ಮೂರನೇ ದಿನ ಮಳೆಯದೇ ಆಟ


Team Udayavani, Jan 8, 2018, 12:30 PM IST

08-8.jpg

ಕೇಪ್‌ಟೌನ್‌: ರವಿವಾರ ಕೇಪ್‌ಟೌನ್‌ನಲ್ಲಿ ಸುರಿದ ಸತತ ಮಳೆಯಿಂದಾಗಿ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್‌ ಪಂದ್ಯದ 3ನೇ ದಿನದಾಟ ಒಂದೂ ಎಸೆತ ಕಾಣದೆ ರದ್ದುಗೊಂಡಿದೆ. ಇದು ಆತಿಥೇಯರ ಮೇಲುಗೈಗೆ ತಡೆಯಾಗಿ ಪರಿಣಮಿಸೀತೇ ಎಂಬುದು ಭಾರತದ ಕ್ರಿಕೆಟ್‌ ಅಭಿಮಾಗಳ ಕುತೂಹಲ!

ಬೆಳಗ್ಗಿನಿಂದಲೇ ಸುರಿಯಲಾರಂಭಿಸಿದ ಮಳೆ ಯಿಂದ ಆಟ ಅಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣ ವಾಗುತ್ತ ಹೋಯಿತು. ಅಂತಿಮವಾಗಿ ಮಧ್ಯಾಹ್ನ 3.30ಕ್ಕೆ ದಿನದಾಟವನ್ನು ರದ್ದುಗೊಳಿಸಲು ನಿರ್ಧ ರಿಸಲಾಯಿತು. ಇದರಿಂದ ಉಳಿದೆರಡು ದಿನಗಳಲ್ಲಿ ತಲಾ 98 ಓವರ್‌ಗಳ ಆಟ ನಡೆಯಲಿದೆ. ಪಂದ್ಯ ಸ್ಥಳೀಯ ಕಾಲಮಾನದಂತೆ 10.30ಕ್ಕೆ ಆರಂಭ ವಾಗಲಿದ್ದು, ಕೊನೆಯ 2 ಅವಧಿಗಳ ಆಟವನ್ನು ತಲಾ 15 ನಿಮಿಷ ವಿಸ್ತರಿಸಲಾಗುವುದು. ಸೋಮ, ಮಂಗಳ ವಾರ ಕೇಪ್‌ಟೌನ್‌ನಲ್ಲಿ ಬಿಸಿಲಿನ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಆಟ ಆರಂಭಗೊಳ್ಳದಿದ್ದುದರಿಂದ ರೊಚ್ಚಿಗೆದ್ದ ಕೆಲವು ಪಾನಮತ್ತ ವೀಕ್ಷಕರು 3 ಸಲ ಅಂಗಳಕ್ಕಿಳಿದು ದಾಂಧಲೆ ಮಾಡಿದ ಘಟನೆಯೂ ಸಂಭವಿಸಿತು. ಪಿಚ್‌ ಮೇಲೆ ಓಡಾಡಿದ ಇವರನ್ನು ಬಳಿಕ ಭದ್ರತಾ ಸಿಬಂದಿಗಳು ವಶಕ್ಕೆ ತೆಗೆದುಕೊಂಡರು.

ಒಟ್ಟು 142 ರನ್‌ ಮುನ್ನಡೆಯಲ್ಲಿರುವ ದಕ್ಷಿಣ ಆಫ್ರಿಕಾ ಈ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ. ಮುನ್ನಡೆಯನ್ನು 300 ರನ್ನಿಗೆ ವಿಸ್ತರಿಸಿದರೂ ಭಾರತಕ್ಕೆ ಚೇಸಿಂಗ್‌ ಕಷ್ಟವಾಗುವ ಸಾಧ್ಯತೆ ಇದೆ. ದಕ್ಷಿಣ ಆಫ್ರಿಕಾದ 286ಕ್ಕೆ ಉತ್ತರವಾಗಿ ತೀವ್ರ ಕುಸಿತ ಕಂಡ ಭಾರತ, ಹಾರ್ದಿಕ್‌ ಪಾಂಡ್ಯ ಅವರ ದಿಟ್ಟ ಆಟದ ನೆರವಿನಿಂದ 209 ರನ್‌ ಗಳಿಸಿತ್ತು. ದ್ವಿತೀಯ ದಿನದಾಟದ ಕೊನೆಯಲ್ಲಿ ದಕ್ಷಿಣ ಆಫ್ರಿಕಾ 2 ವಿಕೆಟ್‌ ಕಳೆದುಕೊಂಡು 65 ರನ್‌ ಗಳಿಸಿದೆ. 

ಗಾಯಾಳು ಡೇಲ್‌ ಸ್ಟೇನ್‌ ಸರಣಿಯಿಂದಲೇ  ಔಟ್‌
ಕೇಪ್‌ಟೌನ್‌: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲನೇ ಟೆಸ್ಟ್‌ ಪಂದ್ಯದ ದ್ವಿತೀಯ ದಿನದಾಟದ ವೇಳೆ ದಕ್ಷಿಣ ಆಫ್ರಿಕಾದ ವೇಗಿ ಡೇಲ್‌ ಸ್ಟೇನ್‌ ಗಂಭೀರ ಗಾಯಕ್ಕೆ ತುತ್ತಾಗಿದ್ದು, ಸರಣಿಯಿಂದಲೇ ಹೊರಬಿದ್ದಿದ್ದಾರೆ. ಇದರೊಂದಿಗೆ ಸರಣಿ ಆರಂಭದಲ್ಲೇ ಆತಿಥೇಯ ತಂಡ ಭಾರೀ ಹೊಡೆತ ಅನುಭವಿಸಿದೆ.

ಸ್ಟೇನ್‌ 18ನೇ ಓವರ್‌ ಎಸೆಯುವ ವೇಳೆ ಎಡಗಾಲಿನ ಹಿಮ್ಮಡಿಗೆ ಗಾಯ ಮಾಡಿಕೊಂಡಿ ದ್ದಾರೆ. ಅನಂತರ ಮೈದಾನಕ್ಕೆ ಇಳಿದಿಲ್ಲ. ಪರೀಕ್ಷೆ ನಡೆಸಿದ ವೈದ್ಯರು 4ರಿಂದ 6 ವಾರ ಕಾಲ ವಿಶ್ರಾಂತಿ ಅಗತ್ಯವಿದೆ ಎಂದು ಸೂಚಿಸಿದ್ದಾರೆ. ಸುದೀರ್ಘ‌ ಕಾಲದ ಬಳಿಕ ಭಾರತದೆದುರಿನ ಸರಣಿಗಾಗಿ ಆಫ್ರಿಕಾ ತಂಡಕ್ಕೆ ಮರಳಿದ ಸ್ಟೇನ್‌, ಈ ಸರಣಿಯಲ್ಲಿ 2 ದಿನ ಆಡುವುದರೊಳಗಾಗಿ ಹೊರಬಿದ್ದಿರುವುದೊಂದು ವಿಪರ್ಯಾಸ.

ಕೇಪ್‌ಟೌನ್‌ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಸ್ಟೇನ್‌ 51 ರನ್ನಿಗೆ 2 ವಿಕೆಟ್‌ ಪಡೆದಿದ್ದರು.

ಸ್ಕೋರ್‌ಪಟ್ಟಿ
ದಕ್ಷಿಣ ಆಫ್ರಿಕಾ ಪ್ರಥಮ ಇನ್ನಿಂಗ್ಸ್‌    286
ಭಾರತ ಪ್ರಥಮ ಇನ್ನಿಂಗ್ಸ್‌    209
ದಕ್ಷಿಣ ಆಫ್ರಿಕಾ ದ್ವಿತೀಯ ಇನ್ನಿಂಗ್ಸ್‌

ಐಡನ್‌ ಮಾರ್ಕ್‌ರಮ್‌    ಸಿ ಭುವಿ ಬಿ ಪಾಂಡ್ಯ    34
ಡೀನ್‌ ಎಲ್ಗರ್‌    ಸಿ ಸಾಹಾ ಬಿ ಪಾಂಡ್ಯ    25
ಕಾಗಿಸೊ ರಬಾಡ    ಬ್ಯಾಟಿಂಗ್‌    2
ಹಾಶಿಮ್‌ ಆಮ್ಲ    ಬ್ಯಾಟಿಂಗ್‌    4

ಇತರ        0
ಒಟ್ಟು  (2 ವಿಕೆಟಿಗೆ)        65
ವಿಕೆಟ್‌ ಪತನ: 1-52, 2-59.

ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌        6-3-16-0
ಜಸ್‌ಪ್ರೀತ್‌ ಬುಮ್ರಾ        4-0-14-0
ಮೊಹಮ್ಮದ್‌ ಶಮಿ        5-1-15-0
ಹಾರ್ದಿಕ್‌ ಪಾಂಡ್ಯ        4-0-17-2
ಆರ್‌. ಅಶ್ವಿ‌ನ್‌        1-0-3-0 
(ಎರಡನೇ ದಿನದ ಅಂತ್ಯಕ್ಕೆ)

ಟಾಪ್ ನ್ಯೂಸ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.