- Saturday 07 Dec 2019
ಮಾಜಿ ನಂ.1 ಟೆನಿಸಿಗ ಬೆರ್ಡಿಶ್ ವಿದಾಯ
Team Udayavani, Nov 18, 2019, 12:45 AM IST
ಲಂಡನ್: ವಿಶ್ವದ ಮಾಜಿ ನಂಬರ್ ವನ್ ಟೆನಿಸಿಗ, ವಿಂಬಲ್ಡನ್ ರನ್ನರ್ ಅಪ್ ಖ್ಯಾತಿಯ ಜೆಕ್ ಆಟಗಾರ ಥಾಮಸ್ ಬೆರ್ಡಿಶ್ ಟೆನಿಸ್ಗೆ ವಿದಾಯ ಘೋಷಿಸಿದ್ದಾರೆ.
17 ವರ್ಷಗಳ ಸುದೀರ್ಘ ಟೆನಿಸ್ ಬಾಳ್ವೆಯಲ್ಲಿ 17 ಎಟಿಪಿ ಸಿಂಗಲ್ಸ್ ಪ್ರಶಸ್ತಿ ಜಯಿಸಿರುವ ಥಾಮಸ್ ಬೆರ್ಡಿಶ್, 2010-2016 ಅವಧಿಯಲ್ಲಿ ವಿಶ್ವದ ಟಾಪ್-10 ಯಾದಿಯನ್ನು ಅಲಂಕರಿಸಿದ್ದರು.
ಬೆರ್ಡಿಶ್ ಒಮ್ಮೆಯಷ್ಟೇ ಗ್ರ್ಯಾನ್ಸ್ಲಾಮ್ ಫೈನಲ್ ಪ್ರವೇಶಿಸಿದ್ದು, 2010ರ ವಿಂಬಲ್ಡನ್ ಪ್ರಶಸ್ತಿ ಸಮರದಲ್ಲಿ ರಫೆಲ್ ನಡಾಲ್ಗೆ ಶರಣಾಗಿದ್ದರು. ಜೆಕೋಸ್ಲೊವಾಕಿಯಾ 2012 ಮತ್ತು 2013ರಲ್ಲಿ ಸತತ 2 ವರ್ಷ ಡೇವಿಸ್ ಕಪ್ ಜಯಿಸುವಲ್ಲಿ ಬೆರ್ಡಿಶ್ ಪಾತ್ರ ಮಹತ್ವದ್ದಾಗಿತ್ತು.
34ರ ಹರೆಯದ ಥಾಮಸ್ ಬೆರ್ಡಿಶ್ ಕಳೆದ ಯುಎಸ್ ಓಪನ್ ಕೂಟದ ಮೊದಲ ಸುತ್ತಿನಲ್ಲೇ ಪರಾಭವಗೊಂಡ ಬಳಿಕ ಯಾವುದೇ ಕೂಟದಲ್ಲಿ ಪಾಲ್ಗೊಂಡಿರಲಿಲ್ಲ. ನ್ಯೂಯಾರ್ಕ್ನಲ್ಲಿ ನಡೆದ ಎಟಿಪಿ ಫೈನಲ್ಸ್ ಅರ್ಹತಾ ಸುತ್ತಿನಲ್ಲಿ ಜೆನ್ಸನ್ ಬ್ರೂಕ್ಸ್ ಬಿ ವಿರುದ್ಧ ಸೋಲನುಭವಿಸಿದ ಬಳಿಕ ಬೆರ್ಡಿಶ್ ನಿವೃತ್ತಿಯ ನಿರ್ಧಾರ ಮಾಡಿದ್ದರು.
ಈ ವಿಭಾಗದಿಂದ ಇನ್ನಷ್ಟು
-
ಮುಂಬಯಿ: ಇತ್ತೀಚೆಗೆ ವಿಶ್ವ ದರ್ಜೆಯ ಕ್ರಿಕೆಟಿಗರು ವಿಪರೀತ ಒತ್ತಡದಿಂದಾಗಿ ಖಿನ್ನತೆಗೆ ಒಳಗಾಗುತ್ತಿರುವುದು ದೊಡ್ಡ ಸುದ್ದಿಯಾಗುತ್ತಿದೆ. ಆಸ್ಟ್ರೇಲಿಯದ...
-
ಪೋಖರಾ (ನೇಪಾಲ): 13ನೇ ಸೌತ್ ಏಶ್ಯನ್ ಗೇಮ್ಸ್ನ ಬ್ಯಾಡ್ಮಿಂಟನ್ ಸ್ಪರ್ಧೆಗಳಲ್ಲಿ ಭಾರತ ತನ್ನ ಪ್ರಾಬಲ್ಯ ಮುಂದುವರಿಸಿದೆ. ಶುಕ್ರವಾರ ಆಶ್ಮಿತಾ ಚಾಲಿಹಾ ಮತ್ತು...
-
ಮೆಲ್ಬರ್ನ್: ಭಾರತ ತನ್ನ ಕ್ರಿಕೆಟ್ ಇತಿಹಾಸದ ಮೊದಲ ಡೇ-ನೈಟ್ ಟೆಸ್ಟ್ ಪಂದ್ಯವನ್ನು ಯಶಸ್ವಿಯಾಗಿ ಆಡಿ ಮುಗಿಸಿದೆ. ಮುಂದೆ ಭಾರತ ಪ್ರವಾಸ ಕೈಗೊಳ್ಳಲಿರುವ ತಂಡಗಳು...
-
ಹೈದರಾಬಾದ್: ವೆಸ್ಟ್ ಇಂಡೀಸಿನ ಬೃಹತ್ ಮೊತ್ತಕ್ಕೆ ಬೆದರದೇ ಮುನ್ನುಗ್ಗಿ ಹೋದ ಭಾರತ, ಹೈದರಾಬಾದ್ ಟಿ20 ಪಂದ್ಯವನ್ನು 6 ವಿಕೆಟ್ಗಳಿಂದ ಗೆದ್ದು ಮೆರೆದಾಡಿದೆ. ಕೆ.ಎಲ್....
-
ನವದೆಹಲಿ: ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಟಿ20 ಕ್ರಿಕೆಟ್ ಕೂಟದ ಪ್ರಮುಖ ತಂಡಗಳಲ್ಲಿ ಒಂದಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಮಾಲೀಕರಾಗಿ ಮಾಜಿ...
ಹೊಸ ಸೇರ್ಪಡೆ
-
ಲಕ್ನೋ: ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಎಗ್ಗಿಲ್ಲದೇ ಮುಂದುವರಿದಿದೆ. ಗುರುವಾರವಷ್ಟೇ ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಮೇಲೆ ಬೆಂಕಿ ಹಚ್ಚಿ...
-
ಹೊಸದಿಲ್ಲಿ: ಪಾಕಿಸ್ಥಾನ, ಅಫ್ಘಾನಿಸ್ಥಾನ, ಬಾಂಗ್ಲಾದೇಶಗಳಲ್ಲಿ ಕಿರುಕುಳ ಅನುಭವಿಸುತ್ತಿದ್ದವರಿಗೆ ಉತ್ತಮ ನಾಳೆಯ ಅವಕಾಶವನ್ನು ಕಲ್ಪಿಸುವುದೇ ಪೌರತ್ವ (ತಿದ್ದುಪಡಿ)...
-
ಹೊಸದಿಲ್ಲಿ: ಈರುಳ್ಳಿ ದರ ಕಡಿಮೆಯಾಗುವ ಲಕ್ಷಣಗಳು ಸದ್ಯಕ್ಕೆ ಗೋಚರಿ ಸುತ್ತಿಲ್ಲ. ಶುಕ್ರವಾರ ಈರುಳ್ಳಿ ಬೆಲೆ ಕೇಜಿಗೆ 165 ರೂ. ತಲುಪಿದೆ. ವಿದೇಶಗಳಿಂದ ಆಮದು ಮಾಡಿಕೊಂಡಿರುವ...
-
ನವದೆಹಲಿ: ತನ್ನನ್ನು ಅತ್ಯಾಚಾರ ಮಾಡಿದ್ದ ಆರೋಪಿಯೊಬ್ಬನ ಸಹಿತ ಇತರೇ ನಾಲವರು ದುಷ್ಕರ್ಮಿಗಳಿಂದ ಗುರುವಾರದಂದು ಹಲ್ಲೆಗೊಳಗಾಗಿ ಬಳಿಕ ಬೆಂಕಿ ಹಚ್ಚಲ್ಪಟ್ಟಿದ್ದ...
-
ಉಡುಪಿ: ಅದಮಾರು ಮಠದ ಪರ್ಯಾಯದಲ್ಲಿ ಕಾಲೇ ವರ್ಷತು ಪರ್ಜನ್ಯಃ| ಪೃಥಿವೀ ಸಸ್ಯಶಾಲಿನಿ|| ದೇಶಃ ಅಯಂ ಕ್ಷೋಭರಹಿತಃ| ಸಜ್ಜನಾಃ ಸಂತು ನಿರ್ಭಯಾಃ|| ಎಂಬಂತೆ ಈ ನಾಲ್ಕು ವಿಷಯಗಳ...