ಲಾರ್ಡ್ಸ್‌ ಗೆಲುವು ಯಾವತ್ತೂ ಸ್ಪೆಷಲ್‌!


Team Udayavani, Aug 18, 2021, 6:45 AM IST

 ಲಾರ್ಡ್ಸ್‌ ಗೆಲುವು ಯಾವತ್ತೂ ಸ್ಪೆಷಲ್‌!

ಲಂಡನ್‌: ಕ್ರಿಕೆಟ್‌ ಕಾಶಿ, ಕ್ರಿಕೆಟ್‌ ಮೆಕ್ಕಾ ಎಂಬ ವಿಶೇಷಣಗಳಿಂದ ಕರೆಯಲ್ಪಡುವ ಲಂಡನ್ನಿನ ಲಾರ್ಡ್ಸ್‌ ಮೈದಾನದಲ್ಲಿ ಆಡುವುದೇ ಒಂದು ಹೆಮ್ಮೆ, ಗೌರವ. ಗೆದ್ದರಂತೂ ಅದು ಸ್ಪೆಷಲ್‌!

1983ರಲ್ಲಿ ಕಪಿಲ್‌ದೇವ್‌ ಪಡೆ ಲಾರ್ಡ್ಸ್‌ ಬಾಲ್ಕನಿ ಯಲ್ಲಿ ನಿಂತು ಪ್ರುಡೆನ್ಶಿಯಲ್‌ ವಿಶ್ವಕಪ್‌ ಎತ್ತಿಹಿಡಿದು ಸಂಭ್ರಮಿಸಿದ್ದು, ನಾಟ್‌ವೆಸ್ಟ್‌ ಫೈನಲ್‌ ಗೆದ್ದ ಬಳಿಕ ನಾಯಕ ಸೌರವ್‌ ಗಂಗೂಲಿ ಅಂಗಿ ಕಳಚಿ ಜೋಶ್‌ ತೋರಿದ್ದೆಲ್ಲ ಲಾರ್ಡ್ಸ್‌ನ ಸವಿನೆನಪುಗಳಾಗಿಯೇ ಉಳಿದಿವೆ. ಈ ಸಾಲಿಗೆ ನೂತನ ಸೇರ್ಪಡೆಯೇ ಕೊಹ್ಲಿ ಪಡೆ  ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಸಾಧಿಸಿದ 151 ರನ್ನುಗಳ ಪ್ರಚಂಡ ಗೆಲುವು!

ಅಚ್ಚರಿ, ಅನಿರೀಕ್ಷಿತ, ಅಮೋಘ :

ಭಾರತದ ಪಾಲಿಗೆ ಈ ಗೆಲುವು ಅಚ್ಚರಿ, ಅನಿರೀಕ್ಷಿತ ಹಾಗೂ ಅಮೋಘ. 4ನೇ ದಿನದಾಟದ ಕೊನೆಯ ತನಕವಲ್ಲ, ಅಂತಿಮ ದಿನ ರಿಷಭ್‌ ಪಂತ್‌ ಮತ್ತು ಇಶಾಂತ್‌ ಶರ್ಮ ವಿಕೆಟ್‌ ಬೀಳುವ ತನಕ ಈ ಪಂದ್ಯ ಇಂಗ್ಲೆಂಡಿನ ಹಿಡಿತದಲ್ಲೇ ಇತ್ತು. ಭಾರತ ನಿಧಾನವಾಗಿ ಸೋಲಿಗೆ ಹತ್ತಿರವಾಗತೊಡಗಿತ್ತು. ಆದರೆ ಮುಂದಿನದ್ದೆಲ್ಲ ಕ್ರಿಕೆಟಿನ ರೋಮಾಂಚನ ಗರಿಗೆದರತೊಡಗಿದ ಸಮಯ.

ಬೌಲರ್‌ಗಳಾದ ಶಮಿ-ಬುಮ್ರಾ ಬ್ಯಾಟಿಂಗ್‌ನಲ್ಲಿ ಕಮಾಲ್‌ ಮಾಡಿದ್ದು, ಬಳಿಕ ಬೌಲಿಂಗ್‌ನಲ್ಲೂ ಮಿಂಚಿದ್ದು, ಸಿರಾಜ್‌ ಮತ್ತು ಇಶಾಂತ್‌ ಆಂಗ್ಲರ ಬ್ಯಾಟಿಂಗ್‌ ಸರದಿಯನ್ನು ಸೀಳಿದ ಘಟನಾವಳಿಯೆಲ್ಲ ಕನಸೋ ಎಂಬಂತೆ ಸರಿದು ಹೋದವು. ನಾಟಿಂಗ್‌ಹ್ಯಾಮ್‌ನಲ್ಲಿ  ಮಳೆಯಿಂದ ಕೈತಪ್ಪಿದ ಗೆಲುವು ಲಾರ್ಡ್ಸ್‌ನಲ್ಲಿ ಅಚ್ಚರಿಯ ರೀತಿಯಲ್ಲಿ ಟೀಮ್‌ ಇಂಡಿಯಾದ ಕೈ ಹಿಡಿದಿತ್ತು!

ಯಾವುದೇ ಲೆಕ್ಕಾಚಾರ ಹಾಕಿ ನೋಡಿದರೂ ಈ ಟೆಸ್ಟ್‌ನಲ್ಲಿ ಭಾರತ ಸೋಲಬೇಕಿತ್ತು ಅಥವಾ ಪಂದ್ಯ ಡ್ರಾ ಆಗಬೇಕಿತ್ತು. ಎರಡೇ ಆಪ್ಶನ್‌ ಇತ್ತೆಂಬುದನ್ನು ಹೇಳಲು ಪಂಡಿತರು ಬೇಕಿರಲಿಲ್ಲ. ಆದರೆ ಇಲ್ಲಿ ಎಲ್ಲರ ಲೆಕ್ಕಾಚಾರ ತಲೆಕೆಳಗಾಯಿತು!

ಭಾರತ ಈ ಪಂದ್ಯವನ್ನು ಉಳಸಿಕೊಳ್ಳಬೇಕಾದರೆ ಕನಿಷ್ಠ ಲಂಚ್‌ ತನಕ ಬ್ಯಾಟಿಂಗ್‌ ವಿಸ್ತರಿಸುವುದು ಅನಿವಾರ್ಯವಿತ್ತು. ಈ ಕೆಲಸವನ್ನು ಶಮಿ-ಬುಮ್ರಾ ಸೇರಿಕೊಂಡು ಯಶಸ್ವಿಗೊಳಿಸಿದರು. ಮುಂದಿನದು ನಾಟಕೀಯ ವಿದ್ಯಮಾನ. ಕನಿಷ್ಠ 60 ಓವರ್‌ಗಳನ್ನು ಕ್ರೀಸ್‌ನಲ್ಲಿ ನಿಂತು ಈ ಪಂದ್ಯವನ್ನು ಡ್ರಾ ಮಾಡಿಕೊಳ್ಳುವುದು ಆತಿಥೇಯರಿಗೆ ದೊಡ್ಡ ಸವಾಲೇನೂ ಆಗಿರಲಿಲ್ಲ. ಅದರಲ್ಲೂ ಕ್ಯಾಪ್ಟನ್‌ ರೂಟ್‌ ಪ್ರಚಂಡ ಫಾರ್ಮ್ನಲ್ಲಿದ್ದರು. ಆದರೆ ಭಾರತದ ವೇಗಿಗಳು ಅಕ್ಷರಶಃ ಮ್ಯಾಜಿಕ್‌ ಮಾಡಿದರು. ಇಂಗ್ಲೆಂಡ್‌ ವಿಕೆಟ್‌ಗಳು ಒಂದೊಂದಾಗಿ ಉದುರತೊಡಗಿದಾಗ ಪಂದ್ಯದ ಕೌತುಕ ಏಕದಿನ,

ಟಿ ಟ್ವೆಂಟಿಯನ್ನೂ ಮೀರಿಸಿತು! :

ಟೆಸ್ಟ್‌ ಕ್ರಿಕೆಟ್‌ ಬೋರ್‌, ಬರೀ ನೀರಸ, ಟೈಮ್‌ ವೇಸ್ಟ್‌… ಎಂಬುವುದನ್ನು ಈ ಪಂದ್ಯ ಸುಳ್ಳಾಗಿಸಿದೆ.

ಸಂಕ್ಷಿಪ್ತ ಸ್ಕೋರ್‌: ಭಾರತ-364 ಮತ್ತು 8 ವಿಕೆಟಿಗೆ 298 ಡಿಕ್ಲೇರ್‌. ಇಂಗ್ಲೆಂಡ್‌-391 ಮತ್ತು 120 (ರೂಟ್‌ 33, ಬಟ್ಲರ್‌ 25, ಅಲಿ 13, ಇತರ 29, ಸಿರಾಜ್‌ 32ಕ್ಕೆ 4, ಬುಮ್ರಾ 33ಕ್ಕೆ 3, ಇಶಾಂತ್‌ 13ಕ್ಕೆ 2, ಶಮಿ 13ಕ್ಕೆ 1). ಪಂದ್ಯಶ್ರೇಷ್ಠ: ಕೆ.ಎಲ್‌. ರಾಹುಲ್‌. 3ನೇ ಟೆಸ್ಟ್‌: ಲೀಡ್ಸ್‌ (ಆ. 25-29).

ರಾಹುಲ್‌ ಖಡಕ್‌ ಎಚ್ಚರಿಕೆ  :

ಪಂದ್ಯ ಗೆಲ್ಲುವ ಉದ್ದೇಶದಿಂದ ನಮ್ಮ ಒಬ್ಬ ಆಟಗಾರನನ್ನು ಕೆಣಕಿದರೆ ತಂಡದಲ್ಲಿರುವ ಎಲ್ಲರೂ ತಿರುಗಿ ಬೀಳುತ್ತಾರೆ ಎಂದು ಭಾರತ ತಂಡದ ಆರಂಭಿಕ ಆಟಗಾರ ಕೆ.ಎಲ್‌.ರಾಹುಲ್‌ ಇಂಗ್ಲೆಂಡ್‌ ಆಟಗಾರರಿಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಸೋಲಿನಿಂದ ಪಾಠ ಕಲಿತ್ತಿದ್ದೇವೆ’ :

ಭಾರತದ ವಿರುದ್ಧ ಲಾರ್ಡ್ಸ್‌ ಟೆಸ್ಟ್‌ ಪಂದ್ಯದ ಹೀನಾಯ ಸೋಲಿಗೆ ಬೇಸರ ವ್ಯಕ್ತಪಡಿಸಿದ ಇಂಗ್ಲೆಂಡ್‌ ನಾಯಕ ಜೋ ರೂಟ್‌, ಈ ಸೋಲಿನಿಂದ ಸಾಕಷ್ಟು ಪಾಠ ಕಲಿತ್ತಿದ್ದು, ಭಾರತೀಯ ಆಟಗಾರರನ್ನು ಕೆಣಕಿದ್ದು ನಮ್ಮ ತಪ್ಪು. ಮುಂದಿನ ಪಂದ್ಯದಲ್ಲಿ ಈ ರೀತಿಯ ವರ್ತನೆ ಖಂಡಿತ ಮರುಕಳಿಸದು ಎಂದು ರೂಟ್‌ ಭರವಸೆ ನೀಡಿದರು.

ಟಾಪ್ ನ್ಯೂಸ್

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.