ಸುಪ್ರೀಂ ಆದೇಶ ಜಾರಿಗೆ ಇಂದು ಸಮಿತಿ ರಚನೆ
Team Udayavani, Jun 27, 2017, 3:45 AM IST
ಮುಂಬೈ: ನಿರೀಕ್ಷೆ ಮೂಡಿಸಿದ್ದ ಬಿಸಿಸಿಐ ವಿಶೇಷ ಸರ್ವ ಸದಸ್ಯರ ಸಭೆ ಯಾವುದೇ ಸದ್ದುಗದ್ದಲವಿಲ್ಲದೇ ಸೋಮವಾರ ಮುಕ್ತಾಯವಾಗಿದೆ. ಸರ್ವೋಚ್ಚ ನ್ಯಾಯಾಲಯದ ಆಡಳಿತಾತ್ಮಕ ಸುಧಾರಣೆಯ ಆದೇಶವನ್ನು ಬಹಳ ಬೇಗ ಮತ್ತು ಶಿಸ್ತುಬದ್ಧವಾಗಿ ಜಾರಿಗೊಳಿಸುವ ದೃಷ್ಟಿಯಿಂದ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಮಂಗಳವಾರ ಸಮಿತಿ ರಚಿಸಲಾಗುವುದು, 15 ದಿನದೊಳಗೆ ವರದಿ ನೀಡಲು ಸೂಚಿಸಲಾಗಿದೆ ಎಂದು ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ತಿಳಿಸಿದ್ದಾರೆ.
ಬಿಸಿಸಿಐ ರಚಿಸಿರುವ ಸಮಿತಿಯು ಸದ್ಯ ವಿವಾದಕ್ಕೆ ಕಾರಣವಾಗಿರುವ ಒಂದು ರಾಜ್ಯಕ್ಕೆ ಒಂದೇ ಮತ, ಪದಾಧಿಕಾರಿಗಳಿಗೆ 3 ವರ್ಷಗಳ ಕಡ್ಡಾಯ ವಿಶ್ರಾಂತಿ, ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರ ಸಂಖ್ಯೆ ಐದಕ್ಕೇರಿಸುವ ಕುರಿತೂ ಚರ್ಚಿಸಲಿದೆ. ಈ ವರದಿಯನ್ನು ಜಾರಿ ಮಾಡುವ ಸಂಬಂಧ ಬಿಸಿಸಿಐ ಪದಾಧಿಕಾರಿಗಳು ಕ್ರಮ ಕೈಗೊಳ್ಳಲಿದೆ ಚೌಧರಿ ಮಾಹಿತಿ ನೀಡಿದ್ದಾರೆ.
ಒಟ್ಟಾರೆ 2.45 ಗಂಟೆ ಸಭೆಯಲ್ಲಿ ಏನೇನು ಚರ್ಚಿತವಾಯಿತು ಎಂಬ ಮಾಹಿತಿಯನ್ನು ಅವರು ಬಿಟ್ಟುಕೊಟ್ಟಿಲ್ಲ. ಸಭೆಯ ವಿಷಯ ಸೂಚಿಯಲ್ಲಿದ್ದ ಮೊದಲನೇ ಅಂಶವೇ ಸುಮಾರು 1 ಗಂಟೆ ಚರ್ಚೆಗೊಳಗಾಯಿತು ಎಂದು ಅಮಿತಾಭ್ ಹೇಳಿದ್ದಾರೆ. ಬಿಸಿಸಿಐ ಆಡಳಿತಾಧಿಕಾರಿಗಳ ಮನವಿಯಂತೆ ಸಭೆಯಲ್ಲಿ ಯಾವುದೇ ನಿರ್ಧಾರವನ್ನು ಪದಾಧಿಕಾರಿಗಳು ಕೈಗೊಂಡಿಲ್ಲವೆನ್ನಲಾಗಿದೆ.
ಕೇಂದ್ರ ಒಪ್ಪಿದರೆ ಪಾಕ್ ಜೊತೆ ಕ್ರಿಕೆಟ್: ಕೇಂದ್ರ ಸರ್ಕಾರ ಒಪ್ಪಿದರೆ ಮಾತ್ರ ಪಾಕಿಸ್ತಾನದ ಜೊತೆ ಕ್ರಿಕೆಟ್ ಆಡುವುದಾಗಿ ಅಮಿತಾಭ್ ಚೌಧರಿ ಪುನರುಚ್ಛಿಸಿದ್ದಾರೆ. ನಾವು ಪಾಕ್ನೊಂದಿಗೆ ಕಳೆದ ತಿಂಗಳು ಮಾತುಕತೆ ನಡೆಸಿದ್ದೇವೆ. ಈ ಬಗ್ಗೆ ಐಸಿಸಿ ಸಮ್ಮುಖದಲ್ಲಿ ಇನ್ನೊಮ್ಮೆ ಮಾತುಕತೆ ನಡೆಸಲಿದ್ದೇವೆಂದು ತಿಳಿಸಿದ್ದಾರೆ.
ಕುಂಬ್ಳೆ-ಕೊಹ್ಲಿ ನಡುವೆ ಬಿರುಕಿಲ್ಲ!
ಅಮಿತಾಭ್ ಚೌಧರಿ ನೀಡಿದ ಅತ್ಯಂತ ಅಚ್ಚರಿಯ ಹೇಳಿಕೆಯೆಂದರೆ ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ಅನಿಲ್ ಕುಂಬ್ಳೆ ಮತ್ತು ನಾಯಕ ವಿರಾಟ್ ಕೊಹ್ಲಿ ನಡುವೆ ಯಾವುದೇ ಬಿರುಕಿಲ್ಲವೆಂದಿದ್ದು. ಸ್ವತಃ ಕುಂಬ್ಳೆ ಇತ್ತೀಚೆಗೆ ಕೋಚ್ ಹುದ್ದೆಗೆ ರಾಜೀನಾಮೆ ನೀಡುವಾಗ ಫೇಸ್ಬುಕ್ನಲ್ಲಿ ಕೊಹ್ಲಿಗೆ ಇಷ್ಟವಿಲ್ಲದಿರುವುದರಿಂದಲೇ ರಾಜೀನಾಮೆ ನೀಡುತ್ತಿದ್ದೇನೆಂದು ಸ್ಪಷ್ಟಪಡಿಸಿದ್ದರು. ಅಲ್ಲದೇ ವಿನಾಕಾರಣ ಕೋಚ್ ಹುದ್ದೆಗೆ ಕುಂಬ್ಳೆ ರಾಜೀನಾಮೆ ನೀಡುವ ಅಗತ್ಯವೂ ಇರಲಿಲ್ಲ. ಕುಂಬ್ಳೆ ರಾಜೀನಾಮೆ ನೀಡಿದಾಗ ಕೊಹ್ಲಿ ಅದನ್ನು ತಡೆಯಲೂ ಇಲ್ಲ. ಇಷ್ಟೆಲ್ಲವೂ ಇಡೀ ಜಗತ್ತಿಗೆ ಗೊತ್ತಿರುವಾಗ ಚೌಧರಿ ಇಬ್ಬರ ನಡುವೆ ಬಿರುಕಿಲ್ಲವೆಂದು ಹೇಳಿ ತಿಪ್ಪೆ ಸಾರಿಸುವ ಯತ್ನ ನಡೆಸಿದ್ದಾರೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫಯಾಜ್: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ
Congress ಅಭ್ಯರ್ಥಿ ಡಿ.ಕೆ. ಸುರೇಶ್ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ
Congress ವಿರುದ್ಧ ಬಿಜೆಪಿ ಕ್ಯೂಆರ್ ಕೋಡ್ ಸಮರ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ