ಆಸೀಸ್‌ ಜೋಶ್‌; ಲಂಕೆಗೆ ವೈಟ್‌ವಾಶ್‌


Team Udayavani, Nov 2, 2019, 12:24 AM IST

aus

ಮೆಲ್ಬರ್ನ್: ಇತ್ತೀಚೆಗಷ್ಟೇ ಪಾಕಿಸ್ಥಾನಕ್ಕೆ ತೆರಳಿ ಟಿ20 ಸರಣಿಯನ್ನು ಕ್ಲೀನ್‌ ಸ್ವೀಪ್‌ ಆಗಿ ವಶಪಡಿಸಿಕೊಂಡು ಬಂದ ಶ್ರೀಲಂಕಾ, ಈಗ ಆಸ್ಟ್ರೇಲಿಯದಲ್ಲಿ ತಾನೇ ಈ ಅವಮಾನಕ್ಕೆ ಸಿಲುಕಿದೆ. ಮೆಲ್ಬರ್ನ್ನಲ್ಲಿ ಶುಕ್ರವಾರ ನಡೆದ 3ನೇ ಹಾಗೂ ಅಂತಿಮ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆದ್ದ ಆಸೀಸ್‌, ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡಿದೆ.

ಮೊದಲು ಬ್ಯಾಟಿಂಗ್‌ ನಡೆಸಿದ ಲಂಕಾ 6 ವಿಕೆಟಿಗೆ 142 ರನ್ನುಗಳ ಸಾಧಾರಣ ಮೊತ್ತ ಪೇರಿಸಿದರೆ, ಆಸ್ಟ್ರೇಲಿಯ 17.4 ಓವರ್‌ಗಳಲ್ಲಿ 3 ವಿಕೆಟಿಗೆ 145 ರನ್‌ ಬಾರಿಸಿ ಗೆಲುವಿನ ಹ್ಯಾಟ್ರಿಕ್‌ ಸಾಧಿಸಿತು. ಮೊದಲ ಪಂದ್ಯವನ್ನು 134 ರನ್ನುಗಳಿಂದ ಗೆದ್ದ ಕಾಂಗರೂ ಪಡೆ, ಬಳಿಕ 9 ವಿಕೆಟ್‌ಗಳ ಜಯ ಸಾಧಿಸಿತ್ತು.

ಎಡಗೈ ಆರಂಭಕಾರ ವಾರ್ನರ್‌ ಅಮೋಘ ಫಾರ್ಮ್ ಮುಂದುವರಿಸಿ 50 ಎಸೆತಗಳಿಂದ ಅಜೇಯ 57 ರನ್‌ ಬಾರಿಸಿದರು (4 ಬೌಂಡರಿ, 1 ಸಿಕ್ಸರ್‌). ಹಿಂದಿನೆರಡು ಪಂದ್ಯಗಳಲ್ಲಿ ಕ್ರಮವಾಗಿ ಅಜೇಯ 100 ಹಾಗೂ ಅಜೇಯ 60 ರನ್‌ ಬಾರಿಸಿದ ಸಾಧನೆ ವಾರ್ನರ್‌ ಅವರದಾಗಿತ್ತು. ಸತತ ಮೂರೂ ಪಂದ್ಯ ಗಳಲ್ಲಿ ಔಟಾಗದೆ ಉಳಿದ ಅವರು ಮೂರರಲ್ಲೂ ಪಂದ್ಯಶ್ರೇಷ್ಠರಾಗಿ ಮೂಡಿ ಬಂದರು. ಜತೆಗೆ ಸರಣಿಶ್ರೇಷ್ಠ ಗೌರವಕ್ಕೂ ಭಾಜನರಾದರು.

ವಾರ್ನರ್‌ ಜತೆಗೆ ಆರಂಭಿಕನಾಗಿ ಇಳಿದ ನಾಯಕ ಫಿಂಚ್‌ ಕೂಡ ಅಬ್ಬರದ ಆಟವಾಡಿದರು. ಅವರ ಗಳಿಕೆ 25 ಎಸೆತಗಳಿಂದ 37 ರನ್‌ (1 ಬೌಂಡರಿ, 3 ಸಿಕ್ಸರ್‌). ಇವರಿಬ್ಬರಿಂದ ಮೊದಲ ವಿಕೆಟಿಗೆ 8.5 ಓವರ್‌ಗಳಿಂದ 69 ರನ್‌ ಹರಿದು ಬಂತು. ಸ್ಟೀವನ್‌ ಸ್ಮಿತ್‌ (13), ಬೆನ್‌ ಮೆಕ್‌ಡರ್ಮಟ್‌ (5) ವಿಕೆಟ್‌ ಬೇಗನೆ ಉರುಳಿತು.

ಕುಸಲ್‌ ಪೆರೆರ ಹೋರಾಟ
ಶ್ರೀಲಂಕಾ ಬ್ಯಾಟಿಂಗ್‌ ಸರದಿಯಲ್ಲಿ ಮಿಂಚಿದ ಏಕೈಕ ಆಟಗಾರ ಕುಸಲ್‌ ಪೆರೆರ. ಮೊದಲ ಓವರಿನಲ್ಲೇ ನಿರೋಷನ್‌ ಡಿಕ್ವೆಲ್ಲ ವಿಕೆಟ್‌ ಉರುಳಿದ ಬಳಿಕ ಕ್ರೀಸ್‌ ಇಳಿದ ಪೆರೆರ 57 ರನ್ನುಗಳ ಕೊಡುಗೆ ಸಲ್ಲಿಸಿದರು (45 ಎಸೆತ, 4 ಬೌಂಡರಿ, 1 ಸಿಕ್ಸರ್‌). ಸ್ಟಾರ್ಕ್‌, ರಿಚರ್ಡ್‌ಸನ್‌ ಮತ್ತು ಕಮಿನ್ಸ್‌ ತಲಾ 2 ವಿಕೆಟ್‌ ಕಿತ್ತು ಲಂಕೆಗೆ ಕಡಿವಾಣ ಹಾಕಿದರು.

ಸ್ಕೋರ್‌ ಪಟ್ಟಿ
ಶ್ರೀಲಂಕಾ
ಮೆಂಡಿಸ್‌ ಸಿ ಮೆಕ್‌ಡರ್ಮಟ್‌ ಬಿ ರಿಚರ್ಡ್‌ಸನ್‌ 13
ನಿರೋಷನ್‌ ಡಿಕ್ವೆಲ್ಲ ಸಿ ಮೆಕ್‌ಡರ್ಮಟ್‌ ಬಿ ಸ್ಟಾರ್ಕ್‌ 0
ಕುಸಲ್‌ ಪೆರೆರ ಸಿ ಟರ್ನರ್‌ ಬಿ ಕಮಿನ್ಸ್‌ 57
ಫೆರ್ನಾಂಡೊ ಸಿ ಮೆಕ್‌ಡರ್ಮಟ್‌ ಬಿ ಕಮಿನ್ಸ್‌ 20
ಒಶಾದ ಫೆರ್ನಾಂಡೊ ಸಿ ಕ್ಯಾರಿ ಬಿ ರಿಚರ್ಡ್‌ಸನ್‌ 6
ಶೇಹಾನ್‌ ಜಯಸೂರ್ಯ ಬಿ ಸ್ಟಾರ್ಕ್‌ 12
ಭನುಕ ರಾಜಪಕ್ಷ ಔಟಾಗದೆ 17
ಲಸಿತ ಮಾಲಿಂಗ ಔಟಾಗದೆ 8
ಇತರ 9
ಒಟ್ಟು (20 ಓವರ್‌ಗಳಲ್ಲಿ 6 ವಿಕೆಟಿಗೆ) 142
ವಿಕೆಟ್‌ ಪತನ: 1-3, 2-33, 3-76, 4-99, 5-110, 6-132.
ಬೌಲಿಂಗ್‌:
ಮಿಚೆಲ್‌ ಸ್ಟಾರ್ಕ್‌ 4-0-32-2
ಕೇನ್‌ ರಿಚರ್ಡ್‌ಸನ್‌ 4-0-25-2
ಪ್ಯಾಟ್‌ ಕಮಿನ್ಸ್‌ 4-0-23-2
ಆ್ಯಶrನ್‌ ಅಗರ್‌ 4-0-24-0
ಆ್ಯಡಂ ಝಂಪ 4-0-30-0
ಆಸ್ಟ್ರೇಲಿಯ
ಆರನ್‌ ಫಿಂಚ್‌ ಸಿ ಜಯಸೂರ್ಯ ಬಿ ಕುಮಾರ 37
ಡೇವಿಡ್‌ ವಾರ್ನರ್‌ ಔಟಾಗದೆ 57
ಸ್ಟೀವನ್‌ ಸ್ಮಿತ್‌ ಸಿ ಸಂದಕನ್‌ ಬಿ ಪ್ರದೀಪ್‌ 13
ಮೆಕ್‌ಡರ್ಮಟ್‌ ಎಲ್‌ಬಿಡಬ್ಲ್ಯು ಮಾಲಿಂಗ 5
ಆ್ಯಶrನ್‌ ಟರ್ನರ್‌ ಔಟಾಗದೆ 22
ಇತರ 11
ಒಟ್ಟು (17.4 ಓವರ್‌ಗಳಲ್ಲಿ 3 ವಿಕೆಟಿಗೆ) 145
ವಿಕೆಟ್‌ ಪತನ: 1-69, 2-85, 3-99.
ಬೌಲಿಂಗ್‌:
ಲಸಿತ ಮಾಲಿಂಗ 4-0-22-1
ಲಹಿರು ಕುಮಾರ 4-0-49-1
ನುವಾನ್‌ ಪ್ರದೀಪ್‌ 3.4-0-20-1
ಶೇಹಾನ್‌ ಜಯಸೂರ್ಯ 2-0-24-0
ಲಕ್ಷಣ ಸಂದಕನ್‌ 4-0-25-0

ಟಾಪ್ ನ್ಯೂಸ್

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL; To win the RCB Cup first….: What did Robin Uthappa say?

IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-sdssd

Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.