ಪುನೇರಿ ಡಿಚ್ಚಿಗೆ ಮುಳುಗಿದ ಟೈಟಾನ್‌


Team Udayavani, Sep 8, 2017, 10:17 AM IST

08-SPORTS-4.jpg

ಕೋಲ್ಕತ್ತಾ: ತೆಲುಗು ಟೈಟಾನ್ಸ್‌ನ ಆಟಗಾರರನ್ನು ಪ್ರತಿ ಹಂತದಲ್ಲೂ ಕೋರ್ಟಿನಿಂದ ತೊಲಗುವಂತೆ ಮಾಡಿದ ಪುನೇರಿ ಪಲ್ಟಾನ್‌ 42-37 ರಿಂದ ಸುಲಭ ಜಯ ದಾಖಲಿಸಿತು. ಆರಂಭದಲ್ಲಿ ಆಟ ಮರೆತಂತೆ ಆಡಿದ ಟೈಟಾನ್ಸ್‌, ಕೊನೆಯ ಹಂತದಲ್ಲಿ ಫೀನಿಕ್ಸ್ನಂತೆ ಏಳುವ ಹೊತ್ತಿಗೆ, ವಿಜಯಲಕ್ಷ್ಮೀಯ ಮಾಲೆ ಪುನೇರಿಯ ಕೊರಳಿಗೆ ಬಿದ್ದಿತ್ತು!

ಇಲ್ಲಿನ ನೇತಾಜಿ ಸುಭಾಶ್‌ ಚಂದ್ರ ಬೋಸ್‌ ಕ್ರೀಡಾಂಗಣದಲ್ಲಿ ಪುನೇರಿ ಪಲ್ಟಾನ್‌ನ ಮುಂದೆ ಅಸಹಾಯಕವಾಗಿ ನಿಂತಂತಿದ್ದ ಟೈಟಾನ್ಸ್‌, ಖಾತೆ ತೆರೆದಿದ್ದೇ 10ನೇ ನಿಮಿಷದಲ್ಲಿ! ಅಷ್ಟರಲ್ಲಾಗಲೇ ಪುನೇರಿ 18 ಅಂಕಗಳಿಂದ ಎಷ್ಟೋ ದೂರ ಮುಂದೆ ಹೋಗಿತ್ತು. ಕೊನೆಯ ಹಂತದಲ್ಲಿ ಮೈಚಳಿ ಬಿಟ್ಟು
ಆಡಿದರೂ, ಅದು ಪ್ರಯೋಜನವಾಗಲಿಲ್ಲ. 

ಟೈಟಾನ್ಸ್‌ಗೆ ಆರಂಭದ ವಿಘ್ನ: ರಾಹುಲ್‌ ಚೌಧರಿಯಂಥ ಸ್ಟಾರ್‌ ರೈಡರ್‌ನನ್ನು ಇಟ್ಟುಕೊಂಡೂ ಟೈಟಾನ್‌ 6ನೇ ನಿಮಿಷದಲ್ಲಿ ಮೊದಲ ಬಾರಿಗೆ ಆಲ್‌ಔಟ್‌ ಆಯಿತು. ಪುಣೇರಿ ಕಪ್ತಾನ ದೀಪಕ್‌ ಹೂಡಾರ ತಣ್ಣನೆಯ ಆಕ್ರಮಣಕ್ಕೆ ಬೆಚ್ಚಿದ ಟೈಟಾನ್ಸ್‌, ಕೋಟೆ ರಕ್ಷಿಸಿಕೊಳ್ಳುವಲ್ಲೂ ತಾನು ದುರ್ಬಲ ಅಂತ ತೋರಿಸಿಕೊಟ್ಟಿತು. ಮೊದಲಾರ್ಧ ಮುಗಿಯುವ ಹೊತ್ತಿಗೆ ಪುನೇರಿ 26-12 ರಿಂದ ಮುಂದಿತ್ತು.

ದ್ವಿತೀಯಾರ್ಧದಲ್ಲಿ ಟ್ವಿಸ್ಟ್‌: ಪುನೇರಿಯ ಪಟ್ಟುಗಳಿಗೆ ಕಂಗಾಲಾಗಿ ಹೋಗಿದ್ದ, ಟೈಟಾನ್ಸ್‌ ದ್ವಿತೀಯಾರ್ಧದಲ್ಲಿ ಮೈಕೊಡವಿ ಮೇಲೇಳಲು ಯತ್ನಿಸಿತು. ರಾಹುಲ್‌ ಚೌಧರಿ ತಮ್ಮ ನೈಜ ಪ್ರದರ್ಶನ ನೀಡಿದಾಗ, ಟೈಟಾನ್ಸ್‌ ಕೊಂಚ ನಿಟ್ಟುಸಿರು ಬಿಟ್ಟಿತು. 35ನೇ ನಿಮಿಷದಲ್ಲಿ ರಾಹುಲ್‌ ತಂದ 3 ಸೂಪರ್‌ ರೈಡಿಂಗ್‌ ಪಾಯಿಂಟ್‌, ಅದರ ಬೆನ್ನಲ್ಲೇ ಪುಣೆ ಆಲ್‌ಔಟ್‌ ಆಗಿ ಟೈಟಾನ್ಸ್‌ನ ಅಂಕ ಹೆಚ್ಚಿಸಿದವು. ಟೈಟಾನ್ಸ್‌ ಅನ್ನು ಅಷ್ಟು ಸೀರಿಯಸ್ಸಾಗಿ ತೆಗೆದುಕೊಳ್ಳದ ದೀಪಕ್‌ ಹೂಡಾ ಆರಾಮಾಗಿ, ಅಂಕಗಳನ್ನು ತಂಡದ ಖಾತೆಗೆ ಸೇರಿಸುತ್ತಿದ್ದರು. ದೀಪಕ್‌ ಹೂಡಾ 20 ರೈಡಿಂಗ್‌ನಿಂದ 9 ಅಂಕಗಳನ್ನು ಪಡೆದರು. ಟೈಟಾನ್ಸ್‌ನ ರಾಹುಲ್‌ ಕೂಡ ಕೊನೆಯ ಕ್ಷಣದಲ್ಲಿ 9 ಪಾಯಿಂಟ್‌ ಕಲೆಹಾಕಿ, ಕದನ ಕುತೂಹಲ ಹೆಚ್ಚಿಸಿದರು.

ಇನ್ನೇನು ಆಟ ಮುಗಿಯಲು 1 ನಿಮಿಷ ಇದೆಯೆನ್ನುವಾಗ, ರಾಹುಲ್‌ ಅನ್ನು ಬಲೆಗೆ ಬೀಳಿಸಿದ ಪುನೇರಿ, ಅದರೊಂದಿಗೆ ತನ್ನ ಕೋಟೆಯನ್ನೂ ರಕ್ಷಿಸಿಕೊಂಡು, ಆಲ್‌ಔಟ್‌ ಅಪಾಯದಿಂದ ಹೊರಬಂತು. ಪುನೇರಿ ಪರವಾಗಿ ಗಿರೀಶ್‌ ಮಾರುತಿ ಎರ್ನಾಕ್‌ 6 ಟ್ಯಾಕಲ್‌ ಪಾಯಿಂಟ್‌ ಕಲೆಹಾಕಿ, ಅತ್ಯುತ್ತಮ ಡಿಫೆಂಡರ್‌ ಖ್ಯಾತಿಗೆ ಪಾತ್ರರಾದರು.

ಬೆಂಗಾಲ್‌-ಡೆಲ್ಲಿ ಪಂದ್ಯ ಟೈ: ತವರಿನ ತನ್ನ ಕೊನೆಯ ಪಂದ್ಯದಲ್ಲಿ ಬೆಂಗಾಲ್‌ ವಾರಿಯರ್ ಪ್ರಬಲ ಹೋರಾಟ ನಡೆಸಿದರೂ ಅಂತಿಮವಾಗಿ ದಬಾಂಗ್‌ ಡೆಲ್ಲಿ ವಿರುದ್ಧ 31-31 ಅಂಕಗಳಿಂದ ಟೈಗೊಳಿಸಲಷ್ಟೇ ಶಕ್ತವಾಯಿತು.

ಕೀರ್ತಿ ಕೊಲ್ಗಾರ್
 

ಟಾಪ್ ನ್ಯೂಸ್

IPL; To win the RCB Cup first….: What did Robin Uthappa say?

IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Mother Geetha hiremath statement on daughter Neha incident

Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ

8

Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL; To win the RCB Cup first….: What did Robin Uthappa say?

IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

IPL; To win the RCB Cup first….: What did Robin Uthappa say?

IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

B. Y. Raghavendra: “ಕಾಂಗ್ರೆಸ್‌ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’

B. Y. Raghavendra: “ಕಾಂಗ್ರೆಸ್‌ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.