ನನ್ನ ಸತ್ಕರ್ಮದ ಫಲವೇ ಆ ಸಿಕ್ಸರ್: ಕಾರ್ತಿಕ್
Team Udayavani, Mar 22, 2018, 7:30 AM IST
ಚೆನ್ನೈ: ಬಾಂಗ್ಲಾ ವಿರುದ್ಧ ತ್ರಿಕೋನ ಟಿ20 ಫೈನಲ್ನಲ್ಲಿ ತಾನು ಬಾರಿಸಿದ ಸಿಕ್ಸರ್, ತನ್ನ ಉತ್ತಮ ಕರ್ಮದ ಫಲ ಎಂದು ದಿನೇಶ್ ಕಾರ್ತಿಕ್ ಹೇಳಿಕೊಂಡಿದ್ದಾರೆ! ತಾನು ಜೀವನದಲ್ಲಿ ಒಬ್ಬ ವ್ಯಕ್ತಿಯಾಗಿ, ಕ್ರಿಕೆಟಿಗನಾಗಿ ಒಳ್ಳೆಯ ಕೆಲಸ ಮಾಡಿಕೊಂಡು ಬಂದಿದ್ದೇನೆ. ಆ ಒಳ್ಳೆಯ ಕರ್ಮವೇ ನಾನು ಸಿಕ್ಸರ್ ಬಾರಿಸಲು ನೆರವಾಗಿದೆ ಎಂದು ಭಾವಿಸುತ್ತೇನೆ ಎಂದು ಅವರು ತಮ್ಮ ಅದ್ಭುತ ಇನ್ನಿಂಗ್ಸ್ ನ್ನು ವಿಶಿಷ್ಟವಾಗಿ ವ್ಯಾಖ್ಯಾನಿಸಿದ್ದಾರೆ.
ಕೊಲಂಬೊದಲ್ಲಿ ಮುಗಿದ ಫೈನಲ್ನಲ್ಲಿ ಕಾರ್ತಿಕ್ ಕೇವಲ 8 ಎಸೆತ ಎದುರಿಸಿ 29 ರನ್ ಗಳಿಸಿದರು. ಅದು ಅವರ ಜೀವನವನ್ನೇ ಬದಲಿಸಿದ ಇನ್ನಿಂಗ್ಸ್. ಬಾಂಗ್ಲಾ ವಿರುದ್ಧದ ಫೈನಲ್ನ ಅಂತಿಮ ಎಸೆತದಲ್ಲಿ ಅವರು ಬಾರಿಸಿದ ಸಿಕ್ಸರ್ನಿಂದ ಭಾರತ ಅದ್ಭುತ ಗೆಲುವು ಗಳಿಸಿತು.