ಕ್ರಿಕೆಟ್ ಏಕೆ ಇನ್ನೂ ಒಲಿಂಪಿಕ್ ಅಂಗಳಕ್ಕೆ ಪ್ರವೇಶಿಸಿಲ್ಲ..?  

ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ರಸದೌತಣ ಸವಿಯುವುದೆಂದು..?

Team Udayavani, Aug 27, 2021, 11:53 AM IST

ಪ್ರಾತಿನಿಧಿಕ ಚಿತ್ರ

ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಆಟವನ್ನು ಸೇರಿಸಬೇಕು ಎಂಬ ಚರ್ಚೆ ಹಲವಾರು ವರ್ಷಗಳಿಂದ ನಡೆಯುತ್ತಿದೆ. ಈಗಲೂ ಅದು ಚರ್ಚಿತ ವಿಷಯವೇ. ಟೋಕಿಯೋ ಒಲಿಂಪಿಕ್ಸ್ ಮುಗಿದ ಬೆನ್ನಲ್ಲೇ ಐಸಿಸಿ ಹಾಗೂ ಬಿಸಿಸಿಐ, 2028ರ ಒಲಿಂಪಿಕ್ಸ್‌ ಗೆ ಆಟವನ್ನು ಸೇರಿಸುವ ಸರ್ವಪ್ರಯತ್ನವನ್ನೂ ಮಾಡಲಾಗುವುದು ಎಂದಿದೆ.

ಹೀಗಿದ್ದರೂ, ವಿಶ್ವದ ಅತ್ಯಂತ ದೊಡ್ಡ ಹಾಗೂ ಜನಪ್ರಿಯ ಕ್ರೀಡಾಕೂಟಗಳಲ್ಲೊಂದಾದ ಒಲಿಂಪಿಕ್ಸ್‌ ನಲ್ಲಿ ಕ್ರಿಕೆಟ್ ಆಟವನ್ನು ನೋಡುವ ದಿನಗಳು ಇನ್ನೂ ದೂರದಲ್ಲಿದೆ ಎಂದೇ ಹೇಳಬಹುದು. ಅದಕ್ಕೆ ಹಲವಾರು ಕಾರಣಗಳಿವೆ.

ಇದನ್ನೂ ಓದಿ : ಒಳ್ಳೆಯ ಕೆಲಸ ಮಾಡಲು ರಾಜಕೀಯ ಬೇಕೆಂದಿಲ್ಲ, ಅರವಿಂದ್ ಜಿ ಜೊತೆನೂ ರಾಜಕೀಯ ಮಾತಾಡಿಲ್ಲ: ಸೋನು

ಜನಪ್ರಿಯತೆ

ಕ್ರಿಕೆಟ್ ಆಟ ಸೀಮಿತ ದೇಶಗಳು ಆಡುವ ಒಂದು ಆಟ. ಕೇವಲ 12 ದೇಶಗಳಿಗೆ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಮಾನ್ಯತೆ ಸಿಕ್ಕಿರುವುದೇ ಇದಕ್ಕೆ ಸಾಕ್ಷಿ! ಜಗತ್ತಿನಾದ್ಯಂತ ಸುಮಾರು 100 ದೇಶಗಳು ಕ್ರಿಕೆಟ್ ಆಡುತ್ತಿದ್ದರೂ, ಈ ಆಟವನ್ನು ಗಂಭೀರವಾಗಿ ಪರಿಗಣಿಸಿರುವುದು ಕೆಲವೇ ದೇಶಗಳು. ಮತ್ತೊಂದು ಹಿನ್ನಡೆಯೆಂದರೆ, ಜಗತ್ತಿನ ಬಲಾಢ್ಯ ದೇಶಗಳು ಎನಿಸಿರುವ ಅಮೇರಿಕಾ, ಚೀನಾ, ರಷ್ಯಾ, ಜರ್ಮನಿ ಇತ್ಯಾದಿ ದೇಶಗಳಲ್ಲಿ ಕ್ರಿಕೆಟ್ ಇನ್ನೂ ಜನಪ್ರಿಯತೆ ಪಡೆಯದಿರುವುದು.

ತಯಾರಿ ಹಾಗೂ ಸಮಯ

ಕ್ರಿಕೆಟ್ ಆಟಕ್ಕಾಗಿ ಹಲವಾರು ತಯಾರಿಗಳು ಆಗಬೇಕಿದೆ. ಅದಲ್ಲದೆ, ಕನಿಷ್ಠ 2-3 ಘಂಟೆಗಳನ್ನು ಒಂದು ಪಂದ್ಯಕ್ಕೆ ಮೀಸಲಿಡಬೇಕು. ಏನೇ ಅಂದರೂ ಟಿ10 ಆಟ ಆಡಿಸಿದರೂ 120 ನಿಮಿಷಗಳು ಬೇಕಾಗಿದೆ. ಫುಟ್‌ ಬಾಲ್ ಆಟವೂ ಸುಮಾರು 90 ನಿಮಿಷ ಆಡಿಸಿದರೂ, ಸತತವಾಗಿ ಪಂದ್ಯಗಳನ್ನು ನಡೆಸಬಹುದು. ಆದರೆ, ಕ್ರಿಕೆಟ್‌ ನಲ್ಲಿ ಅದು ಕಷ್ಟಸಾಧ್ಯ. ಮಳೆ ಬಂದರೂ ಪಂದ್ಯಕ್ಕೆ ಹಿನ್ನಡೆ ಆಗುತ್ತದೆ.

ಅಂಪೈಯರಿಂಗ್ ವೈಫಲ್ಯ

ನ್ಯಾಯಯುತವಾಗಿ ಪಂದ್ಯ ನಡೆಸುವುದು ಕಷ್ಟ. ಕ್ರಿಕೆಟ್ ಅಭಿಮಾನಿಗಳಿಗೂ ಇದು ತಿಳಿದಿರುವಂತದ್ದೆ. ಹಲವಾರು ಬಾರಿ, ತೀರ್ಪುಗಳು ವಿವಾದ ಸೃಷ್ಟಿಸಿರುವುದೂ ಉಂಟು. ಎಷ್ಟೇ ತಂತ್ರಜ್ಞಾನಗಳನ್ನು ಬಳಸುತ್ತಿದ್ದರೂ, ಕೆಲವೊಂದು ಬಾರಿ ಅಂಪೈರ್‌ ಗಳಿಂದ ತಪ್ಪು ನಿರ್ಧಾರಗಳು ಬಂದಿವೆ. ಹೀಗಾಗಿ, ಸರಿಯಾದ ನಿರ್ಧಾರ ಕೈಗೊಳ್ಳಲು ಆಗದಿರುವುದು ಒಂದು ಕಾರಣ ಎನ್ನಬಹುದು.

ಪಿಚ್ ಮಾಡುವುದೂ ಸವಾಲಿನ ಕೆಲಸ

ಒಂದು ತಟಸ್ಥವಾಗಿ, ಎಲ್ಲ ತಂಡಗಳಿಗೂ ಸಮಾನ ನ್ಯಾಯ ಒದಗಿಸಬಲ್ಲ ಪಿಚ್ ನಿರ್ಮಿಸುವುದೂ ಕೂಡ ಒಂದು ಸವಾಲಿನ ಕೆಲಸ. ಆ ಯೋಜನೆ ಮಾಡುವ ದೇಶಗಳಿಗೆ ಸಹಕಾರಿಯಾಗಬಲ್ಲ ಪಿಚ್ ನಿರ್ಮಾಣ ಮಾಡುವುದು ಸರ್ವೇ ಸಾಮಾನ್ಯ. ಇದರೊಂದಿಗೆ, ಬ್ಯಾಟ್ಸ್ಮನ್ ಹಾಗೂ ಬೌಲರ್ಸ್‌ ಇಬ್ಬರಿಗೂ ಸ್ಪರ್ಧಾತ್ಮಕ ಎನ್ನಿಸಬಲ್ಲ ಪಿಚ್ ನಿರ್ಮಿಸುವುದು ಕಷ್ಟಸಾಧ್ಯ. ಏಷ್ಯಾ ಖಂಡದ ತಂಡಗಳು ಸಾಮಾನ್ಯವಾಗಿ ಸ್ಪಿನ್‌ ಗೆ ಸಹಕಾರಿಯಾಗಬಲ್ಲ ಪಿಚ್‌ ಗಳನ್ನು ನಿರ್ಮಿಸಿದರೆ, ಇತರ ದೇಶಗಳಿಗೆ ವೇಗದ ಬೌಲಿಂಗೇ ಶಕ್ತಿ!

ಉತ್ಸಾಹ ರಹಿತ ಕ್ರೀಡೆ

ಇದು ಚರ್ಚಾಸ್ಪದ ಆದರೂ, ಇತರೆ ಕ್ರೀಡೆಗಳಿಗಿಂತ ಕ್ರಿಕೆಟ್‌ ನಲ್ಲಿ ಕಡಿಮೆ ಉತ್ಸಾಹ ಇರುತ್ತದೆ. ಬೌಂಡರಿ, ಸಿಕ್ಸರ್, ವಿಕೆಟ್ ಹೋದಾಗ ಮಾತ್ರ ಒಂದು ರೀತಿಯ ಮಜಾ! ಅದಲ್ಲದೆ, ಫೀಲ್ಡರ್ಸ್‌ ಳಿಗೂ ಹೆಚ್ಚಿನ ಕೆಲಸ ಇರುವುದಿಲ್ಲ.

ಇವುಗಳೊಂದಿಗೆ, ಒಲಿಂಪಿಕ್ ಸೇರ್ಪಡೆಗೆ ಕ್ರಿಕೆಟ್ ಆಟಕ್ಕೆ ಬಹುಮತವೂ ಸಿಗದಿರಬಹುದು. ಆಗಲೇ ತಿಳಿಸಿದಂತೆ, ಬಲಾಢ್ಯ ದೇಶಗಳಲ್ಲಿ ಕ್ರಿಕೆಟ್ ಆಟಕ್ಕೆ ಪ್ರಾಮುಖ್ಯತೆ ಇಲ್ಲದಿರುವುದರಿಂದ, ಆಟ ಒಲಿಂಪಿಕ್‌ಗೆ ಸೇರ್ಪಡೆಯಾದರೂ, ಅವರಿಗೆ ಪದಕ ಗೆಲ್ಲುವ ಅವಕಾಶವೂ ಇಲ್ಲದಿರುವುದರಿಂದ, ಅಂತಹ ದೇಶಗಳು ಇದಕ್ಕೆ ಮತ ಹಾಕುವ ಸಾಧ್ಯತೆ ತೀರಾ ಕಡಿಮೆ. ಅದಲ್ಲದೆ, ಏನೋ ಅದೃಷ್ಟದಲ್ಲಿ ಒಲಿಂಪಿಕ್‌ಗೆ ಕ್ರಿಕೆಟ್ ಸೇರ್ಪಡೆಯಾದರೂ, ಸೆಮಿಫೈನಲ್‌ಗೆ ಏರುವ 4 ತಂಡಗಳನ್ನು ನಾವು ಮೊದಲೇ ಊಹಿಸಬಹುದು.

ಹೀಗಾಗಿ, ವಿಶ್ವಕಪ್, ಏಷ್ಯಾಕಪ್, ಟೆಸ್ಟ್ ಚಾಂಪಿಯನ್‌ಶಿಪ್ ಹಾಗೂ ಇತರ ಸರಣಿಗಳಲ್ಲಿ ಮಾತ್ರ ಸದ್ಯ ಕ್ರಿಕೆಟಾಭಿಮಾನಿಗಳು ಮನರಂಜನೆ ಪಡೆಯಬಹುದು. ಮುಂದಿನ ದಿನಗಳಲ್ಲಿ ಒಲಿಂಪಿಕ್ಸ್‌ ನಲ್ಲೂ ಕ್ರಿಕೆಟ್ ರಸದೌತಣವನ್ನು ಸವಿಯುವ ಅವಕಾಶ ಅಭಿಮಾನಿಗಳಿಗೆ ಸಿಗಲಿ ಎಂದು ಆಶಿಸೋಣ.

-ಇಂದುಧರ ಹಳೆಯಂಗಡಿ

ಇದನ್ನೂ ಓದಿ : ಒಳ್ಳೆಯ ಕೆಲಸ ಮಾಡಲು ರಾಜಕೀಯ ಬೇಕೆಂದಿಲ್ಲ, ಅರವಿಂದ್ ಜಿ ಜೊತೆನೂ ರಾಜಕೀಯ ಮಾತಾಡಿಲ್ಲ: ಸೋನು

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.