ಭಾರತಕ್ಕೆ ಟೋಕಿಯೊ ಟಿಕೆಟ್‌

ವನಿತೆಯರಿಗೆ ಅಮೆರಿಕ ವಿರುದ್ಧ ಸೋಲು; ಗೋಲು ಗಳಿಕೆಯಲ್ಲಿ ಮುನ್ನಡೆ

Team Udayavani, Nov 2, 2019, 10:44 PM IST

PTI11_1_2019_000336B

ಭುವನೇಶ್ವರ: ಭಾರತದ ಪುರುಷರ ಮತ್ತು ವನಿತಾ ಹಾಕಿ ತಂಡಗಳೆರಡೂ 2020ರ ಒಲಿಂಪಿಕ್ಸ್‌ ಅರ್ಹತೆ ಸಂಪಾದಿಸುವಲ್ಲಿ ಯಶಸ್ವಿಯಾಗಿವೆ. ಇದರೊಂದಿಗೆ ಮುಂದಿನ ವರ್ಷದ ಟೋಕಿಯೊ ಕೂಟವನ್ನು ಭಾರತದ ಕ್ರೀಡಾಭಿಮಾನಿಗಳು ಹೆಚ್ಚು ಕುತೂಹಲದಿಂದ ವೀಕ್ಷಿಸಬಹುದಾಗಿದೆ.

ಶನಿವಾರ ಇಲ್ಲಿನ “ಕಳಿಂಗ ಸ್ಟೇಡಿಯಂ’ನಲ್ಲಿ ನಡೆದ ಪಂದ್ಯಗಳಲ್ಲಿ ವನಿತಾ ತಂಡ ಅಮೆರಿಕಕ್ಕೆ 1-4 ಅಂತರದಿಂದ ಸೋತರೂ 2 ಪಂದ್ಯಗಳ ಒಟ್ಟು ಗೋಲು ಗಳಿಕೆಯಲ್ಲಿ 6-5 ಅಂತರದ ಮುನ್ನಡೆ ಸಾಧಿಸಿತು.

ಅನಂತರ ನಡೆದ ಪುರುಷರ ಮುಖಾಮುಖೀಯಲ್ಲಿ ಭಾರತ 7-1 ಗೋಲುಗಳಿಂದ ರಶ್ಯವನ್ನು ಮಣಿಸಿತು. ಮೊದಲ ಪಂದ್ಯದಲ್ಲಿ 4-2 ಅಂತರದಿಂದ ಜಯಿಸಿದ್ದ ಭಾರತ ಒಟ್ಟು 11-3 ಮುನ್ನಡೆಯೊಂದಿಗೆ ಪ್ರಭುತ್ವ ಸಾಧಿಸಿತು.

ರಾಣಿ ಗೋಲು ತಂದ ಅದೃಷ್ಟ
ಮೊದಲ ಪಂದ್ಯದಲ್ಲಿ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದ್ದ ವನಿತೆಯರು ಅಮೆರಿಕ ವಿರುದ್ಧ 5-1 ಅಂತರದ ಜಯಭೇರಿ ಮೊಳಗಿಸಿದ್ದರು. ಆದರೆ ಶನಿವಾರದ ಪಂದ್ಯದಲ್ಲಿ ಅಮೆರಿಕ ತಿರುಗೇಟು ನೀಡಿತು. 4-1 ಅಂತರದಿಂದ ಭಾರತವನ್ನು ಮಣಿಸಿತು. ಆದರೆ ಎರಡೂ ಪಂದ್ಯಗಳ ಒಟ್ಟು ಗೋಲು ಲೆಕ್ಕಾಚಾರದಲ್ಲಿ ಭಾರತ 6-5 ಅಂತರದ ಮುನ್ನಡೆ ಕಾಯ್ದುಕೊಂಡು ಟೋಕಿಯೊ ಅರ್ಹತೆ ಸಂಪಾದಿಸುವಲ್ಲಿ ಯಶಸ್ವಿಯಾಯಿತು. ಇದು ಭಾರತಕ್ಕೆ ಲಭಿಸಿದ ಸತತ 2 ಒಲಿಂಪಿಕ್‌ ಟಿಕೆಟ್‌.

ಅರ್ಧ ಹಾದಿ ಕ್ರಮಿಸುವಾಗ ಅಮೆರಿಕ 4-0 ಅಂತರದ ಭರ್ಜರಿ ಮುನ್ನಡೆಯಲ್ಲಿತ್ತು. 48ನೇ ನಿಮಿಷದಲ್ಲಿ ನಾಯಕಿ ರಾಣಿ ರಾಮ್‌ಪಾಲ್‌ ಬಾರಿಸಿದ ಮಹತ್ವದ ಗೋಲು ಭಾರತದ ಅದೃಷ್ಟವನ್ನು ತೆರೆದಿರಿಸಿತು. ಅಕಸ್ಮಾತ್‌ ಇತ್ತಂಡಗಳ ಎರಡೂ ಪಂದ್ಯಗಳ ಗೋಲುಗಳು ಸಮನಾಗಿದ್ದರೆ ಪೆನಾಲ್ಟಿ ಶೂಟೌಟ್‌ ಮೂಲಕ ವಿಜೇತರನ್ನು ನಿರ್ಧರಿಸಬೇಕಿತ್ತು.

ಪುರುಷರಿಗೆ 7-1 ಜಯ
ಶುಕ್ರವಾರ ನಿರೀಕ್ಷಿತ ಮಟ್ಟದ ಆಟವಾಡದ ಭಾರತದ ಪುರುಷರು ದ್ವಿತೀಯ ಪಂದ್ಯದಲ್ಲಿ ರಶ್ಯದ ಮೇಲೆರಗಿ ಹೋದರು. ರಶ್ಯ ಮೊದಲ ನಿಮಿಷದಲ್ಲೇ ಗೋಲು ಬಾರಿಸಿದರೂ ಬಳಿಕ ಭಾರತ ಮುನ್ನುಗ್ಗಿ ಹೋಯಿತು. ಸತತ 7 ಗೋಲು ಬಾರಿಸಿ ಮೆರೆದಾಡಿತು.

ಟಾಪ್ ನ್ಯೂಸ್

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

1-asaasa

250 km per hour; ಶೀಘ್ರದಲ್ಲೇ ಬುಲೆಟ್‌ ರೈಲಿನಲ್ಲೂ ಆತ್ಮನಿರ್ಭರತೆ!

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

1-ewqe

Olympics ಅರ್ಹತೆ ತಪ್ಪುವ ಭೀತಿಯಲ್ಲಿ ದೀಪಕ್‌, ಸುಜೀತ್‌

1-wqewqewq

Doping: ಶಾಲು ಚೌಧರಿ ದೋಷಮುಕ್ತ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

1-asaasa

250 km per hour; ಶೀಘ್ರದಲ್ಲೇ ಬುಲೆಟ್‌ ರೈಲಿನಲ್ಲೂ ಆತ್ಮನಿರ್ಭರತೆ!

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.