ಐಪಿಎಲ್‌ಗೆ ಯುಎಇ ಸೂಕ್ತ ತಾಣ: ಬ್ರಿಜೇಶ್‌


Team Udayavani, Jul 24, 2020, 10:53 AM IST

ಐಪಿಎಲ್‌ಗೆ ಯುಎಇ ಸೂಕ್ತ ತಾಣ: ಬ್ರಿಜೇಶ್‌

ದುಬೈ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟಿ20 ಕೂಟ ಆಯೋಜಿಸಲು ಯುಎಇ ಸೂಕ್ತ ತಾಣ ಎಂದು ಐಪಿಎಲ್‌ ಮುಖ್ಯಸ್ಥ ಬ್ರಿಜೇಶ್‌ ಪಟೇಲ್‌ ತಿಳಿಸಿದ್ದಾರೆ. ಮಾಧ್ಯಮವೊಂದರ ಜತೆಗೆ ಮಾತನಾಡಿದ ಅವರು, “ಯುನೈಟೆಡ್‌ ಅರಬ್‌ ಎಮಿ ರೆಟ್ಸ್‌ (ಯುಎಇ) ಐಪಿಎಲ್‌ ಆತಿಥ್ಯಕ್ಕೆ ಹೇಳಿ ಮಾಡಿಸಿದ ಸ್ಥಳ ವಾಗಿದೆ. ವಿದೇಶದಲ್ಲಿ ಕೂಟ ನಡೆಸುವುದಾದರೆ ನಮಗೆ
ಮೊದಲ ಆಯ್ಕೆ ಇದ್ದದ್ದು ಯುಎಇನಲ್ಲಿ. ಇಲ್ಲಿನ ಕ್ರಿಕೆಟ್‌ ಸೌಲಭ್ಯಗಳು ಉನ್ನತ ವಾಗಿವೆ. ಶ್ರೇಷ್ಠ ಕ್ರೀಡಾಂಗಣ, ಡ್ರೆಸ್ಸಿಂಗ್‌ ಕೊಠಡಿ, ಅಭ್ಯಾಸಕ್ಕೆ ಸೌಲಭ್ಯ, ಹೋಟೆಲ್‌ ವ್ಯವಸ್ಥೆ ಎಲ್ಲವು ಆಟಗಾರರಿಗೆ ಅಚ್ಚುಕಟ್ಟಾಗಿದೆ. ಒಂದು ನಗರದಿಂದ ಮತ್ತೂಂದು ನಗರಕ್ಕೆ ವಿಮಾನ ಸೇವೆಯನ್ನು ಅವಲಂಬಿಸಬೇಕಿಲ್ಲ. ರಸ್ತೆ ಸಾರಿಗೆ ವಾಹನ ಬಳಸಿ ಸ್ಯಾನಿಟೈಸ್‌ ಮಾಡಿ ಕೊಂಡು ರಸ್ತೆಯ ಮೂಲಕವೇ ಆಟಗಾರರನ್ನು ಒಂದೆಡೆಯಿಂದ ಮತ್ತೂಂದು ಕಡೆಗೆ ಸುಲಭವಾಗಿ ಕರೆದುಕೊಂಡು ಹೋಗಬಹುದು’ ಎಂದು ತಿಳಿಸಿದರು.

ಐಪಿಎಲ್‌ ನಡೆಯುವ ದಿನಾಂಕವನ್ನು ಮುಂದಿನ ಒಂದು ವಾರದೊಳಗೆ ಬಿಸಿಸಿಐ ಪ್ರಕಟಿಸುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಅದಕ್ಕೂ ಮೊದಲು ಕೇಂದ್ರ ಸರ್ಕಾರದ ಅನುಮತಿ ಸಿಗಬೇಕಿದ್ದು ಅದಕ್ಕಾಗಿ ಬಿಸಿಸಿಐ ಕಾಯುತ್ತಿದೆ, ಯುಎಇ ನ ದುಬೈ, ಅಬುಧಾಬಿ ಹಾಗೂ ಶಾರ್ಜಾ ಕ್ರೀಡಾಂಗಣದಲ್ಲಿ ಕೂಟಕ್ಕಾಗಿ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.

ಮನೆಯಿಂದಲೇ ಐಪಿಎಲ್‌ ಟೀವಿ ಕಾಮೆಂಟ್ರಿ!
ನವದೆಹಲಿ: ಮುಂಬರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟಿ20 ಕ್ರಿಕೆಟ್‌ ಕೂಟದ ನೇರ ಪ್ರಸಾರದ ಟೀವಿ ಕಾಮೆಂಟ್ರಿಯನ್ನು ಮನೆಯಿಂದಲೇ ನಿರ್ವಹಿಸಲು ಕೂಟದ ನೇರ ಪ್ರಸಾರಕ ಸಂಸ್ಥೆ ಸ್ಟಾರ್‌ ನ್ಪೋರ್ಟ್ಸ್ ಚಿಂತನೆ ನಡೆಸಿದೆ. ಸ್ಟಾರ್‌ ಸಂಸ್ಥೆ ದಕ್ಷಿಣ ಆಫ್ರಿಕಾದ ಸೆಂಚುರಿಯನ್‌ ಪಾರ್ಕ್‌ನಲ್ಲಿ ಭಾನುವಾರ ನಡೆದಿದ್ದ ಪ್ರದರ್ಶನ ಪಂದ್ಯದ “ವರ್ಚುವಲ್‌ ಕಾಮೆಂಟರಿ’ಯನ್ನು ಪ್ರಾಯೋಗಿಕವಾಗಿ ನಡೆಸಿ ಯಶಸ್ವಿಯಾಯಿತು. ಮಾಜಿ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌ ಬರೋಡಾದಲ್ಲಿರುವ ತಮ್ಮ ಮನೆಯಿಂದ, ಕೋಲ್ಕತದಿಂದ ದೀಪ್‌ದಾಸ್‌ ಗುಪ್ತಾ ಹಾಗೂ ಮುಂಬೈ ನಿವಾಸದಿಂದ ಸಂಜಯ್‌ ಮಂಜ್ರೆಕರ್‌ ನೇರ ಪ್ರಸಾರದ ಟೀವಿ ಕಾಮೆಂಟರಿ ಮಾಡಿದ್ದರು. ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಐಪಿಎಲ್‌ ನಲ್ಲೂ ಇದನ್ನೇ ಏಕೆ ಮಾಡಬಾರದು ಎನ್ನುವ ಚಿಂತನೆಯನ್ನು ಸ್ಟಾರ್‌ ನಡೆಸಿದೆ. ಪ್ರಸಕ್ತ ಕೋವಿಡ್ ಸನ್ನಿವೇಶದಲ್ಲಿ ಇಂತಹ ಪ್ರಯೋಗ ಅವಶ್ಯಕವಾಗಿದೆ ಎಂದು ಸ್ಟಾರ್‌ ಅಭಿಪ್ರಾಯಪಟ್ಟಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಇರ್ಫಾನ್‌ ಪಠಾಣ್‌, “ಸಾವಿರಾರು ಕಿ.ಮೀ. ದೂರದಲ್ಲಿ ನಡೆಯುವ ಪಂದ್ಯಕ್ಕೆ ಭಾರತದಲ್ಲಿ ನಮ್ಮ ಮನೆಯಲ್ಲೇ ಕುಳಿತು ಕಾಮೆಂಟ್ರಿ ಹೇಳುವುದು ವಿಶೇಷ ಅನುಭವ ನೀಡಿತ್ತು. ಮನೆಯಿಂದ ಕಾಮೆಂಟ್ರಿ ಮಾಡುವುದು ಒಳ್ಳೆಯದು ಅನ್ನುವುದನ್ನು ಒಪ್ಪಿಕೊಳ್ಳುತ್ತೇನೆ, ಆದರೆ ನೈಜತೆ ಇಲ್ಲ ಎನ್ನುವುದು ಕೂಡ ಅಷ್ಟೇ ಸತ್ಯ’ ಎಂದು ಇರ್ಫಾನ್‌ ತಿಳಿಸಿದರು.

ಐಪಿಎಲ್‌: ಕಿವೀಸ್‌ ಕ್ರಿಕೆಟಿಗರಿಗೆ ಅನುಮತಿ
ವೆಲ್ಲಿಂಗ್ಟನ್‌: ಈ ವರ್ಷದ ಐಪಿಎಲ್‌ ಪಂದ್ಯಾ ವಳಿಯಲ್ಲಿ ಪಾಲ್ಗೊಳ್ಳಲು ನ್ಯೂಜಿಲೆಂಡ್‌ ತನ್ನೆಲ್ಲ ಆಟ ಗಾರರಿಗೆ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡಿದೆ. ಆದರೆ ಆರೋಗ್ಯಕ್ಕೆ ಸಂಬಂಧಿ ಶಿಷ್ಟಾಚಾರ ಮತ್ತು ಮಾರ್ಗಸೂಚಿಗಳ ಕುರಿತು ಮಂಡಳಿ ಏನೂ ಹೇಳುವುದಿಲ್ಲ, ಇದಕ್ಕೆಲ್ಲ ಸ್ವತಃ ಆಟಗಾರರೇ ಹೊಣೆ ಎಂಬುದಾಗಿ “ಕ್ರಿಕೆಟ್‌ ನ್ಯೂಜಿಲೆಂಡ್‌’ನ ವಕ್ತಾರ ರಿಚರ್ಡ್‌ ಬೂಕ್‌ ಪಿಟಿಐಗೆ ಇ-ಮೇಲ್‌ ಮೂಲಕ ತಿಳಿಸಿದ್ದಾರೆ. ಯುಎಇಯಲ್ಲಿ ನಡೆಯಲಿದೆ ಎನ್ನಲಾದ 2020ರ ಐಪಿಎಲ್‌ನಲ್ಲಿ ನ್ಯೂಜಿ ಲೆಂಡಿನ 6 ಕ್ರಿಕೆಟಿಗರು ಪಾಲ್ಗೊಳ್ಳಲಿದ್ದಾರೆ. ಇವರೆಂದರೆ ಜಿಮ್ಮಿ ನೀಶಮ್‌ (ಪಂಜಾಬ್‌), ಲಾಕೀ ಫ‌ರ್ಗ್ಯುಸನ್‌ (ಕೆಕೆಆರ್‌), ಮಿಚೆಲ್‌ ಮೆಕ್ಲೆನಗನ್‌ ಮತ್ತು ಟ್ರೆಂಟ್‌ ಬೌಲ್ಟ್ (ಮುಂಬೈ), ಕೇನ್‌ ವಿಲಿಯಮ್ಸನ್‌ (ಹೈದರಾಬಾದ್‌) ಮತ್ತು ಮಿಚೆಲ್‌ ಸ್ಯಾಂಟ್ನರ್‌ (ಚೆನ್ನೈ).

ಟಾಪ್ ನ್ಯೂಸ್

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

13-jp-hegde

Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ

12-mng

Neha ಹತ್ಯೆ ಪ್ರಕರಣ; ಎನ್‌ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್‌ಪಿ ಆಗ್ರಹ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL; To win the RCB Cup first….: What did Robin Uthappa say?

IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

15-fusion

Black Saree: ಕಪ್ಪು ಬಣ್ಣಕ್ಕೂ ನನಗೂ ಬಿಡಿಸಲಾರದ ನಂಟು

1-adsad

Gadag; ನಾಲ್ವರ ಬರ್ಬರ ಹತ್ಯೆ ಐವರು ದುಷ್ಕರ್ಮಿಗಳು ಮಾಡಿರುವ ಶಂಕೆ

14-fusion

Karataka Damanaka: ಭಟ್ರಾ ಗರಡಿಲಿ ತಯಾರಾದ ಕರಟಕ ದಮನಕ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.