತ ಎದುರಿಸಿದ ರಾಹುಲ್‌ 6 ಬೌಂಡರಿ ಮತ್ತು ಒಂದು ಸಿಕ್ಸರ್‌ ಬಾರಿಸಿ ರಂಜಿಸಿದರು. ರಾಹುಲ್‌ 13ನೇ ಓವರ್‌ ತನಕ ಕ್ರೀಸಿನಲ್ಲಿದ್ದರು.

ಈ ನಡುವೆ ನಾಯಕ ವಿರಾಟ್‌ ಕೊಹ್ಲಿ ಭರವಸೆಯ ಆಟದ ಸೂಚನೆಯಿತ್ತರು. ಆದರೆ 24ರ ಆಚೆ ಅವರಿಗೆ ಇನ್ನಿಂಗ್ಸ್‌ ಬೆಳೆಸಲಾಗಲಿಲ್ಲ. 17 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಒಳಗೊಂಡಿತ್ತು. ರಿಷಭ್‌ ಪಂತ್‌ ಮೂರಕ್ಕೆ ರನೌಟಾದುದರಿಂದ ಭಾರತದ ರನ್‌ಗತಿಗೆ ಬ್ರೇಕ್‌ ಬಿತ್ತು. ದಿನೇಶ್‌ ಕಾರ್ತಿಕ್‌ ಮತ್ತು ಕೃಣಾಲ್‌ ಪಾಂಡ್ಯ ಅವರ ಕ್ಷಿಪ್ರ ಪತನ ಕೂಡ ಟೀಮ್‌ ಇಂಡಿಯಾಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿತು. ಇವರಿಬ್ಬರೂ ಒಂದೇ ರನ್ನಿಗೆ ಆಟ ಮುಗಿಸಿದರು.

ಈ ಅವಧಿಯಲ್ಲಿ ಕ್ರೀಸಿನಲ್ಲಿದ್ದ ಮಹೇಂದ್ರ ಸಿಂಗ್‌ ಧೋನಿ ಅವರಿಗೆ ಬಿರುಸಿನ ಆಟಕ್ಕೆ ಕುದುರಿಕೊಳ್ಳಲಾಗಲಿಲ್ಲ. 37 ಎಸೆತಗಳ ಅಜೇಯ ಬ್ಯಾಟಿಂಗಿನಲ್ಲಿ ಧೋನಿಗೆ ಗಳಿಸಲು ಸಾಧ್ಯವಾದದ್ದು 29 ರನ್‌ ಮಾತ್ರ. ಇದರಲ್ಲಿ ಒಂದು ಸಿಕ್ಸರ್‌ ಮಾತ್ರ ಸೇರಿತ್ತು. ಇದು ಸಿಡಿದದ್ದು ಕೊನೆಯ ಓವರಿನಲ್ಲಿ. ವೇಗಿ ನಥನ್‌ ಕೋಲ್ಟರ್‌ ನೈಲ್‌ 26 ರನ್ನಿತ್ತು 3 ವಿಕೆಟ್‌ ಉರುಳಿಸಿ ಭಾರತಕ್ಕೆ ಕಡಿವಾಣ ಹಾಕಿದರು.

ಸರಣಿಯ 2ನೇ ಪಂದ್ಯ ಬುಧವಾರ ಬೆಂಗಳೂರಿನಲ್ಲಿ ನಡೆಯಲಿದೆ.

ಭಾರತ 20 ಓವರ್‌ಗೆ 126/7
ಆಸೀಸ್‌ 20 ಓವರ್‌ಗೆ 127/7

ಟಾಪ್ ನ್ಯೂಸ್

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

13-jp-hegde

Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ

12-mng

Neha ಹತ್ಯೆ ಪ್ರಕರಣ; ಎನ್‌ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್‌ಪಿ ಆಗ್ರಹ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL; To win the RCB Cup first….: What did Robin Uthappa say?

IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

15-fusion

Black Saree: ಕಪ್ಪು ಬಣ್ಣಕ್ಕೂ ನನಗೂ ಬಿಡಿಸಲಾರದ ನಂಟು

1-adsad

Gadag; ನಾಲ್ವರ ಬರ್ಬರ ಹತ್ಯೆ ಐವರು ದುಷ್ಕರ್ಮಿಗಳು ಮಾಡಿರುವ ಶಂಕೆ

14-fusion

Karataka Damanaka: ಭಟ್ರಾ ಗರಡಿಲಿ ತಯಾರಾದ ಕರಟಕ ದಮನಕ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.