ಟಿ20 ಆಟಗಾರರೂ ಬಿಸಿಸಿಐ ಒಪ್ಪಂದ ವ್ಯಾಪ್ತಿಗೆ
ಕನಿಷ್ಠ 10 ಪಂದ್ಯಗಳನ್ನಾಡಿರುವ ಆಟಗಾರರಿಗೆ ಮಂಡಳಿ ಸೌಲಭ್ಯ
Team Udayavani, Nov 20, 2020, 10:35 PM IST
ಹೊಸದಿಲ್ಲಿ: ಬಿಸಿಸಿಐ ತನ್ನ ವಾರ್ಷಿಕ ಒಪ್ಪಂದ ಪದ್ಧತಿಯಲ್ಲಿ ಬದಲಾವಣೆ ತರಲು ಮುಂದಾಗಿದ್ದು, ಇನ್ನು ಮುಂದೆ ಕನಿಷ್ಠ 10 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಆಟಗಾರರೂ ಈ ವ್ಯಾಪ್ತಿಗೆ ಬರಲಿದ್ದಾರೆ.
ಇದುವರೆಗೆ ಕೇವಲ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡಿದವರಿಗೆ ಮಾತ್ರ ಈ ಸೌಲಭ್ಯ ಸಿಗುತ್ತಿತ್ತು. ಈ ಹಿಂದೆ ಸುಪ್ರೀಂಕೋರ್ಟ್ ನೇಮಕ ಮಾಡಿದ್ದ ಆಡಳಿತಾಧಿಕಾರಿಗಳ ಅವಧಿಯ ವೇಳೆ, ಟಿ20 ಆಟಗಾರರನ್ನು ಒಪ್ಪಂದಕ್ಕೆ ಪರಿಗಣಿಸಲು ನಿರಾಕರಿಸಲಾಗಿತ್ತು.
ಇದಕ್ಕೂ ಹಿಂದೆ, ಆಟಗಾರರನ್ನು ಒಪ್ಪಂದಕ್ಕೆ ಪರಿಗಣಿಸುವಾಗ ಬಿಸಿಸಿಐ ಕೆಲವೊಂದು ನಿಯ ಮಗಳನ್ನು ರೂಪಿಸಿತ್ತು. ಅದರಂತೆ, ಒಂದು ಪಂದ್ಯ ವನ್ನಾಡಿದರೂ ಅವರು ಒಪ್ಪಂದ ವ್ಯಾಪ್ತಿಗೆ ಒಳಪಡುತ್ತಿದ್ದರು. ಆದರೆ ಸುಪ್ರೀಂ ನೇಮಿಸಿದ ಆಡಳಿತಾಧಿಕಾರಿಗಳ ಅವಧಿಯಲ್ಲಿ ಕೆಲವು ಬದಲಾವಣೆ ಮಾಡಲಾಯಿತು. ಈ ಪ್ರಕಾರ, ಕನಿಷ್ಠ 3 ಟೆಸ್ಟ್ ಮತ್ತು 7 ಏಕದಿನ ಪಂದ್ಯಗಳನ್ನು ಆಡಿದ ಆಟಗಾರರಿಗೆ ಮಾತ್ರ ಬಿಸಿಸಿಐನ ಕಾಂಟ್ರ್ಯಾಕ್ಟ್ ನೀಡಲಾಗುತ್ತಿತ್ತು.
ಒಪ್ಪಂದ ನಿಯಮ ಬದಲು
ಈಗ ಈ ಒಪ್ಪಂದ ಪದ್ಧತಿಯಲ್ಲಿ ಬದಲಾವಣೆ ತರಲು ಮುಂದಾಗಿದೆ. ಅದರಂತೆ, ಕಮಿಷ್ಠ 10 ಟಿ20 ಪಂದ್ಯಗಳನ್ನು ಆಡಿರುವ ಆಟಗಾರನನ್ನೂ ಈ ವ್ಯಾಪ್ತಿಗೆ ಸೇರಿಸಿಕೊಳ್ಳಲಾಗುತ್ತದೆ. ಟಿ20 ಸ್ಪೆಷಲಿಸ್ಟ್ ಆಟಗಾರನೊಬ್ಬ ಬಿಸಿಸಿಐ ಒಪ್ಪಂದ ವ್ಯಾಪ್ತಿಯಿಂದ ಹೊರಗುಳಿಯಬಾರದು ಎಂಬ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿದೆ.
15 ವರ್ಷವಾದರಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್
ದುಬಾೖ: ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನಾಡಲು ಐಸಿಸಿ ವಯೋಮಿತಿ ನಿಗದಿ ಮಾಡಿದೆ. ಇದರಂತೆ, ಇನ್ನು ಮುಂದೆ ಕ್ರಿಕೆಟಿಗನಿಗೆ ಕನಿಷ್ಠ 15 ವರ್ಷವಾಗಿದ್ದರೆ ಮಾತ್ರ ಆಡಲು ಅವಕಾಶವಿದೆ. ಇದು ದ್ವಿಪಕ್ಷೀಯ ಸರಣಿ, ಅಂಡರ್-19 ಪಂದ್ಯಗಳಿಗೂ ಅನ್ವಯಿಸಲಿದೆ. ಮಹಿಳೆಯರಿಗೂ ಇದೇ ನಿಯಮ ಅನ್ವಯವಾಗಲಿದೆ.
ವಿಶೇಷ ಸಂದರ್ಭಗಳಲ್ಲಿ ಐಸಿಸಿ ಅನುಮತಿ ಪಡೆದು, 15ಕ್ಕಿಂತ ಕಡಿಮೆ ವಯಸ್ಸಿನವರನ್ನು ಆಡಿಸಲು ಅವಕಾಶ ಪಡೆಯಬಹುದಾಗಿದೆ. ಆದರೆ ಆ ವೇಳೆ ಆಟಗಾರನ ಮಾನಸಿಕ ಬೆಳವಣಿಗೆ, ಅಂತಾರಾಷ್ಟ್ರೀಯ ಕ್ರಿಕೆಟಿಗೆ ಸ್ಪಂದಿಸುವ ಸಾಮರ್ಥ್ಯ ಮೊದಲಾದವನ್ನು ಪರಿಶೀಲಿಸಿ ನಿರ್ಧರಿಸಲಾಗುತ್ತದೆ.
ಸದ್ಯ ಪಾಕಿಸ್ಥಾನದ ಹಸನ್ ರಝ ಅತೀ ಕಡಿಮೆ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಹೆಗ್ಗಳಿಕೆ ಹೊಂದಿದ್ದಾರೆ. ಟೆಸ್ಟ್ ಕ್ರಿಕೆಟಿಗೆ ಪದಾರ್ಪಣೆ ಮಾಡುವಾಗ ಅವರ ವಯಸ್ಸು ಕೇವಲ 14 ವರ್ಷ, 227 ದಿನಗಳಾಗಿದ್ದವು. ಅನಂತರ ಅವರ ಜನನ ಪ್ರಮಾಣಪತ್ರದ ಬಗ್ಗೆ ಸಾಕಷ್ಟು ವಿವಾದಗಳು ಹುಟ್ಟಿಕೊಂಡಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’