ರಣಜಿ ಕ್ವಾರ್ಟರ್ ಫೈನಲ್ಗೆ ಶಾರ್ದೂಲ್ ಠಾಕೂರ್ ಇಲ್ಲ
Team Udayavani, Dec 3, 2017, 6:25 AM IST
ಮುಂಬಯಿ: ಮುಂಬಯಿಯ ಪೇಸ್ ಬೌಲರ್ ಶಾರ್ದೂಲ್ ಠಾಕೂರ್ ಗಾಯಾಳಾಗಿದ್ದು, ಕರ್ನಾಟಕ ವಿರುದ್ಧದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಿಂದ ಹೊರಗುಳಿಯಲಿದ್ದಾರೆ. ತ್ರಿಪುರ ವಿರುದ್ಧದ ಲೀಗ್ ಪಂದ್ಯದ ವೇಳೆ ಕ್ಷೇತ್ರರಕ್ಷಣೆ ಮಾಡುತ್ತಿದ್ದಾಗ ಅವರು ಎಡ ಭುಜದ ನೋವಿಗೆ ಒಳಗಾಗಿದ್ದರು.
ಪ್ರತಿಭಾನ್ವಿತ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಸೇವೆಯೂ ಮುಂಬಯಿಗೆ ಲಭ್ಯವಾಗದು. ಅವರು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗಾಗಿ ಭಾರತದ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮುಂಬಯಿ ತಂಡವನ್ನು ಶನಿವಾರ ಪ್ರಕಟಿಸಲಾಗಿದ್ದು, ಆದಿತ್ಯ ತಾರೆ ನಾಯಕರಾಗಿರುತ್ತಾರೆ. ಕ್ವಾರ್ಟರ್ ಫೈನಲ್ ಪಂದ್ಯ ಡಿ. 7ರಿಂದ ನಾಗ್ಪುರದಲ್ಲಿ ನಡೆಯಲಿದೆ.
ಮುಂಬಯಿ ತಂಡ: ಆದಿತ್ಯ ತಾರೆ (ನಾಯಕ), ಸೂರ್ಯಕುಮಾರ್ ಯಾದವ್ (ಉಪನಾಯಕ), ಧವಳ್ ಕುಲಕರ್ಣಿ, ಸಿದ್ದೇಶ್ ಲಾಡ್, ಜಾಯ್ ಬಿಸ್ಟಾ, ಪೃಥ್ವಿ ಷಾ, ಅಖೀಲ್ ಹೆರ್ವಾಡ್ಕರ್, ಸುಫಿಯಾನ್ ಶೇಖ್, ಆಕಾಶ್ ಪಾರ್ಕರ್, ಕರ್ಶ್ ಕೊಠಾರಿ, ಸಾಗರ್ ತ್ರಿವೇದಿ, ವಿಜಯ್ ಗೋಹಿಲ್, ಶಿವಂ ಮಲ್ಹೋತ್ರಾ, ಶಿವಂ ದುಬೆ ಮತ್ತು ಶುಭಂ ರಂಜನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ