ಐಒಸಿ ಅಂಗಳದಲ್ಲಿದೆ “ಟೋಕಿಯೊ ಚೆಂಡು’

ಯಾವುದೇ ನಿರ್ಧಾರಕ್ಕೆ ಬರಲು ಐಒಸಿಗೆ ಮೂರು ಎರಡರ ಬಹುಮತ ಅಗತ್ಯ

Team Udayavani, Mar 21, 2020, 10:40 PM IST

ಐಒಸಿ ಅಂಗಳದಲ್ಲಿದೆ “ಟೋಕಿಯೊ ಚೆಂಡು’

ಟೋಕಿಯೊ: ಹೌದು, ಟೋಕಿಯೊ ಚೆಂಡು ಅಂತಾ ರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿಯ (ಐಒಸಿ) ಅಂಗಳದಲ್ಲಿದೆ. “ಆಟಗಾರರ ಸುರಕ್ಷತೆ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದ್ದರೆ ಕ್ರೀಡಾಕೂಟವನ್ನು ರದ್ದುಗೊಳಿಸಲಾಗುವುದು’-ಎಂಬ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ ಶರತ್ತಿಗೆ ಆತಿಥೇಯ ದೇಶದ ಒಲಿಂಪಿಕ್ಸ್‌ ಸಮಿತಿ ಮೊದಲೇ ಸಹಿ ಹಾಕಿರುತ್ತದೆ. ಇದಕ್ಕೆ ಟೋಕಿಯೊ ಒಲಿಂಪಿಕ್ಸ್‌ ಕೂಡ ಹೊರತಲ್ಲ. ಹೀಗಾಗಿ ಕೊರೊನಾ ಭೀತಿಗೆ ಸಿಲುಕಿರುವ ಟೋಕಿಯೊ ಒಲಿಂಪಿಕ್ಸ್‌ ಭವಿಷ್ಯವನ್ನು ಐಒಸಿಯೇ ನಿರ್ಧರಿಸಬೇಕಿದೆ.

ಜಪಾನ್‌ ಮಾತ್ರ ನಿಗದಿತ ವೇಳಾಪಟ್ಟಿಯಂತೆಯೇ ಒಲಿಂಪಿಕ್ಸ್‌ ನಡೆಸುವ ವಿಶ್ವಾಸದಲ್ಲಿದೆ. ಕೂಟಕ್ಕೆ ಇನ್ನೂ 4 ತಿಂಗಳಿದೆ, ಅಷ್ಟರಲ್ಲಿ ಕೊರೊನಾ ಹತೋಟಿಗೆ ಬಂದು, ಕೂಟ ಯಶಸ್ವಿಯಾಗಿ ನಡೆಯಲಿದೆ ಎಂಬ ನಂಬಿಕೆ ಜಪಾನಿನದ್ದು.

ಮುಹಾಯುದ್ಧವಷ್ಟೇ ಅಡ್ಡಿಯಾಗಿತ್ತು
1896ರಲ್ಲಿ ಆಧುನಿಕ ಒಲಿಂಪಿಕ್ಸ್‌ ಮೊದಲ್ಗೊಂಡ ಬಳಿಕ ಈವರೆಗೆ ಈ ಕ್ರೀಡಾಕೂಟ ಮಹಾಯುದ್ಧಗಳ ಕಾರಣ ಹೊರತುಪಡಿಸಿ ಬೇರೆ ಯಾವುದೇ ಕಾರಣಕ್ಕೂ ರದ್ದುಗೊಂಡದ್ದಿಲ್ಲ. ಮಹಾಯುದ್ಧಕ್ಕೆ 1916, 1940 ಮತ್ತು 1944ರ ಒಲಿಂಪಿಕ್ಸ್‌ ಬಲಿಯಾಗಿದ್ದವು. ಉಳಿದಂತೆ ನಾನಾ ಬಹಿಷ್ಕಾರಗಳ ನಡುವೆಯೂ ಮಾಂಟ್ರಿಯಲ್‌ (1976), ಮಾಸ್ಕೊ (1980), ಲಾಸ್‌ ಏಂಜಲೀಸ್‌ (1984) ಒಲಿಂಪಿಕ್ಸ್‌ ಯಶಸ್ವಿಯಾಗಿ ನಡೆದಿದ್ದವು.

ಇಂದು ಕೊರೊನಾ ಭೀತಿ ಎದುರಾದಂತೆ 2004ರ ಅಥೇನ್ಸ್‌ ಒಲಿಂಪಿಕ್ಸ್‌ಗೆ ಸಾರ್ ವೈರಸ್‌ ಕಂಟಕ ಕಾಡಿತ್ತು. ಆದರೂ ಕೂಟ ರದ್ದುಗೊಂಡಿರಲಿಲ್ಲ. ಹಾಗೆಯೇ 2016ರ ರಿಯೋ ಡಿ ಜನೈರೊ ಒಲಿಂಪಿಕ್ಸ್‌ ವೇಳೆ ಝೀಕಾ ವೈರಸ್‌ ಕಾಟವಿತ್ತು. ಕೂಟ ಯಶಸ್ವಿಯಾಗಿಯೇ ನಡೆದಿತ್ತು. ಹೀಗಾಗಿ ಕೊರೊನಾ ಹತೋಟಿಗೆ ಬಂದರೆ ಜುಲೈ-ಆಗಸ್ಟ್‌ ತಿಂಗಳಲ್ಲಿ ನಡೆಯುವ ಟೋಕಿಯೊ ಒಲಿಂಪಿಕ್ಸ್‌ಗೆ ಯಾವುದೇ ಅಡಚಣೆಯಾಗದು ಎಂಬುದು ಆಯೋಜಕರ ಲೆಕ್ಕಾಚಾರ.

ಐಒಸಿಯ ಸದ್ಯದ ನಿರ್ಧಾರ…
ಆದರೆ ಐಒಸಿ ಈ ನಿಟ್ಟಿನಲ್ಲಿ ಯಾವ ಹೆಜ್ಜೆ ಇರಿಸೀತು ಎಂಬುದರ ಮೇಲೆ ಟೋಕಿಯೊ ಒಲಿಂಪಿಕ್ಸ್‌ ಭವಿಷ್ಯ ಅವಲಂಬಿಸಿದೆ. ಕೂಟವನ್ನು ರದ್ದುಪಡಿಸುವ ಅಥವಾ ಮುಂದೂಡುವ ಸಂಪೂರ್ಣ ನಿರ್ಧಾರ ಐಒಸಿಯದ್ದು. ಆದರೆ ಇದಕ್ಕೆ ಮೂರು ಎರಡರಷ್ಟು ಬಹುಮತ ಅಗತ್ಯ. ಅಧ್ಯಕ್ಷ ಥಾಮಸ್‌ ಬಾಕ್‌ ಪ್ರಕಾರ ವೇಳಾಪಟ್ಟಿಯಂದೇ ಒಲಿಂಪಿಕ್ಸ್‌ ಆರಂಭಿಸುವುದು ಐಒಸಿಯ ಪ್ರಮುಖ ಗುರಿ.

ಈ ನಿಟ್ಟಿನಲ್ಲಿ ವರ್ಲ್ಡ್ ಹೆಲ್ತ್‌ ಆರ್ಗನೈಸೇಶನ್‌ (ಡಬ್ಲ್ಯುಎಚ್‌ಒ), ಟೋಕಿಯೊ 2020 ಸಂಘಟನಾ ಸಮಿತಿ, ಟೋಕಿಯೊ ಮೆಟ್ರೊಪೊಲಿಟನ್‌ ಗವರ್ನ್ಮೆಂಟ್‌ ಜತೆ ಐಒಸಿ ನಿರಂತರ ಸಂಪರ್ಕ ಇರಿಸಿಕೊಂಡಿದೆ. ಆದರೆ ನಿಬಿಡ ಅಂತಾರಾಷ್ಟ್ರೀಯ ಕ್ರೀಡಾ ಕ್ಯಾಲೆಂಡರ್‌ ಹಿನ್ನೆಲೆಯಲ್ಲಿ ಒಲಿಂಪಿಕ್ಸ್‌ ಕೂಟವನ್ನು ಮುಂದೂಡುವುದು ಅಸಾಧ್ಯ ಎಂದೇ ಹೇಳಲಾಗುತ್ತದೆ. ಆಗ ಇದನ್ನು ರದ್ದುಪಡಿಸುವುದೇ ಏಕೈಕ ಮಾರ್ಗವಾಗಿರುತ್ತದೆ.

ಒಂದು ವರ್ಷ ಮುಂದೂಡುವುದು ಉತ್ತಮ: ಉಸೇನ್‌ ಬೋಲ್ಟ್ ಕೋಚ್‌
ಟೋಕಿಯೊ ಒಲಿಂಪಿಕ್ಸ್‌ ಕೂಟವನ್ನು ಒಂದು ವರ್ಷ ಕಾಲ ಮುಂದೂಡುವುದು ಉತ್ತಮ ನಿರ್ಧಾರವಾಗಲಿದೆ ಎಂಬುದಾಗಿ ಜಮೈಕನ್‌ ಸ್ಪ್ರಿಂಟರ್‌ ಉಸೇನ್‌ ಬೋಲ್ಟ್ ಅವರ ಕೋಚ್‌ ಗ್ಲೆನ್‌ ಮಿಲ್ಸ್‌ ಅಭಿಪ್ರಾಯಪಟ್ಟಿದ್ದಾರೆ.

“ಟೋಕಿಯೊ ಒಲಿಂಪಿಕ್ಸ್‌ ನಿಗದಿತ ದಿನಾಂಕದಂದೇ ನಡೆಯಲಿದೆ ಎಂಬ ನಂಬಿಕೆ ನನಗಿಲ್ಲ. ನಡೆದರೂ ಇದು ಯಶಸ್ವಿಯಾಗುವುದು ಅನುಮಾನ. ಇದಕ್ಕಿರುವ ಒಂದೇ ಪರಿಹಾರವೆಂದರೆ ಕೂಟವನ್ನೇ ಒಂದು ವರ್ಷದ ಮಟ್ಟಿಗೆ ಮುಂದೂಡುವುದು’ ಎಂಬುದಾಗಿ ಮಿಲ್ಸ್‌ ಹೇಳಿದ್ದಾರೆ.

ಉಸೇನ್‌ ಬೋಲ್ಟ್ ಅವರ 8 ಒಲಿಂಪಿಕ್ಸ್‌ ಚಿನ್ನ ಹಾಗೂ 11 ವಿಶ್ವ ಚಾಂಪಿಯನ್‌ಶಿಪ್‌ ಪ್ರಶಸ್ತಿಗಳ ಹಿಂದೆ ಗ್ಲೆನ್‌ ಮಿಲ್ಸ್‌ ಅವರ ಮಾರ್ಗದರ್ಶನ ಇರುವುದನ್ನು ಮರೆಯುವಂತಿಲ್ಲ.

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.