- Saturday 14 Dec 2019
ರಹಾನೆಗೆ ನಿದ್ರೆಯಲ್ಲೂ ‘ಪಿಂಕ್ ಬಾಲ್’ ಕನವರಿಕೆ!
Team Udayavani, Nov 19, 2019, 4:00 PM IST
ಮುಂದಿನ ಶುಕ್ರವಾರದಿಂದ ಕೊಲ್ಕೊತ್ತಾದ ಈಡೆನ್ ಗಾರ್ಡೆನ್ ಮೈದಾನದಲ್ಲಿ ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ಪ್ರಾರಂಭವಾಗಲಿರುವ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯಾಟ ಇತ್ತಂಡಗಳಿಗೂ ಐತಿಹಾಸಿಕವಾದುದಾಗಿದೆ. ಯಾಕೆಂದರೆ ಇದು ಭಾರತದಲ್ಲಿ ನಡೆಯುತ್ತಿರುವ ಮತ್ತು ಭಾರತ ಆಡುತ್ತಿರುವ ಮೊತ್ತಮೊದಲ ಪಿಂಕ್ ಬಾಲ್ ಹಗಲು ರಾತ್ರಿ ಟೆಸ್ಟ್ ಪಂದ್ಯವಾಗಲಿದೆ.
ಈ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕಾಗಿ ಭಾರತೀಯ ಟೆಸ್ಟ್ ತಂಡದ ಆಟಗಾರರು ಕಠಿಣ ಅಭ್ಯಾಸವನ್ನು ನಡೆಸುತ್ತಿದ್ದಾರೆ. ಮತ್ತು ಈ ವಾತಾವರಣದಲ್ಲಿ ಆಡಲು ತಮ್ಮನ್ನು ತಾವು ಮಾನಸಿಕವಾಗಿ ಸಿದ್ಧಗೊಳಿಸುತ್ತಿದ್ದಾರೆ.
ಇದಕ್ಕೆ ಪೂರಕವಾಗಿ ಭಾರತ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಪಿಂಕ್ ಚೆಂಡಿನ ಕುರಿತಾಗಿಯೇ ಕನವರಿಸುತ್ತಿರುವ ಫೊಟೋ ಒಂದನ್ನು ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ತನ್ನ ತಲೆದಿಂಬಿನ ಬದಿಯಲ್ಲಿ ಪಿಂಕ್ ಚೆಂಡೊಂದನ್ನು ಇರಿಸಿಕೊಂಡು, ‘ಈಗಾಗಲೇ ಪಿಂಕ್ ಬಾಲ್ ಟೆಸ್ಟ್ ಕುರಿತಾಗಿ ಕನಸು ಕಾಣಲು ಪ್ರಾರಂಭಿಸಿದ್ದೇನೆ’ ಎಂದು ರಹಾನೆ ಬರೆದುಕೊಂಡಿದ್ದಾರೆ.
ಅಜಿಂಕ್ಯ ರಹಾನೆ ಅವರು ಕಪ್ತಾನ ವಿರಾಟ್ ಕೊಹ್ಲಿ ಜೊತೆಗೆ ಇಂದು ಕೊಲ್ಕೊತ್ತಾಗೆ ಆಗಮಿಸಿದ್ದಾರೆ. ಬಾಂಗ್ಲಾ ವಿರುದ್ಧದ ಪ್ರಥ ಟೆಸ್ಟ್ ಪಂದ್ಯವನ್ನು ಭಾರತ ಈಗಾಗಲೇ ಇನ್ನಿಂಗ್ಸ್ ಹಾಗೂ 130 ರನ್ ಗಳಿಂದ ಗೆದ್ದುಕೊಂಡಿದೆ. ಇನ್ನು ಕೊಲ್ಕೊತ್ತಾದಲ್ಲಿ ನಡೆಯಲಿರುವ ಪಿಂಕ್ ಬಾಲ್ ಟೆಸ್ಟ್ ಗೆಲ್ಲುವ ಮೂಲಕ ಬಾಂಗ್ಲಾ ವಿರುದ್ಧದ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಇರಾದೆ ಕೊಹ್ಲಿ ಬಳಗದ್ದಾಗಿದೆ.
Already dreaming about the historic pink ball test 😊 pic.twitter.com/KFp4guBwJm
— Ajinkya Rahane (@ajinkyarahane88) November 18, 2019
ಈ ವಿಭಾಗದಿಂದ ಇನ್ನಷ್ಟು
-
ನವದೆಹಲಿ: ಸತತ ಗಾಯದ ಸಮಸ್ಯೆಯನ್ನು ಎದುರಿಸುತ್ತಿರುವ ಭಾರತ ತಂಡಕ್ಕೆ ಕೊನೆಗೂ ಶುಭ ಸಮಾಚಾರ ಬಂದಿದ್ದು, ಪುನಶ್ಚೇತನದ ಹಾದಿಯಲ್ಲಿರುವ ಬಲಗೈ ವೇಗಿ ಜಸ್ಪ್ರೀತ್ಬುಮ್ರಾ,...
-
ಹೊಸದಿಲ್ಲಿ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸದ್ಯ ವಿಶ್ರಾಂತಿಯಲ್ಲಿದ್ದು ಯಾವಾಗ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳುತ್ತಾರೆ ಎನ್ನುವುದೇ ಯಕ್ಷ...
-
ಬೆಂಗಳೂರು: ಕಲರ್ ಫುರ್ ಕ್ರಿಕೆಟ್ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ ನ 2020ರ ಆವೃತ್ತಿಯ ಹರಾಜು ಪ್ರಕ್ರಿಯೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಎಲ್ಲಾ ಎಂಟು...
-
ಕೋಲ್ಕತ್ತಾ: ವರ್ಣರಂಜಿತ ಕ್ರಿಕೆಟ್ ಕೂಟ ಇಂಡಿಯನ್ ಪ್ರೀಮಿಯರ್ ಲೀಗ್ ನ ಹರಾಜಿಗೆ ಇನ್ನೇನು ಒಂದು ವಾರವಷ್ಟೇ ಬಾಕಿ ಉಳಿದಿದೆ. ಹೀಗಿರುವಾಗ ಇಂಗ್ಲೆಂಡ್ ನ ಬ್ಯಾಟ್ಸಮನ್...
-
ಗ್ವಾಂಗ್ಜೂ: ಈಗಾಗಲೇ "ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್' ಬ್ಯಾಡ್ಮಿಂಟನ್ ಪಂದ್ಯಾವಳಿಯ ಸೆಮಿಫೈನಲ್ ರೇಸ್ನಿಂದ ಹೊರಬಿದ್ದಿರುವ ಭಾರತದ ಪಿ.ವಿ. ಸಿಂಧು,...
ಹೊಸ ಸೇರ್ಪಡೆ
-
ವಾಷಿಂಗ್ಟನ್: ಕಳೆದ ಕೆಲವು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಐತಿಹಾಸಿಕ ಹಾಗೂ ಸರಣಿ ಸುಧಾರಣಾ ಕ್ರಮಗಳು...
-
ಕನ್ನಡ ಚಿತ್ರರಂಗ ಕಂಡ ಸುಂದರ ನಟಿಯರಲ್ಲಿ ಜಯಶ್ರೀ ಕೂಡಾ ಒಬ್ಬರು. ರೂಪದರ್ಶಿಯಾಗಿ, ನಟಿಯಾಗಿ ಜನಪ್ರಿಯತೆ ಕಂಡಿದ್ದ ಈ ನಟಿ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ...
-
ಬೆಳ್ತಂಗಡಿ: ಕುವೆಟ್ಟು ಗ್ರಾಮದ ವರಕಬೆಯಲ್ಲಿ ಡಿ.14ರಂದು ರಿಕ್ಷಾ ಮಗುಚಿ, ಪ್ರಯಾಣಿಕ ಸೋನಂದೂರಿನ ಕೃಷ್ಣನಗರ ನಿವಾಸಿ ಹರೀಶ್ ಶೆಟ್ಟಿ (45) ಮೃತಪಟ್ಟಿದ್ದಾರೆ. ರಿಕ್ಷಾ...
-
ಜೀವವಿಮೆ ಪಾಲಿಸಿಗಳಲ್ಲಿ ಪ್ರಮುಖ ಬದಲಾವಣೆಗೆ ಅಖೀಲ ಭಾರತ ವಿಮಾ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್ಡಿಎಐ) ಉದ್ದೇಶಿದ್ದು 2020 ಫೆ.1ರಿಂದ ಜಾರಿಗೆ...
-
ಬೆಂಗಳೂರು: ನಗರದ 85 ಪ್ರದೇಶಗಳಲ್ಲಿ ಪಾರ್ಕಿಂಗ್ಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಬಿಬಿಎಂಪಿ ಪ್ರಾರಂಭಿಸಿರುವ "ಸ್ಮಾರ್ಟ್ ಪಾರ್ಕಿಂಗ್'ಯೋಜನೆಯ ಪ್ರಾಯೋಗಿಕ...