ರಾಹುಲ್‌-ಕೊಹ್ಲಿ ಶತಕದ ಜತೆಯಾಟ; 6 ವಿಕೆಟ್‌ಗಳಿಂದ ಗೆದ್ದ ಭಾರತ


Team Udayavani, Dec 6, 2019, 10:33 PM IST

PTI12_6_2019_000327B

ಹೈದರಾಬಾದ್‌: ವೆಸ್ಟ್‌ ಇಂಡೀಸಿನ ಬೃಹತ್‌ ಮೊತ್ತಕ್ಕೆ ಬೆದರದೇ ಮುನ್ನುಗ್ಗಿ ಹೋದ ಭಾರತ, ಹೈದರಾಬಾದ್‌ ಟಿ20 ಪಂದ್ಯವನ್ನು 6 ವಿಕೆಟ್‌ಗಳಿಂದ ಗೆದ್ದು ಮೆರೆದಾಡಿದೆ.

ಕೆ.ಎಲ್‌. ರಾಹುಲ್‌, ವಿರಾಟ್‌ ಕೊಹ್ಲಿ ಅವರ ಶತಕದ ಜತೆಯಾಟ ಟೀಮ್‌ ಇಂಡಿಯಾ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತು.

ಬ್ಯಾಟಿಂಗಿಗೆ ಇಳಿಸಲ್ಪಟ್ಟ ವೆಸ್ಟ್‌ ಇಂಡೀಸ್‌ 5 ವಿಕೆಟಿಗೆ 207 ರನ್‌ ಪೇರಿಸಿದರೆ, ಭಾರತ 18.4 ಓವರ್‌ಗಳಲ್ಲಿ ಕೇವಲ 4 ವಿಕೆಟಿಗೆ 209 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು.

ಚೇಸಿಂಗ್‌ ವೇಳೆ ಭಾರತ ರೋಹಿತ್‌ ಶರ್ಮ (8) ಅವರನ್ನು ಬೇಗನೇ ಕಳೆದುಕೊಂಡಿತು. ಆದರೆ ಅನಂತರ ಯಾವುದೇ ಹಂತದಲ್ಲಿ ಒತ್ತಡಕ್ಕೆ ಸಿಲುಕಲಿಲ್ಲ. ಆಕ್ರಮಣಕಾರಿ ಬ್ಯಾಟಿಂಗ್‌ ನಡೆಸಿ ಬಹಳ ಬೇಗನೇ ದಡ ಮುಟ್ಟುವಲ್ಲಿ ಯಶಸ್ಸು ಕಂಡಿತು.

ಆರಂಭಕಾರ ರಾಹುಲ್‌-ನಾಯಕ ಕೊಹ್ಲಿ ಸೇರಿಕೊಂಡು ಕೆರಿಬಿಯನ್‌ ಬೌಲರ್‌ಗಳ ಮೇಲೆರಗಿ ಹೋದರು. 2ನೇ ವಿಕೆಟಿಗೆ 10.1 ಓವರ್‌ಗಳಿಂದ ಭರ್ತಿ 100 ರನ್‌ ಪೇರಿಸಿ ಗೆಲುವಿಗೆ ಮುನ್ನುಡಿ ಬರೆದರು. ಶಿಖರ್‌ ಧವನ್‌ ಸ್ಥಾನವನ್ನು ಯಶಸ್ವಿಯಾಗಿ ತುಂಬಿದ ರಾಹುಲ್‌ 40 ಎಸೆತಗಳಿಂದ 62 ರನ್‌ ಬಾರಿಸಿದರು (5 ಸಿಕ್ಸರ್‌, 4 ಬೌಂಡರಿ). ವಿರಾಟ್‌ ಕೊಹ್ಲಿ ಕೊಡುಗೆ ಅಜೇಯ 94 ರನ್‌. ಸರಿಯಾಗಿ 50 ಎಸೆತ ಎದುರಿಸಿದ ಕೊಹ್ಲಿ 6 ಸಿಕ್ಸರ್‌, 6 ಬೌಂಡರಿ ಸಿಡಿಸುವ ಮೂಲಕ ಭರಪೂರ ರಂಜನೆ ಒದಗಿಸಿದರು.

ಮೊದಲ ಎಸೆತವನ್ನೇ ಸಿಕ್ಸರ್‌ಗೆ ಅಟ್ಟಿದ ರಿಷಭ್‌ ಪಂತ್‌ ಗಳಿಕೆ 9 ಎಸೆತಗಳಿಂದ 18 ರನ್‌. ಅವರು ಕೊಹ್ಲಿಯೊಂದಿಗೆ 48 ರನ್‌ ಜತೆಯಾಟದಲ್ಲಿ ಪಾಲ್ಗೊಂಡರು. ಆದರೆ ಶ್ರೇಯಸ್‌ ಅಯ್ಯರ್‌ ಹೆಚ್ಚು ಹೊತ್ತು ನಿಲ್ಲಲಿಲ್ಲ. ಕೇವಲ 4 ರನ್‌ ಮಾಡಿ ಪೊಲಾರ್ಡ್‌ಗೆ ರಿಟರ್ನ್ ಕ್ಯಾಚ್‌ ನೀಡಿ ನಿರ್ಗಮಿಸಿದರು.

ಮೊದಲು ಬ್ಯಾಟಿಂಗಿಗೆ ಇಳಿಸಲ್ಪಟ್ಟ ವೆಸ್ಟ್‌ ಇಂಡೀಸ್‌ ಸ್ಫೋಟಕ ಆಟವಾಡಿ ಇನ್ನೂರರ ಗಡಿ ದಾಟುವಲ್ಲಿ ಯಶಸ್ವಿಯಾಯಿತು. 207ರ ತನಕ ಬೆಳೆಯಿತು. ಭಾರತದ ಪಂದ್ಯದಲ್ಲಿ ಭಾರತದೆದುರು ವಿಂಡೀಸ್‌ ಇನ್ನೂರರ ಗಡಿ ದಾಟಿದ ಮೊದಲ ನಿದರ್ಶನ ಇದಾಗಿದೆ.

ಇದು ಭಾರತದ ವಿರುದ್ಧ ತವರಿನ ಪಂದ್ಯದಲ್ಲಿ ದಾಖಲಾದ 2ನೇ ಅತ್ಯಧಿಕ ಮೊತ್ತ. 2009ರ ನಾಗ್ಪುರ ಪಂದ್ಯದಲ್ಲಿ ಶ್ರೀಲಂಕಾ 215 ರನ್‌ ಪೇರಿಸಿದ್ದು ದಾಖಲೆ. ಒಟ್ಟಾರೆ ಭಾತರದೆದುರು ಭಾರತದಲ್ಲಿ ದಾಖಲಾದ 5ನೇ 200 ಪ್ಲಸ್‌ ಮೊತ್ತ ಇದಾಗಿದೆ.

ವೆಸ್ಟ್‌ ಇಂಡೀಸಿನ ಈ ಸವಾಲಿನ ಮೊತ್ತಕ್ಕೆ ಆರಂಭಕಾರ ಲೆಂಡ್ಲ್ ಸಿಮನ್ಸ್‌ ಹೊರತುಪಡಿಸಿ ಉಳಿದವರೆಲ್ಲ ಕಾರಣರಾದರು. ಮಧ್ಯಮ ಕ್ರಮಾಂಕದಲ್ಲಿ ಜತೆಗೂಡಿದ ಶಿಮ್ರನ್‌ ಹೆಟ್‌ಮೈರ್‌ ಮತ್ತು ನಾಯಕ ಕೈರನ್‌ ಪೊಲಾರ್ಡ್‌ ಜೋಡಿಯ ಬಿರುಸಿನ ಆಟಕ್ಕೆ ಟೀಮ್‌ ಇಂಡಿಯಾದ ಬೌಲಿಂಗ್‌ ಸಂಪೂರ್ಣವಾಗಿ ದಿಕ್ಕು ತಪ್ಪಿತು. ಇವರಿಬ್ಬರು ಭರ್ತಿ 7 ಓವರ್‌ಗಳಿಂದ ಹತ್ತರ ಸರಾಸರಿಯಲ್ಲಿ ರನ್‌ ಪೇರಿಸುತ್ತ 71 ರನ್‌ ಪೇರಿಸಿದರು.

“ಹಿಟ್‌’ ಪ್ರದರ್ಶನ ನೀಡಿದ ಹೆಟ್‌ಮೈರ್‌ 41 ಎಸೆತಗಳಿಂದ 56 ರನ್‌ ಸೂರೆಗೈದರು. ಸಿಡಿಸಿದ್ದು 4 ಸಿಕ್ಸರ್‌ ಮತ್ತು 2 ಬೌಂಡರಿ. ಪೊಲಾರ್ಡ್‌ ಕೇವಲ 19 ಎಸೆತ ಎದುರಿಸಿ 37 ರನ್‌ ಚಚ್ಚಿದರು. ಇದರಲ್ಲಿ 4 ಸಿಕ್ಸರ್‌, ಒಂದು ಬೌಂಡರಿ ಸೇರಿತ್ತು. ಇವರಿಬ್ಬರನ್ನೂ ಯಜುವೇಂದ್ರ ಚಹಲ್‌ ಒಂದೇ ಓವರಿನಲ್ಲಿ ಪೆವಿಲಿಯನ್ನಿಗೆ ಅಟ್ಟಿದರು.

ಅನಂತರ ಜಾಸನ್‌ ಹೋಲ್ಡರ್‌-ದಿನೇಶ್‌ ರಾಮದಿನ್‌ ಸೇರಿಕೊಂಡು 2.3 ಓವರ್‌ಗಳಿಂದ 34 ರನ್‌ ಬಾರಿಸಿ ಮೊತ್ತವನ್ನು ಇನ್ನೂರರಾಚೆ ವಿಸ್ತರಿಸುವಲ್ಲಿ ಯಶಸ್ವಿಯಾದರು.

ಆರಂಭಕಾರ ಲೆಂಡ್ಲ್ ಸಿಮನ್ಸ್‌ (2) ಬೇಗನೇ ಔಟಾದ ಬಳಿಕ ಎವಿನ್‌ ಲೆವಿಸ್‌-ಬ್ರ್ಯಾಂಡನ್‌ ಕಿಂಗ್‌ ಸೇರಿಕೊಂಡು ತಂಡಕ್ಕೆ ರಕ್ಷಣೆ ಒದಗಿಸಿದರು. 2ನೇ ವಿಕೆಟ್‌ ಜತೆಯಾಟದಲ್ಲಿ 51 ರನ್‌ ಒಟ್ಟುಗೂಡಿತು. ಲೆವಿಸ್‌ 17 ಎಸೆತಗಳಿಂದ 40 ರನ್‌ (3 ಬೌಂಡರಿ, 4 ಸಿಕ್ಸರ್‌), ಕಿಂಗ್‌ 23 ಎಸೆತಗಳಿಂದ 31 ರನ್‌ (3 ಬೌಂಡರಿ, 1 ಸಿಕ್ಸರ್‌) ಬಾರಿಸಿ ಮೆರೆದರು.

ಬಾಂಗ್ಲಾದೇಶ ವಿರುದ್ಧದ ಅಂತಿಮ ಪಂದ್ಯದಲ್ಲಿ ಅಮೋಘ ಬೌಲಿಂಗ್‌ ಪ್ರದರ್ಶಿಸಿದ್ದ ದೀಪಕ್‌ ಚಹರ್‌ ಇಲ್ಲಿ ಒಂದು ವಿಕೆಟಿಗೆ 56 ರನ್‌ ನೀಡಿದರು. ಇದು ಭಾರತದ ಟಿ20 ಪಂದ್ಯದ 3ನೇ ದುಬಾರಿ ಸ್ಪೆಲ್‌ ಆಗಿದೆ.

ಟಾಪ್ ನ್ಯೂಸ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Mangaluru; ಪೆಟ್ರೋಲ್‌ ಬದಲು ಡೀಸೆಲ್‌ ತುಂಬಿಸಿದ ಆರೋಪ: ಕೋರ್ಟ್‌ಗೆ ಮೊರೆ

Mangaluru; ಪೆಟ್ರೋಲ್‌ ಬದಲು ಡೀಸೆಲ್‌ ತುಂಬಿಸಿದ ಆರೋಪ: ಕೋರ್ಟ್‌ಗೆ ಮೊರೆ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.