ಅಂಡರ್-19 ವಿಶ್ವಕಪ್: ಕಿರೀಟ ಗೆದ್ದವರ ಕೀಳು ವರ್ತನೆ
Team Udayavani, Feb 10, 2020, 11:21 PM IST
ಪೊಚೆಫ್ಸೂಮ್ (ದಕ್ಷಿಣ ಆಫ್ರಿಕಾ): ಭಾರತ-ಬಾಂಗ್ಲಾದೇಶ ನಡುವಿನ ಅಂಡರ್-19 ವಿಶ್ವಕಪ್ ಫೈನಲ್ ಪಂದ್ಯದ ಬಳಿಕ ಎರಡೂ ತಂಡಗಳ ಆಟಗಾರರು ಪರಸ್ಪರ ತಳ್ಳಾಡಿಕೊಂಡು ಗಲಾಟೆ ಮಾಡಿಕೊಂಡಿರುವ ವಿಲಕ್ಷಣ ಪ್ರಸಂಗ ನಡೆದಿದೆ.
ಬಾಂಗ್ಲಾದೇಶ ಗೆದ್ದ ಕೂಡಲೇ ರಾಷ್ಟ್ರಧ್ವಜಗಳನ್ನು ಕೈಯ್ಯಲ್ಲಿ ಹಿಡಿದು ನಿಂತಿದ್ದ ಆ ತಂಡದ ಆಟಗಾರರು ಮೈದಾನ ಪ್ರವೇಶಿಸಿ ಕ್ರೀಸ್ನತ್ತ ಓಡಿ ಬ್ಯಾಟ್ಸ್ಮನ್ಗಳನ್ನು ಬಿಗಿದಪ್ಪಿ ಕುಣಿದು ಕುಪ್ಪಳಿಸಿದರು. ಜತೆಗೆ ಅಂಗಳದಲ್ಲಿದ್ದ ಭಾರತೀಯ ಆಟಗಾರರ ಮುಂದೆ ನೃತ್ಯಗೈದು ರೇಗಿಸಿದರು. ಭಾರತೀಯ ಆಟಗಾರರು ಬಾಂಗ್ಲಾದ ಕೆಲವು ಆಟಗಾರರನ್ನು ತಳ್ಳಾಡಿದರು.
ಈ ಘಟನೆಗಳ ವೀಡಿಯೋಗಳನ್ನು ಐಸಿಸಿ ಪರಿಶೀಲಿಸಲಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಭಾರತ ತಂಡದ ವ್ಯವಸ್ಥಾಪಕರು ತಿಳಿಸಿದ್ದಾರೆ.