ಟಿ20 ವಿಶ್ವಕಪ್‌: ನಿರ್ಗಮನ ಬಾಗಿಲಲ್ಲಿ ನಿಂತ ಭಾರತ


Team Udayavani, Oct 31, 2021, 11:02 PM IST

ಟಿ20 ವಿಶ್ವಕಪ್‌: ನಿರ್ಗಮನ ಬಾಗಿಲಲ್ಲಿ ನಿಂತ ಭಾರತ

ದುಬಾೖ: ನ್ಯೂಜಿಲ್ಯಾಂಡ್‌ ವಿರುದ್ಧವೂ ಶೋಚನೀಯ ಬ್ಯಾಟಿಂಗ್‌ ಮುಂದುವರಿಸಿದ ಭಾರತ ರವಿವಾರದ “ಕ್ವಾರ್ಟರ್‌ ಫೈನಲ್‌’ ಮಹತ್ವದ ಟಿ20 ವಿಶ್ವಕಪ್‌ ಪಂದ್ಯವನ್ನು 8 ವಿಕೆಟ್‌ಗಳಿಂದ ಕಳೆದುಕೊಂಡು ನಿರ್ಗಮನ ಬಾಗಿಲಿಗೆ ಬಂದು ನಿಂತಿತು.

ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ ಗಳಿಸಿದ್ದು 7 ವಿಕೆಟಿಗೆ ಕೇವಲ 110 ರನ್‌. ಇದು ಪಾಕಿಸ್ಥಾನದೆದುರಿನ ಬ್ಯಾಟಿಂಗಿ ಗಿಂತಲೂ ಕಳಪೆ ಆಟವಾಗಿತ್ತು. ಜವಾಬಿತ್ತ ನ್ಯೂಜಿಲ್ಯಾಂಡ್‌ 14.3 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 111 ರನ್‌ ಬಾರಿಸಿ ಖಾತೆ ತೆರೆಯಿತು; ನಾಕೌಟ್‌ ರೇಸ್‌ನಲ್ಲಿ ಉಳಿಯಿತು.ಆರಂಭಕಾರ ಡ್ಯಾರಿಲ್‌ ಮಿಚೆಲ್‌ 49, ನಾಯಕ ಕೇನ್‌ ವಿಲಿಯಮ್ಸನ್‌ ಅಜೇಯ 33 ರನ್‌ ಬಾರಿಸಿ ಕಿವೀಸ್‌ಗೆ ಸುಲಭ ಜಯ ತಂದಿತ್ತರು.

ಮತ್ತೆ ಕಳಪೆ ಬ್ಯಾಟಿಂಗ್‌
ಅಜೇಯ 26 ರನ್‌ ಮಾಡಿದ ರವೀಂದ್ರ ಜಡೇಜ ಅವರದೇ ಭಾರತದ ಸರದಿಯ ಅತ್ಯಧಿಕ ಗಳಿಕೆ. ಕೊನೆಯಲ್ಲಿ ಆಕ್ರಮಣಕಾರಿಯಾಗಿ ಆಡಿದ ಅವರು 19 ಎಸೆತ ಎದುರಿಸಿ 2 ಬೌಂಡರಿ, ಒಂದು ಸಿಕ್ಸರ್‌ ಹೊಡೆದರು. ಹೀಗಾಗಿ ತಂಡದ ಮೊತ್ತ ನೂರರ ಗಡಿ ದಾಟಿತು.

ಓಪನಿಂಗ್‌ ಬದಲಾವಣೆ
ಭಾರತದ ಓಪನಿಂಗ್‌ನಲ್ಲಿ ಮಹತ್ವದ ಬದಲಾವಣೆ ಯೊಂದು ಸಂಭವಿಸಿತು. ರೋಹಿತ್‌ ಶರ್ಮ ಬದಲು ಇಶಾನ್‌ ಕಿಶನ್‌ ಆಡಲಿಳಿದರು. ಆದರೆ ಈ ಪ್ರಯೋಗ ಯಶಸ್ಸು ಕಾಣಲಿಲ್ಲ. ಬೌಲ್ಟ್ ತಮ್ಮ ದ್ವಿತೀಯ ಓವರ್‌ನಲ್ಲಿ ಈ ವಿಕೆಟ್‌ ಹಾರಿಸಿದರು. ಇಶಾನ್‌ ಗಳಿಕೆ ಕೇವಲ 4 ರನ್‌.

ಒನ್‌ಡೌನ್‌ನಲ್ಲಿ ಬಂದ ರೋಹಿತ್‌ ಶರ್ಮ ಮೊದಲ ಎಸೆತದಲ್ಲೇ ಲೈಫ್ ಪಡೆದರು. ಸುಲಭದ ಕ್ಯಾಚ್‌ ಒಂದು ಆ್ಯಡಂ ಮಿಲೆ° ಕೈಯಿಂದ ಜಾರಿತು. ಸತತ ಎಸೆತಗಳಲ್ಲಿ ವಿಕೆಟ್‌ ಕೀಳುವ ಅವಕಾಶದಿಂದ ಬೌಲ್ಟ್ ವಂಚಿತರಾದರು.

ಇನ್ನೇನು ಪವರ್‌ ಪ್ಲೇ ಮುಗಿಯಿತು ಎನ್ನುವ ಹಂತದಲ್ಲಿ ಟಿಮ್‌ ಸೌಥಿ ದೊಡ್ಡ ಬೇಟೆಯಾಡಿದರು. ಮುನ್ನುಗ್ಗುವ ಸೂಚನೆ ನೀಡಿದ ರಾಹುಲ್‌ಗೆ ಪೆವಿಲಿಯನ್‌ ಹಾದಿ ತೋರಿಸಿದರು. ಸಿಕ್ಸರ್‌ ಬಾರಿಸಲು ಮುಂದಾಗಿದ್ದ ರಾಹುಲ್‌ ಬೌಂಡರಿ ಲೈನ್‌ನಲ್ಲಿದ್ದ ಮಿಚೆಲ್‌ ಕೈಗೆ ಕ್ಯಾಚ್‌ ಹೋಗುವುದನ್ನು ನೋಡಬೇಕಾಯಿತು. ರಾಹುಲ್‌ ಗಳಿಕೆ 3 ಬೌಂಡರಿಗಳನ್ನೊಳಗೊಂಡ 18 ರನ್‌. ಪವರ್‌ ಪ್ಲೇಯಲ್ಲಿ ಭಾರತದ ಸ್ಕೋರ್‌ ಎರಡಕ್ಕೆ ಕೇವಲ 35 ರನ್‌ ಆಗಿತ್ತು.

ಇದನ್ನೂ ಓದಿ:ಟಿ20 ವಿಶ್ವಕಪ್‌: ಅಫ್ಘಾನಿಸ್ಥಾನಗೆ ಗೆಲುವಿನ ವಿದಾಯ

ರೋಹಿತ್‌ ಶರ್ಮ 2013ರ ಬಳಿಕ ಓಪನಿಂಗ್‌ ಕ್ರಮಾಂಕದಿಂದ ಕೆಳಗಿಳಿದದ್ದು ಇದು 3ನೇ ಸಲ. ಹಿಂದಿನೆರಡು ಸಲ ಅವರ ಗಳಿಕೆ ಸೊನ್ನೆ ಮತ್ತು 60 ರನ್‌. ಇಲ್ಲಿ ಜೀವದಾನದ ಲಾಭವನ್ನೆತ್ತಲಾಗಲಿಲ್ಲ. ಲೈಫ್ ನೀಡಿದ ಮಿಲೆ° ಓವರ್‌ನಲ್ಲಿ ಬೌಂಡರಿ, ಸಿಕ್ಸರ್‌ ಬಾರಿಸಿದರೂ ಎಸೆತಕ್ಕೊಂದರಂತೆ 14 ರನ್‌ ಮಾಡಿ “ಬರ್ತ್‌ಡೇ ಬಾಯ್‌’ ಐಶ್‌ ಸೋಧಿಯ ಮೊದಲ ಓವರ್‌ನಲ್ಲೇ ಗಪ್ಟಿಲ್‌ಗೆ ಕ್ಯಾಚ್‌ ನೀಡಿ ವಾಪಸಾದರು. ಸೋಧಿ ಭಾರತದ ವಿರುದ್ಧ ಅತ್ಯಧಿಕ ವಿಕೆಟ್‌ ಉರುಳಿಸಿದ ದಾಖಲೆಯನ್ನು 18ಕ್ಕೆ ವಿಸ್ತರಿಸಿದರು.

10 ಓವರ್‌ ಮುಕ್ತಾಯಕ್ಕೆ ಭಾರತ 3 ವಿಕೆಟಿಗೆ ಕೇವಲ 48 ರನ್‌ ಮಾಡಿತ್ತು. ವಿರಾಟ್‌ ಕೊಹ್ಲಿ ಕೂಡ ನೆರವಿಗೆ ನಿಲ್ಲಲಿಲ್ಲ. 17 ಎಸೆತಗಳಿಂದ ಬರೀ 9 ರನ್‌ ಮಾಡಿ ಸೋಧಿ ಮೋಡಿಗೆ ಸಿಲುಕಿದರು. ಕವರ್‌ ಡ್ರೈವ್‌ ಮಾಡುವ ಕೊಹ್ಲಿ ಪ್ರಯತ್ನ ಫ‌ಲಿಸಲಿಲ್ಲ. ಟಾಪ್‌ ಎಜ್‌ ಆದ ಚೆಂಡು ಅತೀ ಎತ್ತರಕ್ಕೆ ನೆಗೆಯಿತು. ಅಲ್ಲಿ ಬೌಲ್ಟ್ ಹೊಂಚುಹಾಕಿ ಕುಳಿತ್ತಿದ್ದರು. 48ಕ್ಕೆ 4 ವಿಕೆಟ್‌ ಬಿತ್ತು.

ಸ್ಕೋರ್‌ 75ಕ್ಕೆ ಏರಿದಾಗ ಪಂತ್‌ ಕೂಡ ಆಟ ಮುಗಿಸಿ ದರು (19 ಎಸೆತ, 12 ರನ್‌). ಕೊಹ್ಲಿ ಮತ್ತು ಪಂತ್‌ ಒಟ್ಟು 36 ಎಸೆತ ಎದುರಿಸಿದರೂ ಒಂದೂ ಬೌಂಡರಿ ಬಾರಿಸಲಿಲ್ಲ. ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರೂ ಹಾರ್ದಿಕ್‌ ಪಾಂಡ್ಯ ಸಿಡಿದು ನಿಲ್ಲಲಿಲ್ಲ.

ಭಾರತದ ಬ್ಯಾಟಿಂಗ್‌ ಎಷ್ಟೊಂದು ನೀರಸವಾಗಿ ತ್ತೆಂದರೆ, 5.1 ಓವರ್‌ ಬಳಿಕ ಮತ್ತೂಂದು ಬೌಂಡರಿ ಕಾಣಲು 17ನೇ ಓವರ್‌ ತನಕ ಕಾಯಬೇಕಾಯಿತು!

ಇಶಾನ್‌, ಠಾಕೂರ್‌ ಸೇರ್ಪಡೆ
ನ್ಯೂಜಿಲ್ಯಾಂಡ್‌ ಎದುರಿನ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಎರಡು ಬದಲಾವಣೆ ಮಾಡಲಾಯಿತು. ಸೂರ್ಯಕುಮಾರ್‌ ಯಾದವ್‌ ಬದಲು ಇಶಾನ್‌ ಕಿಶನ್‌ ಅವಕಾಶ ಪಡೆದರೆ, ಫಾರ್ಮ್ನಲ್ಲಿಲ್ಲದ ಭುವನೇಶ್ವರ್‌ ಕುಮಾರ್‌ ಬದಲು ಶಾರ್ದೂಲ್ ಠಾಕೂರ್ ಬಂದರು. ಸೂರ್ಯಕುಮಾರ್‌ಗೆ ಬೆನ್ನುನೋವು ಎಂಬುದಾಗಿ ಕೊಹ್ಲಿ ಹೇಳಿದರು.

ಸ್ಕೋರ್‌ ಪಟ್ಟಿ
ಭಾರತ
ಕೆ. ಎಲ್‌ ರಾಹುಲ್‌ ಸಿ ಮಿಚೆಲ್‌ ಬಿ ಸೌಥಿ 18
ಇಶಾನ್‌ ಕಿಶನ್‌ ಸಿ ಮಿಚೆಲ್‌ ಬಿ ಬೌಲ್ಟ್ 4
ರೋಹಿತ್‌ ಶರ್ಮ ಸಿ ಗಪ್ಟಿಲ್‌ ಬಿ ಸೋಧಿ 14
ವಿರಾಟ್‌ ಕೊಹ್ಲಿ ಸಿ ಬೌಲ್ಟ್ ಬಿ ಸೋಧಿ 9
ರಿಷಭ್‌ ಪಂತ್‌ ಬಿ ಮಿಲೆ° 12
ಹಾರ್ದಿಕ್‌ ಪಾಂಡ್ಯ ಸಿ ಗಪ್ಟಿಲ್‌ ಬಿ ಬೌಲ್ಟ್ 23
ರವೀಂದ್ರ ಜಡೇಜ ಔಟಾಗದೆ 26
ಶಾರ್ದೂಲ್ ಠಾಕೂರ್ ಸಿ ಗಪ್ಟಿಲ್‌ ಬಿ ಬೌಲ್ಟ್ 0
ಮೊಹಮ್ಮದ್‌ ಶಮಿ ಔಟಾಗದೆ 0
ಇತರ 4
ಒಟ್ಟು (7 ವಿಕೆಟಿಗೆ) 110
ವಿಕೆಟ್‌ ಪತನ:1-11, 2-35, 3-40, 4-48, 5-70, 6-94, 7-94.
ಬೌಲಿಂಗ್‌;
ಟ್ರೆಂಟ್‌ ಬೌಲ್ಟ್ 4-0-20-3
ಟಿಮ್‌ ಸೌಥಿ 4-0-26-1
ಮಿಚೆಲ್‌ ಸ್ಯಾಂಟ್ನರ್‌ 4-0-15-0
ಆ್ಯಡಂ ಮಿಲೆ° 4-0-30-1
ಐಶ್‌ ಸೋಧಿ 4-0-17-2
ನ್ಯೂಜಿಲ್ಯಾಂಡ್‌
ಮಾರ್ಟಿನ್‌ ಗಪ್ಟಿಲ್‌ ಸಿ ಠಾಕೂರ್‌ ಬಿ ಬುಮ್ರಾ 20
ಡೇರಿಯಲ್‌ ಮಿಚೆಲ್‌ ಸಿ ರಾಹುಲ್‌ ಬಿ ಬುಮ್ರಾ 49
ವಿಲಿಯಮ್ಸನ್‌ ಔಟಾಗದೆ 33
ಡೇವನ್‌ ಕಾನ್ವೆ ಔಟಾಗದೆ 2
ಇತರ 7
ಒಟ್ಟು (14.3 ಓವರ್‌ಗಳಲ್ಲಿ 2 ವಿಕೆಟಿಗೆ) 111
ವಿಕೆಟ್‌ ಪತನ:1-24, 2-96.
ಬೌಲಿಂಗ್‌;
ವರುಣ್‌ ಚಕ್ರವರ್ತಿ 4-0-23-0
ಜಸ್‌ಪ್ರೀತ್‌ ಬುಮ್ರಾ 4-0-19-2
ರವೀಂದ್ರ ಜಡೇಜ 2-0-23-0
ಮೊಹಮ್ಮದ್‌ ಶಮಿ 1-0-11-0
ಶಾರ್ದೂಲ್ ಠಾಕೂರ್ 1.3-17-0
ಹಾರ್ದಿಕ್‌ ಪಾಂಡ್ಯ 2-0-17-0
ಪಂದ್ಯಶ್ರೇಷ್ಠ: ಐಶ್‌ ಸೋಧಿ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

26

ಅಮೆರಿಕ ತಂಡಕ್ಕೆ ಸ್ಟುವರ್ಟ್‌ ಕೋಚ್‌!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.