ವಿಶ್ವಕಪ್‌ ಬಳಿಕ ಗೇಲ್‌ ಆಟ ಇಲ್ಲ


Team Udayavani, Feb 19, 2019, 12:30 AM IST

chris-gayle-one-day-international.jpg

ಕಿಂಗ್ಸ್‌ಟನ್‌ (ಜಮೈಕಾ): ಜಾಗತಿಕ ಕ್ರಿಕೆಟ್‌ ಕಂಡ ಸ್ಫೋಟಕ ಬ್ಯಾಟ್ಸ್‌ಮನ್‌, ವೆಸ್ಟ್‌ ಇಂಡೀಸಿನ ದೈತ್ಯ ಆಟಗಾರ ಕ್ರಿಸ್‌ ಗೇಲ್‌ ನಿವೃತ್ತಿ ಕುರಿತು ಮಾತಾಡಿದ್ದಾರೆ. 2019ರ ವಿಶ್ವಕಪ್‌ ಬಳಿಕ ತಾನು ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಸರಿಯಲಿದ್ದೇನೆ ಎಂದಿದ್ದಾರೆ.

ಜಾಗತಿಕ ಕ್ರಿಕೆಟಿನ “ಶೋ ಮ್ಯಾನ್‌’ ಜತೆಗೆ “ಶೋಕಿ ಮ್ಯಾನ್‌’ ಕೂಡ ಆಗಿರುವ 39ರ ಹರೆಯದ ಕ್ರಿಸ್ಟೋಫ‌ರ್‌ ಹೆನ್ರಿ ಗೇಲ್‌ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್‌ ಹೊಡೆದ ವೆಸ್ಟ್‌ ಇಂಡೀಸಿನ 2ನೇ ಆಟಗಾರನಾಗಿದ್ದಾರೆ. ಇನ್ನು 223 ರನ್‌ ಹೊಡೆದರೆ 10 ಸಾವಿರ ರನ್‌ ಕ್ಲಬ್‌ ಸೇರಲಿದ್ದಾರೆ. ಬ್ರಿಯಾನ್‌ ಲಾರಾ 10,405 ರನ್‌ ಹೊಡೆದದ್ದು ಏಕದಿನದಲ್ಲಿ ವಿಂಡೀಸಿನ ದಾಖಲೆಯಾಗಿದೆ.

ವಿಶ್ವಕಪ್‌ನಲ್ಲಿ ಮೊದಲ ದ್ವಿಶತಕ
ಕ್ರಿಸ್‌ ಗೇಲ್‌ ಅವರದು ಭರ್ತಿ 2 ದಶಕಗಳ ಏಕದಿನ ಪಯಣ. 1999ರಲ್ಲಿ ಭಾರತದ ವಿರುದ್ಧ ಏಕದಿಕ್ಕೆ ಪದಾರ್ಪಣೆ ಮಾಡಿದ ಗೇಲ್‌ ಈವರೆಗೆ 284 ಪಂದ್ಯಗಳಿಂದ 9,727 ರನ್‌ ಹೊಡೆದಿದ್ದಾರೆ.

ಏಕದಿನದಲ್ಲಿ ದ್ವಿಶತಕ ಬಾರಿಸಿದ ವೆಸ್ಟ್‌ ಇಂಡೀಸಿನ ಏಕೈಕ ಬ್ಯಾಟ್ಸ್‌ಮನ್‌ ಎಂಬುದು ಗೇಲ್‌ ಪಾಲಿನ ಹೆಗ್ಗಳಿಕೆ. ಈ ಸಾಧನೆಯನ್ನು ಅವರು ಜಿಂಬಾಬ್ವೆ ವಿರುದ್ಧದ 2015ರ ವಿಶ್ವಕಪ್‌ ಲೀಗ್‌ ಪಂದ್ಯದಲ್ಲಿ ಬಾರಿಸಿದ್ದರು. ಇದು ವಿಶ್ವಕಪ್‌ ಇತಿಹಾಸದಲ್ಲಿ ದಾಖಲಾದ ಪ್ರಪ್ರಥಮ ಡಬಲ್‌ ಸೆಂಚುರಿ ಎಂಬುದನ್ನು ಮರೆಯುವಂತಿಲ್ಲ.

ಮಂಡಳಿ ಜತೆ ಜಟಾಪಟಿ
ಕ್ರಿಕೆಟ್‌ ಮಂಡಳಿ ಜತೆಗಿನ ಜಟಾಪಟಿ, ವೇತನ ವಿವಾದ, ಇತರ ಲೀಗ್‌ಗಳಲ್ಲಿ ಹೆಚ್ಚಿನ ಆಸಕ್ತಿ… ಮುಂತಾದ ಕಾರಣಗಳಿಂದ ಕ್ರಿಸ್‌ ಗೇಲ್‌ ಇತ್ತೀಚಿನ ವರ್ಷಗಳಲ್ಲಿ ವೆಸ್ಟ್‌ ಇಂಡೀಸ್‌ ಪರ ಆಡಿದ್ದೇ ಕಡಿಮೆ. 2015ರ ಏಕದಿನ ವಿಶ್ವಕಪ್‌ ಬಳಿಕ ಗೇಲ್‌ ಕಾಣಿಸಿಕೊಂಡದ್ದು 15 ಪಂದ್ಯಗಳಲ್ಲಿ ಮಾತ್ರ. ಇದರಲ್ಲಿ ಕಳೆದ ವರ್ಷ ಜಿಂಬಾಬ್ವೆಯಲ್ಲಿ ಆಡಲಾದ ವಿಶ್ವಕಪ್‌ ಅರ್ಹತಾ ಪಂದ್ಯವೂ ಸೇರಿದೆ. ಉಳಿದಂತೆ ಗೇಲ್‌ ಸುದ್ದಿಯಲ್ಲಿರುವುದು ಐಪಿಎಲ್‌ ಮೊದಲಾದ ಟಿ20 ಲೀಗ್‌ಗಳಲ್ಲಿ ಮಾತ್ರ.

ತವರಿನಲ್ಲಿ ಕೊನೆಯ ಆಟ
ಬುಧವಾರದಿಂದ ಬಾರ್ಬಡಾಸ್‌ನಲ್ಲಿ ಆರಂಭವಾಗಲಿರುವ ಪ್ರವಾಸಿ ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಗಾಗಿ ಕ್ರಿಸ್‌ ಗೇಲ್‌ ಅವರನ್ನು ಮರಳಿ ವಿಂಡೀಸ್‌ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. “ತವರಿನಂಗಳದಲ್ಲಿ ನಾನು ಕೊನೆಯ ಸಲ ಆಡುವುದನ್ನು ಅಭಿಮಾನಿಗಳು ಕಾಣಲಿದ್ದಾರೆ’ ಎಂದು ಗೇಲ್‌ ಹೇಳಿದ್ದಾರೆ.

“ಅನುಮಾನವೇ ಇಲ್ಲ, ಮುಂದಿನ ವಿಶ್ವಕಪ್‌ ಕೂಟವೇ ನನ್ನ ಏಕದಿನ ಕ್ರಿಕೆಟಿನ ಅಂತಿಮ ನಿಲ್ದಾಣ. ವಿಶ್ವಕಪ್‌ ಗೆಲುವು ಒಂದು ಸುಂದರ ಕತೆ. ತಂಡದಲ್ಲಿರುವ ಯುವ ಆಟಗಾರರು ನನಗಾಗಿ ಕಪ್‌ ಗೆದ್ದು ಕೊಡಬಹುದೆಂಬ ನಂಬಿಕೆ ಇದೆ. ಇಂಥ ಒಂದು ಕ್ಷಣಕ್ಕಾಗಿ ನಾನು ಕಾಯುತ್ತಿದ್ದೇನೆ’ ಎಂದು ಕ್ರಿಸ್‌ ಗೇಲ್‌ ಹೇಳಿದ್ದಾರೆ.

ಗೇಲ್‌ ಏಕದಿನ ಸಾಧನೆ
* 284 ಪಂದ್ಯ
* 9,727 ರನ್‌
* 23 ಶತಕ
* 49 ಅರ್ಧ ಶತಕ
* 215 ಸರ್ವಾಧಿಕ
* 85.82 ಸ್ಟ್ರೈಕ್‌ರೇಟ್‌
* 1,073 ಬೌಂಡರಿ
* 275 ಸಿಕ್ಸರ್‌

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewqe

Olympics ಅರ್ಹತೆ ತಪ್ಪುವ ಭೀತಿಯಲ್ಲಿ ದೀಪಕ್‌, ಸುಜೀತ್‌

1-wqewqewq

Doping: ಶಾಲು ಚೌಧರಿ ದೋಷಮುಕ್ತ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.