1940ರಲ್ಲೂ ತಟ್ಟಿತ್ತು ಟೋಕಿಯೊ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಕಂಟಕ!


Team Udayavani, Mar 19, 2020, 7:45 AM IST

1940ರಲ್ಲೂ ತಟ್ಟಿತ್ತು ಟೋಕಿಯೊ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಕಂಟಕ!

ಟೋಕಿಯೊ: ಟೋಕಿಯೊ ಮತ್ತು ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಎಣ್ಣೆ-ಸೀಗೆ ಸಂಬಂಧವೋ ಏನೋ. ಇಲ್ಲಿ ಒಲಿಂಪಿಕ್ಸ್‌ ಆಯೋಜನೆಗೊಂಡಾಗಲೆಲ್ಲ ಏನಾದರೊಂದು ವಿಘ್ನ ಎದುರಾಗುವುದೇ ಇದಕ್ಕೆ ಕಾರಣ.

ಈ ಬಾರಿಯ ಟೋಕಿಯೊ ಒಲಿಂಪಿಕ್ಸ್‌ಗೆ ಕೋವಿಡ್ 19 ವೈರಸ್‌ ಭೀತಿ ತಟ್ಟಿದೆ. ಇದು ನಡೆಯುವುದೇ ಅನುಮಾನವಿದೆ. ಆಗ ಜಪಾನ್‌ ಸಾವಿರಾರು ಕೋಟಿ ರೂ.ಗಳ ನಷ್ಟ ಅನುಭವಿಸ ಬೇಕಾಗುತ್ತದೆ. ಅಕಸ್ಮಾತ್‌ ಒಲಿಂಪಿಕ್ಸ್‌ ನಡೆದರೂ ಇದಕ್ಕೆ ಬಹುತೇಕ ದೇಶಗಳ ಕ್ರೀಡಾಪಟುಗಳು ಗೈರಾಗುವುದರಲ್ಲಿ ಅನುಮಾನವಿಲ್ಲ. ಆಗಲೂ ಜಪಾನ್‌ಗೆ ನಷ್ಟವೇ.

ಆದರೆ ಟೋಕಿಯೊ ಒಲಿಂಪಿಕ್ಸ್‌ಗೆ ಗ್ರಹಚಾರ ಎದುರಾದದ್ದು ಇದೇ ಮೊದಲ ಸಲವಲ್ಲ. 80 ವರ್ಷಗಳ ಹಿಂದೆ, 1940ರಲ್ಲಿ ಟೋಕಿಯೊಗೆ ಒಲಿಂಪಿಕ್ಸ್‌ ಆತಿಥ್ಯ ಲಭಿಸಿದಾಗ ಆಗ 2ನೇ ವಿಶ್ವ ಮಹಾಯುದ್ಧ ಕಂಟಕವಾಗಿ ಕಾಡಿತ್ತು. ಕೂಟವೇ ರದ್ದುಗೊಂಡಿತ್ತು. ಏಶ್ಯ ಖಂಡಕ್ಕೆ ಲಭಿಸಿದ ಮೊದಲ ಒಲಿಂಪಿಕ್ಸ್‌ ಸಂಭ್ರಮವೆಲ್ಲ ಯುದೊœàನ್ಮಾದದಲ್ಲಿ ಅವಸಾನಗೊಂಡಿತ್ತು! ಮುಂದೆ 1964ರಲ್ಲಿ ಟೋಕಿಯೊಗೆ ಮತ್ತೂಮ್ಮೆ ಒಲಿಂಪಿಕ್ಸ್‌ ಆತಿಥ್ಯ ಲಭಿಸಿದಾಗ ಇದನ್ನು ಅತ್ಯಂತ ಯಶಸ್ವಿಯಾಗಿ ಸಂಘಟಿ ಸಲಾಯಿತು. ಏಶ್ಯದಲ್ಲಿ ನಡೆದ ಮೊದಲ ಒಲಿಂಪಿಕ್ಸ್‌ ಎಂಬ ಹೆಗ್ಗಳಿಕೆಗೆ ಜಪಾನ್‌ ಪಾತ್ರವಾಯಿತು.

ಜಪಾನ್‌ ಪಾಲಿನ ರಿಕವರಿ ಗೇಮ್ಸ್‌
1923ರಲ್ಲಿ ರುದ್ರಭಯಾನಕ ಭೂಕಂಪಕ್ಕೆ ಸಿಲುಕಿದ್ದ ಜಪಾನ್‌, ತಾನು ಈ ಪ್ರಾಕೃತಿಕ ವಿಕೋಪದಿಂದ ಹೇಗೆ ಮತ್ತೆ ತಲೆಯೆತ್ತಿ ನಿಂತೆ ಎಂಬುದನ್ನು ಜಗತ್ತಿಗೆ ಸಾರುವ ನಿಟ್ಟಿನಲ್ಲಿ 1940ರ ಒಲಿಂಪಿಕ್ಸ್‌ ಆ ದೇಶಕ್ಕೆ ಮುಖ್ಯವಾಗಿತ್ತು ಎಂಬುದಾಗಿ ಡೇವಿಡ್‌ ಗೋಲ್ಡ್‌ಬ್ಲಾಟ್‌ ತಮ್ಮ “ದಿ ಗೇಮ್ಸ್‌’ ಪುಸ್ತಕದಲ್ಲಿ ಬರೆದಿದ್ದಾರೆ. ಈ ಕಾರಣಕ್ಕಾಗಿ ಇದು “ರಿಕವರಿ ಗೇಮ್ಸ್‌’ ಆಗಿತ್ತು. ಆದರೆ ಕೊನೆಗೆ ಇದು “ಮಿಸ್ಸಿಂಗ್‌ ಒಲಿಂಪಿಕ್ಸ್‌’ ಯಾದಿಯಲ್ಲಿ ಸೇರಿಕೊಂಡದ್ದು ಮಾತ್ರ ವಿಪರ್ಯಾಸ.

ಹಾಗೆಯೇ, ಈ ಕೂಟದ ಆಯೋಜನೆಗೆ ಇನ್ನೊಂದು ವಿಶೇಷ ಕಾರಣವೂ ಇತ್ತು. ಅಂದು ಜಪಾನಿನ ಮೊದಲ ರಾಜ ಜಿಮ್ಮು ಅವರ ಪಟ್ಟಾಭಿ ಷೇಕದ 2,600ನೇ ವರ್ಷದ ಆಚರಣೆಯೂ ಆಗಿತ್ತು.

ಬೆಂಬಲಕ್ಕೆ ನಿಂತ ಮುಸೊಲಿನಿ
1940ರ ಒಲಿಂಪಿಕ್ಸ್‌ಗೆ ಜಪಾನ್‌ 1932ರಲ್ಲಿ ಬಿಡ್‌ ಸಲ್ಲಿಸಿತ್ತು. ಅಂದು ಸ್ಪರ್ಧೆಯಲ್ಲಿದ್ದ ನಗರಗಳೆಂದರೆ ಹೆಲ್ಸಿಂಕಿ ಮತ್ತು ರೋಮ್‌. ಇಟಲಿಯ ಸರ್ವಾಧಿಕಾರಿ ಬೆನಿಟೊ ಮುಸೊಲಿನಿ ಜಪಾನ್‌ ಬೆಂಬಲಕ್ಕೆ ನಿಂತರು. 1944ರ ರೋಮ್‌ ಒಲಿಂಪಿಕ್ಸ್‌ ಆತಿಥ್ಯಕ್ಕೆ ಜಪಾನ್‌ ಸಹಕರಿಸುವುದಾದರೆ ತಾನು ಬಿಡ್‌ನಿಂದ ಹಿಂದೆ ಸರಿಯುವ ನಿರ್ಧಾರ ಮುಸೊಲಿನಿಯದಾಗಿತ್ತು. ಹಾಗೆಯೇ ಆಯಿತು. ಆದರೆ ಈ ರೋಮ್‌ ಒಲಿಂಪಿಕ್ಸ್‌ ಕೂಡ ಮಹಾಯುದ್ಧಕ್ಕೆ ಬಲಿ ಯಾಯಿತೆಂಬುದು ಬೇರೆ ವಿಷಯ.

ಕೊನೆಯಲ್ಲಿ ಟೋಕಿಯೊ ಮತ್ತು ಹೆಲ್ಸಿಂಕಿ ಮಾತ್ರ ಬಿಡ್‌ನ‌ಲ್ಲಿ ಉಳಿದವು. ಇದರಲ್ಲಿ ಜಪಾನ್‌ ರಾಜಧಾನಿ 37-26 ಮತಗಳ ಮೇಲುಗೈ ಸಾಧಿಸಿತು.

ರಾಜತಾಂತ್ರಿಕ ಒತ್ತಡ…
ಏಶ್ಯದಲ್ಲಿ ಒಲಿಂಪಿಕ್ಸ್‌ ನಡೆಯಲಿದೆ ಎಂಬುದು ಅಪಾರ ಸಂತಸಕ್ಕೆ ಕಾರಣವಾಗಿತ್ತು. ಕ್ರೀಡಾಕೂಟದ ಎಲ್ಲ ದಿನಾಂಕಗಳನ್ನು ಅಂತಿಮಗೊಳಿಸಲಾಗಿತ್ತು. ಪೋಸ್ಟರ್‌ಗಳನ್ನೂ ಮುದ್ರಿಸಲಾಗಿತ್ತು. 1940ರ ಸೆ. 21ರಂದು ಉದ್ಘಾಟನಾ ಕಾರ್ಯಕ್ರಮವಿತ್ತು. ಇದೇ ವೇಳೆ ಜಪಾನ್‌ ಮೇಲೆ ಹೊರಗಿನಿಂದ ರಾಜತಾಂತ್ರಿಕ ಒತ್ತಡಗಳೂ ಹೇರಲ್ಪಟ್ಟವು. ಹೀಗಾಗಿ ಒಲಿಂಪಿಕ್ಸ್‌ಗಾಗಿ ಖರ್ಚು ಮಾಡುವ ಮೊತ್ತವನ್ನು ಮಿಲಿಟರಿ ವೆಚ್ಚಕ್ಕೆ ಬಳಸಿ ಎಂಬ ಒತ್ತಡ ದೇಶದೊಳಗಿನಿಂದಲೇ ಹೆಚ್ಚಿತು.

ಇದೇ ವೇಳೆ ಜಪಾನ್‌ನಲ್ಲಿ ಯುದ್ಧಸದೃಶ ಸ್ಥಿತಿ ಇರುವುದರಿಂದ ಬ್ರಿಟನ್‌ ಮತ್ತು ಅಮೆರಿಕ ಒಲಿಂಪಿಕ್ಸ್‌ ಬಹಿಷ್ಕರಿಸುವ ಸಾಧ್ಯತೆಯೂ ಇದೆ ಎಂಬ ಮಾಹಿತಿಯೂ ಲಭಿಸಿತು. ಅಂತಿಮವಾಗಿ ದ್ವಿತೀಯ ಮಹಾಯುದ್ಧ ಈ ಕ್ರೀಡಾಕೂಟವನ್ನೇ ಆಪೋಶನ ತೆಗೆದುಕೊಂಡಿತು.

ತ್ರಿವಳಿ ಪ್ರಾಕೃತಿಕ ಆಘಾತ
2020ರ ಒಲಿಂಪಿಕ್ಸ್‌ ಕೂಡ ಜಪಾನ್‌ ಪಾಲಿಗೆ “ರಿಕವರಿ ಗೇಮ್ಸ್‌’ ಆಗಿತ್ತು. 2011ರ ತ್ರಿವಳಿ ಪ್ರಾಕೃತಿಕ ಆಘಾತದಿಂದ ಚೇತರಿಸಿದ ತಾನು ಮತ್ತೆ ಹೇಗೆ ಸದೃಢವಾಗಿ ಎದ್ದು ನಿಂತೆ ಎಂಬುದನ್ನು ಪ್ರಪಂಚಕ್ಕೆ ಸಾರಬೇಕಿತ್ತು. ಅಂದು ಭಯಾನಕ ಭೂಕಂಪ, ಸುನಾಮಿ ಮತ್ತು ಫ‌ುಕೋಶಿಮ ಅಣುಸ್ಥಾವರ ಸ್ಫೋಟ ಜಪಾನನ್ನು ಹೈರಾಣಾಗಿಸಿತ್ತು. ಇದರಿಂದ ಆ ದೇಶವೀಗ ಅಮೋಘ ರೀತಿಯಲ್ಲಿ ಚೇತರಿಸಿಕೊಂಡಿದೆ. ಆದರೆ ಕೊರೊನಾ ವೈರಸ್‌ ಕಂಟಕವಾಗಿ ಪರಿಣಮಿಸಿದೆ!

ಪರಿಹಾರಕ್ಕೆ ಐಒಸಿ ಕೂಡ ವಿಫ‌ಲ
ಅತಂತ್ರಗೊಂಡಿರುವ ಟೋಕಿಯೊ ಒಲಿಂಪಿಕ್ಸ್‌ ಬಗ್ಗೆ ಖಚಿತವಾದ ನಿರ್ಧಾರಕ್ಕೆ ಬರುವಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿಯೂ (ಐಒಸಿ) ವಿಫ‌ಲಗೊಂಡಿದೆ.

ಸದ್ಯದ ಪರಿಸ್ಥಿತಿಯಲ್ಲಿ ಟೋಕಿಯೊ ಒಲಿಂಪಿಕ್ಸ್‌ಗೆ ಮಾದರಿ ಎನ್ನಬಹುದಾದ ಪರಿಹಾರ ಎಂಬುದಿಲ್ಲ. ಇದು ಅಸಾಮಾನ್ಯ ಸ್ಥಿತಿಯಾಗಿರುವುದರಿಂದ ಅಸಾಮಾನ್ಯ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ ಎಂದು ಐಒಸಿಯ ವಕ್ತಾರರೊಬ್ಬರು ಹೇಳಿದ್ದಾರೆ. ಕೆಲವು ಉನ್ನತ ಕ್ರೀಡಾಪಟುಗಳು ತಮ್ಮ ಆರೋಗ್ಯವನ್ನು ಒತ್ತೆಯಿಟ್ಟು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಬೇಕಾಗಿದೆ ಎಂಬ ಟೀಕೆಗಳನ್ನು ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಐಒಸಿ ಈ ಹೇಳಿಕೆ ನೀಡಿದೆ.

“ಕ್ರೀಡಾಕೂಟದ ಸಮಗ್ರತೆ ಮತ್ತು ಕ್ರೀಡಾಪಟುಗಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಈ ಬಿಕ್ಕಟ್ಟಿಗೊಂದು ಪರಿಹಾರವನ್ನು ಕಂಡುಕೊಳ್ಳಲು ಐಒಸಿ ಬದ್ಧವಾಗಿದೆ. ಆದರೆ ಈ ಪರಿಸ್ಥಿತಿಯಲ್ಲಿ ಮಾದರಿ ಎನ್ನಬಹುದಾದ ಪರಿಹಾರ ನಮ್ಮ ಎದುರು ಇಲ್ಲ’ ಎಂದಿದ್ದಾರೆ ಐಒಸಿ ಅಧಿಕಾರಿ.

“ಟೋಕಿಯೊ ಒಲಿಂಪಿಕ್ಸ್‌ ನಡೆಸುವುದು ಸಂವೇದನಾರಹಿತ ನಡೆ’
ಕೊರೊನಾ ಹಾವಳಿಯ ನಡುವೆಯೇ ಒಲಿಂಪಿಕ್ಸ್‌ ಕ್ರೀಡಾಕೂಟವನ್ನು ನಡೆಸುವುದಕ್ಕೆ ಈಗ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿಯೊಳಗಿಂದಲೇ (ಐಒಸಿ) ಅಪಸ್ವರ ವ್ಯಕ್ತವಾಗಿದೆ. ಟೋಕಿಯೊ ಒಲಿಂಪಿಕ್ಸ್‌ ನಡೆಸಲು ಒತ್ತಡ ಹಾಕುವುದು “ಸಂವೇದನಾ ರಹಿತ ಮತ್ತು ಬೇಜವಾಬ್ದಾರಿ ನಡೆ’ ಎಂದಿದ್ದಾರೆ ಐಒಸಿ ಸದಸ್ಯೆ ಹ್ಯಾಲಿ ವಿಕನ್‌ ಹೈಸರ್‌.

ಐಒಸಿಯ ಆ್ಯತ್ಲೀಟ್ಸ್‌ ಕಮಿಷನ್‌ನ ಸದಸ್ಯರೊಬ್ಬರು, ಟೋಕಿಯೊ ಒಲಿಂಪಿಕ್ಸ್‌ಗೆ ಸಂಬಂಧಿಸಿದಂತೆ “ಕಠಿನ ನಿರ್ಧಾರ’ ಕೈಗೊಳ್ಳುವ ಅಗತ್ಯವಿಲ್ಲ ಎಂದಿರುವುದಕ್ಕೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿ ಹ್ಯಾಲಿ ಈ ಹೇಳಿಕೆ ನೀಡಿದ್ದಾರೆ. ಹ್ಯಾಲಿ, 2002ರಿಂದ 2016ರ ತನಕ ಸತತ 4 ಸಲ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿರುವ ಕೆನಡದ ಐಸ್‌ ಹಾಕಿ ತಂಡದ ಸದಸ್ಯೆಯಾಗಿದ್ದಾರೆ.

“ಪ್ರಸ್ತುತ ಒಲಿಂಪಿಕ್ಸ್‌ಗಿಂತಲೂ ಕೊರೊನಾ ಬಿಕ್ಕಟ್ಟೇ ದೊಡ್ಡದಾಗಿದೆ. ಮುಂದಿನ 3 ತಿಂಗಳ ಮಾತು ಬಿಡಿ, ಮುಂದಿನ 24 ತಾಸುಗಳಲ್ಲಿ ಏನಾಗಬಹುದು ಎನ್ನುವುದೇ ನಮಗೆ ಗೊತ್ತಾಗುತ್ತಿಲ್ಲ. ಈಗಾಗಲೇ ಕೊರೊನಾ ಕ್ರೀಡಾಪಟುಗಳ ತಯಾರಿ ಮತ್ತು ತರಬೇತಿಯನ್ನು ಅಸ್ತವ್ಯಸ್ತಗೊಳಿಸಿದೆ. ಕ್ರೀಡಾಪಟುಗಳಿಗೆ ತರಬೇತಿ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಪರಿಪೂರ್ಣವಾದ ಕ್ರೀಡಾ ಕೂಟ ನಡೆಯುವುದು ಅಸಾಧ್ಯ’ ಎಂದು ಅಭಿಪ್ರಾಯ ಪಟ್ಟಿದ್ದಾರೆ ಹ್ಯಾಲಿ.

“ಒಲಿಂಪಿಕ್ಸ್‌ಗೆ ತಯಾರಿ ನಡೆಸಿರುವ ಕ್ರೀಡಾಪಟುಗಳ ವೇದನೆ ಮತ್ತು ನಿರಾಶೆ ಏನೆಂಬುದು ಕ್ರೀಡಾಪಟುವಾಗಿರುವ ನನಗೆ ಅರ್ಥವಾಗುತ್ತದೆ. ಆದರೆ ಈಗ ಪರಿಸ್ಥಿತಿ ಕೈಮೀರಿ ಹೋಗಿದೆ. ಇಡೀ ಜೀವನವನ್ನು ನೀವು ಒಂದು ಕೂಟಕ್ಕಾಗಿ ಮುಡಿಪಾಗಿಟ್ಟಿದ್ದೀರಿ. ಆದರೆ ಅತಂತ್ರ ಸ್ಥಿತಿಯಲ್ಲಿ ಎಲ್ಲರೂ ಅಸಹಾಯಕರಾಗಿದ್ದಾರೆ’ ಎಂದಿದ್ದಾರೆ ಹ್ಯಾಲಿ ವಿಕನ್‌ಹೈಸರ್‌.

ಟಾಪ್ ನ್ಯೂಸ್

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

1-ewqe

Olympics ಅರ್ಹತೆ ತಪ್ಪುವ ಭೀತಿಯಲ್ಲಿ ದೀಪಕ್‌, ಸುಜೀತ್‌

1-wqewqewq

Doping: ಶಾಲು ಚೌಧರಿ ದೋಷಮುಕ್ತ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.