ವಿಜಯ್‌ ಹಜಾರೆ: ಕರ್ನಾಟಕಕ್ಕೆ ಪುನಃ ಆಘಾತವಿಕ್ಕಿದ ತಮಿಳುನಾಡು


Team Udayavani, Dec 22, 2021, 5:30 AM IST

ವಿಜಯ್‌ ಹಜಾರೆ: ಕರ್ನಾಟಕಕ್ಕೆ ಪುನಃ ಆಘಾತವಿಕ್ಕಿದ ತಮಿಳುನಾಡು

ಜೈಪುರ: ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಫೈನಲ್‌, ವಿಜಯ್‌ ಹಜಾರೆ ಲೀಗ್‌ ಮುಖಾಮುಖೀಯ ಬಳಿಕ ಇದೇ ಕೂಟದ ಕ್ವಾರ್ಟರ್‌ ಫೈನಲ್‌ನಲ್ಲೂ ತಮಿಳುನಾಡಿಗೆ ಶರಣಾಗುವ ಮೂಲಕ ಕರ್ನಾಟಕ ಕೂಟದಿಂದ ಹೊರಬಿದ್ದಿದೆ. ಮಂಗಳವಾರದ ಈ ನಾಕೌಟ್‌ ಪಂದ್ಯದಲ್ಲಿ ಕರ್ನಾಟಕ ಅನುಭವಿಸಿದ್ದು 151 ರನ್ನುಗಳ ಆಘಾತಕಾರಿ ಸೋಲು!

ತಮಿಳುನಾಡಿಗೆ ಮೊದಲು ಬ್ಯಾಟಿಂಗ್‌ ಬಿಟ್ಟುಕೊಟ್ಟ ಕರ್ನಾಟಕ ಇದರಿಂದ ಯಾವ ಪ್ರಯೋಜನವನ್ನೂ ಪಡೆಯಲಾಗಲಿಲ್ಲ. ಧಾರಾಳ ರನ್‌ ಬಿಟ್ಟುಕೊಟ್ಟ ಬಳಿಕ ಬ್ಯಾಟಿಂಗ್‌ ಹೋರಾಟವನ್ನೇ ಮರೆತು ಮಂಡಿಯೂರಿತು.
ನಾಯಕ ಎನ್‌. ಜಗದೀಶನ್‌ ಅವರ ಶತಕ (102), ಸಾಯಿ ಕಿಶೋರ್‌ (61) ಮತ್ತು ಶಾರೂಖ್‌ ಖಾನ್‌ (ಅಜೇಯ 79) ಅವರ ಸ್ಫೋಟಕ ಆಟದ ನೆರವಿನಿಂದ ತಮಿಳುನಾಡು 8 ವಿಕೆಟಿಗೆ 354 ರನ್‌ ರಾಶಿ ಹಾಕಿತು. ಈ ಮೊತ್ತವನ್ನು ಕಂಡೇ ದಿಗಿಲುಗೊಂಡ ಮನೀಷ್‌ ಪಾಂಡೆ ಬಳಗ 39 ಓವರ್‌ಗಳಲ್ಲಿ 203 ರನ್ನಿಗೆ ಸರ್ವಪತನ ಕಂಡಿತು.

43 ರನ್‌ ಮಾಡಿದ ಎಸ್‌. ಶರತ್‌ ಅವರದೇ ಕರ್ನಾಟಕ ಸರದಿಯ ಸರ್ವಾಧಿಕ ವೈಯಕ್ತಿಕ ಗಳಿಕೆ. ದೇವದತ್ತ ಪಡಿಕ್ಕಲ್‌ ಸೊನ್ನೆ ಸುತ್ತಿದರೆ, ನಾಯಕ ಪಾಂಡೆ 9 ರನ್ನಿಗೆ ಆಟ ಮುಗಿಸಿದರು. ಆರ್‌. ಸಿಲಂಬರಸನ್‌ 4, ವಾಷಿಂಗ್ಟನ್‌ ಸುಂದರ್‌ 3 ವಿಕೆಟ್‌ ಉಡಾಯಿಸಿ ಕರ್ನಾಟಕವನ್ನು ಕಾಡಿದರು.

ಜಗದೀಶನ್‌ 102
ಆರಂಭಕಾರ ಜಗದೀಶನ್‌ 101 ಎಸೆತಗಳಿಂದ 102 ರನ್‌ ಬಾರಿಸಿದರು (9 ಬೌಂಡರಿ, 1 ಸಿಕ್ಸರ್‌). ಅವರು ಸಾಯಿ ಕಿಶೋರ್‌ ಜತೆಗೂಡಿ ದ್ವಿತೀಯ ವಿಕೆಟಿಗೆ 147 ರನ್‌ ರಾಶಿ ಹಾಕಿದರು. ಶಾರೂಖ್‌ ಖಾನ್‌ ಮತ್ತೂಮ್ಮೆ ಕಾಡಿದರು. ಅವರ ಅಜೇಯ 79 ರನ್‌ ಕೇವಲ 39 ಎಸೆತಗಳಿಂದ ದಾಖಲಾಯಿತು. ಸಿಡಿಸಿದ್ದು 6 ಸಿಕ್ಸರ್‌ ಮತ್ತು 7 ಬೌಂಡರಿ. ದಿನೇಶ್‌ ಕಾರ್ತಿಕ್‌ 44 ರನ್‌ ಕೊಡುಗೆ ಸಲ್ಲಿಸಿದರು.

ಸಂಕ್ಷಿಪ್ತ ಸ್ಕೋರ್‌
ತಮಿಳುನಾಡು-8 ವಿಕೆಟಿಗೆ 354 (ಜಗದೀಶನ್‌ 102, ಶಾರೂಖ್‌ ಔಟಾಗದೆ 79, ಸಾಯಿ ಕಿಶೋರ್‌ 61, ದಿನೇಶ್‌ ಕಾರ್ತಿಕ್‌ 44, ದುಬೆ 67ಕ್ಕೆ 3, ಪ್ರಸಿದ್ಧ್ ಕೃಷ್ಣ 57ಕ್ಕೆ 2). ಕರ್ನಾಟಕ-39 ಓವರ್‌ಗಳಲ್ಲಿ 203 (ಶರತ್‌ 43, ಅಭಿನವ್‌ 34, ಸಿದ್ಧಾರ್ಥ್ 29, ದುಬೆ 26, ಕದಂ 24, ಸಿಲಂಬರಸನ್‌ 36ಕ್ಕೆ 4, ವಾಷಿಂಗ್ಟನ್‌ 43ಕ್ಕೆ 3).

ಇದನ್ನೂ ಓದಿ:ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ನತ್ತ ದ್ರಾವಿಡ್‌ ವಿಶೇಷ ಗಮನ

ಹಿಮಾಚಲಕ್ಕೆ ನಡುಗಿದ ಯುಪಿ
ದಿನದ ಇನ್ನೊಂದು ಪಂದ್ಯದಲ್ಲಿ ಉತ್ತರ ಪ್ರದೇಶವನ್ನು 5 ವಿಕೆಟ್‌ಗಳಿಂದ ಮಣಿಸಿದ ಹಿಮಾಚಲ ಪ್ರದೇಶ ಸೆಮಿಫೈನಲ್‌ ಪ್ರವೇಶಿಸಿದೆ.

ಉತ್ತರ ಪ್ರದೇಶ 9 ವಿಕೆಟಿಗೆ ಕೇವಲ 207 ರನ್‌ ಗಳಿಸಿದರೆ, ಹಿಮಾಚಲ ಪ್ರದೇಶ 45.3 ಓವರ್‌ಗಳಲ್ಲಿ 5 ವಿಕೆಟಿಗೆ 208 ರನ್‌ ಮಾಡಿತು.

ಚೇಸಿಂಗ್‌ ವೇಳೆ ಆರಂಭಕಾರ ಪ್ರಶಾಂತ್‌ ಚೋಪ್ರಾ ಕೇವಲ ಒಂದು ರನ್ನಿನಿಂದ ಶತಕ ತಪ್ಪಿಸಿಕೊಂಡರು. ನಿಖೀಲ್‌ ಗಂಗಾr 58 ರನ್‌ ಹೊಡೆದರು.

ಯುಪಿ ಪರ ಕೆಳ ಹಂತದ ಆಟಗಾರರಾದ ರಿಂಕು ಸಿಂಗ್‌ (76) ಮತ್ತು ಭುವನೇಶ್ವರ್‌ ಕುಮಾರ್‌ (46) ಸೇರಿಕೊಂಡು ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು.

ಸಂಕ್ಷಿಪ್ತ ಸ್ಕೋರ್‌: ಉತ್ತರ ಪ್ರದೇಶ-9 ವಿಕೆಟಿಗೆ 207 (ರಿಂಕು ಸಿಂಗ್‌ 76, ಭುವನೇಶ್ವರ್‌ 46, ಆಕಾಶ್‌ದೀಪ್‌ 32, ಗಲೇಟಿಯಾ 19ಕ್ಕೆ 3, ಸಿದ್ಧಾರ್ಥ್ ಶರ್ಮ 27ಕ್ಕೆ 2, ಪಂಕಜ್‌ ಜೈಸ್ವಾಲ್‌ 43ಕ್ಕೆ 2). ಹಿಮಾಚಲ ಪ್ರದೇಶ-45.3 ಓವರ್‌ಗಳಲ್ಲಿ 5 ವಿಕೆಟಿಗೆ 208 (ಪ್ರಶಾಂತ್‌ ಚೋಪ್ರಾ 99, ನಿಖೀಲ್‌ ಗಂಗಾr 58, ಶಿವಂ ಮಾವಿ 34ಕ್ಕೆ 3, ಅಂಕಿತ್‌ ರಜಪೂತ್‌ 52ಕ್ಕೆ 2).

ಟಾಪ್ ನ್ಯೂಸ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Mangaluru; ಪೆಟ್ರೋಲ್‌ ಬದಲು ಡೀಸೆಲ್‌ ತುಂಬಿಸಿದ ಆರೋಪ: ಕೋರ್ಟ್‌ಗೆ ಮೊರೆ

Mangaluru; ಪೆಟ್ರೋಲ್‌ ಬದಲು ಡೀಸೆಲ್‌ ತುಂಬಿಸಿದ ಆರೋಪ: ಕೋರ್ಟ್‌ಗೆ ಮೊರೆ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.