ಯೋಧಾ ಎದುರು ಹಾಲಿ ಚಾಂಪಿಯನ್‌ ಬುಲ್ಸ್‌


Team Udayavani, Oct 14, 2019, 5:57 AM IST

yodha

ಅಹ್ಮದಾಬಾದ್‌: ಪ್ರೊ ಕಬಡ್ಡಿ 7ನೇ ಆವೃತಿಯ ಸುದೀರ್ಘ‌ ಲೀಗ್‌ ಹಣಾಹಣಿ ಬರೋಬ್ಬರಿ 132 ಪಂದ್ಯಗಳ ಬಳಿಕ ಕೊನೆಗೊಂಡಿದೆ. ಪಂದ್ಯಾವಳಿಯೀಗ ಅಂತಿಮ ಘಟ್ಟ ತಲುಪಿದೆ. ಸೋಮವಾರ ಎರಡು ಎಲಿಮಿನೇಟರ್‌ ಪಂದ್ಯಗಳು ನಡೆಯಲಿದ್ದು, ಇಲ್ಲಿ ಸೋತ ತಂಡಗಳು ಕೂಟದಿಂದ ನಿರ್ಗಮಿಸಲಿವೆ. ಗೆದ್ದವರಿಗೆ ಸೆಮಿಫೈನಲ್‌ ಟಿಕೆಟ್‌ ಲಭಿಸಲಿದೆ.

ನಿಯಮದಂತೆ, ಅಂಕಪಟ್ಟಿಯಲ್ಲಿ ಮೊದಲ 2 ಸ್ಥಾನ ಗಳಿಸಿದ ದಬಾಂಗ್‌ ಡೆಲ್ಲಿ ಮತ್ತು ಬೆಂಗಾಲ್‌ ವಾರಿಯರ್ ನೇರವಾಗಿ ಸೆಮಿಫೈನಲ್‌ ಪ್ರವೇಶಿಸಿವೆ. ಉಳಿದ 4 ತಂಡಗಳಾದ ಬುಲ್ಸ್‌-ಯುಪಿ ಯೋಧಾ, ಯು ಮುಂಬಾ-ಹರ್ಯಾಣ ಅಹ್ಮದಾಬಾದ್‌ನಲ್ಲಿ ಅದೃಷ್ಟಪರೀಕ್ಷೆಗೆ ಇಳಿಯಲಿವೆ.

ಚಾಂಪಿಯನ್‌ಗೆ ಕಠಿನ ಸವಾಲು
ಹಾಲಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ಮೊದಲ ಎಲಿಮಿನೇಟರ್‌ ಪಂದ್ಯದಲ್ಲಿ ಯುಪಿ ಯೋಧಾ ವಿರುದ್ಧ ಸೆಣಸಲಿದೆ. ಬುಲ್ಸ್‌ಗೆ ನಾಯಕ ರೋಹಿತ್‌ ಕುಮಾರ್‌ ಅನುಪಸ್ಥಿತಿ ಕಾಡುತ್ತಿದ್ದು, ತಂಡದ ಸಂಪೂರ್ಣ ಜವಾಬ್ದಾರಿ ಪವನ್‌ ಸೆಹ್ರಾವತ್‌ ಮೇಲಿದೆ. ತಂಡದ ಅಷ್ಟೂ ನಿರ್ವಹಣೆ ಸೆಹ್ರಾವತ್‌ ಆಟವನ್ನೇ ಅವಲಂಬಿಸಿದೆ. ಅವರ ಏಕಾಂಗಿ ಹೋರಾಟದಿಂದಲೇ ತಂಡ ಪ್ಲೇ-ಆಫ್ ಹಂತದ ವರೆಗೆ ತಲುಪಿದೆ ಎಂಬುದನ್ನು ಮರೆಯುವಂತಿಲ್ಲ. ಆದರೆ ಎಲಿಮಿನೇಟರ್‌ ಸ್ಪರ್ಧೆ ಬೇರೆಯೇ ಜೋಶ್‌ ಹೊಂದಿರುತ್ತದೆ. ಸಾಂ ಕವಾಗಿ ಆಡಿದರಷ್ಟೇ ಬುಲ್ಸ್‌ ಓಟ ಮುಂದುವರಿದೀತು.

ಯುಪಿ ಯೋಧಾ ಎದುರಿನ ಕೊನೆಯ ಲೀಗ್‌ ಪಂದ್ಯದಲ್ಲಿ ಬುಲ್ಸ್‌ ಎಡವಿತ್ತು. ಇದಕ್ಕೆ ಸೇಡು ತೀರಿಸಿಕೊಳ್ಳಬೇಕಿದೆ. ಒಂದು ವೇಳೆ ಎಲಿಮಿನೇಟರ್‌ ಪಂದ್ಯವನ್ನು ಗೆದ್ದು ಬುಲ್ಸ್‌ ಸೆಮಿಫೈನಲ್‌ಗೇರಿದರೂ ಅಲ್ಲಿ ಬಲಿಷ್ಠ ದಬಾಂಗ್‌ ಡೆಲ್ಲಿ ಸವಾಲು ಎದುರಾಗಲಿದೆ. ಪ್ರಚಂಡ ಪ್ರದರ್ಶನ ಕಾಯ್ದುಕೊಂಡು ಬಂದಿರುವ ಡೆಲ್ಲಿ ವಿರುದ್ಧ ಸೆಣಸುವುದು ಸುಲಭವಲ್ಲ.

ಯುಪಿ ಯೋಧಾ ಸಶಕ್ತ ತಂಡ
ಬುಲ್ಸ್‌ಗೆ ಹೋಲಿಸಿದರೆ ಯುಪಿ ಯೋಧಾ ರೈಡಿಂಗ್‌ ಹಾಗೂ ಟ್ಯಾಕಲ್‌ ವಿಭಾಗಗಳೆರ ಡರಲ್ಲೂ ಬಲಿಷ್ಠವಾಗಿದೆ. ಇದೊಂದು ಸಶಕ್ತ ಹಾಗೂ ಪರಿಪೂರ್ಣ ತಂಡ. ಕನ್ನಡಿಗ ರಿಷಾಂಕ್‌ ಅವರ ಆಲ್‌ರೌಂಡ್‌ ಆಟ; ಶ್ರೀಕಾಂತ್‌, ಮೋನು ಗೋಯತ್‌ ಅವರ ಅಮೋಘ ರೈಡಿಂಗ್‌, ನಾಯಕ ನಿತೇಶ್‌ ಕುಮಾರ್‌ ಅವರ ಟ್ಯಾಕಲ್‌ ಎದುರಾಳಿಗೆ ಭಾರೀ ಅಪಾಯ ತಂದೊಡ್ಡುವ ಸಾಧ್ಯತೆ ಇದೆ.

ಮುಂಬಾ-ಹರ್ಯಾಣ ಸಮಬಲ
ಯು ಮುಂಬಾ ಮತ್ತು ಹರ್ಯಾಣ ಸ್ಟೀಲರ್ ನಡುವಿನ 2ನೇ ಎಲಿಮಿನೇಟರ್‌ ಪಂದ್ಯ ಅತ್ಯಂತ ರೋಚಕವಾಗಿ ಸಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಎರಡೂ ತಂಡಗಳು ಸಮಾನ ಸಾಮರ್ಥ್ಯದೊಂದಿಗೆ ಬಲಿಷ್ಠವಾಗಿರುವುದೇ ಇದಕ್ಕೆ ಕಾರಣ.

ಟಾಪ್ ನ್ಯೂಸ್

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asaas

Mumbai Indians; ಹಾರ್ದಿಕ್‌ ಪಾಂಡ್ಯ, ಬೌಷರ್‌ ಮೌನ!

1-wewewqe

‘Bangaluru’: ಅನ್‌ಬಾಕ್ಸ್‌  ಸಮಾರಂಭದಲ್ಲಿ ಆರ್‌ಸಿಬಿ ವನಿತೆಯರು

1-saddas-aa-4

IPL:ರಾಹುಲ್‌ ಫಿಟ್‌; ಕೀಪಿಂಗ್‌ ಡೌಟ್‌

1-saddas-aa-3

IPL; ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿದ ಕೊಹ್ಲಿ

1-saddas

Badminton; ಇಂದಿನಿಂದ ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್‌

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.