ಭಾರತದ ಕ್ರಿಕೆಟ್‌ ಕಲಿಗಳೆದುರು ಬಾಂಗ್ಲಾ ಹುಲಿಗಳು

ಅಂಡರ್‌-19 ವಿಶ್ವಕಪ್‌ ಕೂಟದಲ್ಲಿ ಏಶ್ಯನ್‌ ತಂಡಗಳ ಫೈನಲ್‌

Team Udayavani, Feb 9, 2020, 7:15 AM IST

trophy

ಪೊಚೆಫ್ ಸ್ಟ್ರೂಮ್ (ದಕ್ಷಿಣ ಆಫ್ರಿಕಾ): ಹದಿಮೂರನೇ ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌ ಫೈನಲ್‌ ಹೋರಾಟಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಆದರಿದು “ಏಶ್ಯ ಕಪ್‌ ಫೈನಲ್‌’ ಏನೋ ಎಂಬಂತೆ ಭಾಸವಾಗುತ್ತಿದೆ. ರವಿವಾರ ದಕ್ಷಿಣ ಆಫ್ರಿಕಾದ ಪೊಚೆಫ್ ಸ್ಟ್ರೂಮ್ನಲ್ಲಿ ನಡೆಯುವ ಪ್ರಶಸ್ತಿ ಕಾಳಗದಲ್ಲಿ ಹಾಲಿ ಚಾಂಪಿಯನ್‌ ಖ್ಯಾತಿಯ ಭಾರತ ಹಾಗೂ ನೆರೆಯ ಬಾಂಗ್ಲಾದೇಶ ಎದುರಾಗುತ್ತಿರುವುದೇ ಇದಕ್ಕೆ ಕಾರಣ!

ಭಾರತಕ್ಕೆ ಇದು 7ನೇ ಫೈನಲ್‌. ಅತೀ ಹೆಚ್ಚು 4 ಸಲ ಚಾಂಪಿಯನ್‌ ಆಗಿರುವ ಭಾರತ, 2 ಸಲ ಎಡವಿದೆ. ಬಾಂಗ್ಲಾಕ್ಕೆ ಇದು ಮೊದಲ ಫೈನಲ್‌ ಸಂಭ್ರಮ. ಸಹಜವಾಗಿಯೇ ಇತಿಹಾಸ ನಿರ್ಮಿಸುವ ತವಕ. ಆದರೆ ಇದು ಸುಲಭವಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟ. ಎದುರಾಳಿಯನ್ನು ಭಾರತ ಲಘುವಾಗಿ ಪರಿಗಣಿಸದೇ ಹೋದರೆ “ಕಪ್‌ ನಮ್ಮದೇ’ ಆಗುವುದರಲ್ಲಿ ಅನುಮಾನವಿಲ್ಲ.

ಸಾಮಾನ್ಯವಾಗಿ ಇಂಥ ಬಲಾಡ್ಯ ಹಾಗೂ ಅಚ್ಚರಿಯ ಫೈನಲ್‌ ತಂಡದ ನಡುವಿನ ಕದನ ಏರುಪೇರಿನ ಫ‌ಲಿತಾಂಶಕ್ಕೆ ಸಾಕ್ಷಿಯಾಗುತ್ತದೆ. ಇದಕ್ಕೆ 1983ರ ಪ್ರುಡೆನ್ಶಿಯಲ್‌ ವಿಶ್ವಕಪ್‌ ಪಂದ್ಯಾವಳಿಯ ನಿದರ್ಶನವೊಂದೇ ಸಾಕು. ಅಂದು ಹ್ಯಾಟ್ರಿಕ್‌ ಹಾದಿಯಲ್ಲಿದ್ದ ವೆಸ್ಟ್‌ ಇಂಡೀಸಿಗೆ ಮೊದಲ ಸಲ ಫೈನಲಿಗೆ ಲಗ್ಗೆ ಇರಿಸಿದ ಭಾರತ ಮರ್ಮಾಘಾತವಿಕ್ಕಿತ್ತು. ರವಿವಾರದ ಪ್ರಶಸ್ತಿ ಸಮರದ ವೇಳೆ ಪ್ರಿಯಂ ಗರ್ಗ್‌ ಬಳಗ ಇಂಥದೊಂದು ಎಚ್ಚರಿಕೆಯಲ್ಲಿ ಇರುವುದು ಕ್ಷೇಮ.

ಭಾರತದ ಅಜೇಯ ಓಟ
ಕೂಟದುದ್ದಕ್ಕೂ ಅಮೋಘ ಪ್ರದರ್ಶನ ಕಾಯ್ದುಕೊಂಡ ಭಾರತ ಮಂಗಳವಾರದ ಸೆಮಿಫೈನಲ್‌ನಲ್ಲಿ ಪಾಕಿಸ್ಥಾನವನ್ನು 10 ವಿಕೆಟ್‌ಗಳಿಂದ ಕೆಡವಿ ಫೈನಲ್‌ಗೆ ಲಗ್ಗೆ ಇರಿಸಿತ್ತು. ಇನ್ನೊಂದೆಡೆ ಬಾಂಗ್ಲಾದೇಶ 6 ವಿಕೆಟ್‌ಗಳಿಂದ ನ್ಯೂಜಿಲ್ಯಾಂಡನ್ನು ಪರಾಭವಗೊಳಿಸಿತ್ತು.

ಕೂಟದ ಅಜೇಯ ತಂಡವಾಗಿರುವ ಭಾರತ ಕೆಲವು ಮಂದಿ ಅಸಾಮಾನ್ಯ ಕ್ರಿಕೆಟಿಗರಿಂದ ಹೆಚ್ಚು ಬಲಾಡ್ಯವಾಗಿದೆ. ಎಡಗೈ ಆರಂಭಕಾರ ಯಶಸ್ವಿ ಜೈಸ್ವಾಲ್‌, ಸ್ಪಿನ್ನರ್‌ಗಳಾದ ರವಿ ಬಿಶ್ನೋಯ್‌, ಅಥರ್ವ ಅಂಕೋಲೆಕರ್‌, ಪೇಸ್‌ ಬೌಲರ್‌ ಕಾರ್ತಿಕ್‌ ತ್ಯಾಗಿ ಇವರಲ್ಲಿ ಪ್ರಮುಖರು. ಭಾರತದ ಈ ಓಟದಲ್ಲಿ ಉಳಿದ ಆಟಗಾರರ ಕೊಡುಗೆಯೂ ಗಮನಾರ್ಹ. ಇವರೆಲ್ಲರ ಒಟ್ಟು ಪ್ರಯತ್ನ ರವಿವಾರ ಹರಿಣಗಳ ನಾಡಿನಲ್ಲಿ ಗೆಲುವಿನ ರೂಪದಲ್ಲಿ ಅನಾವರಣಗೊಳ್ಳಬೇಕಿದೆ.

ಒತ್ತಡಮುಕ್ತ ಆಟ
ಬಾಂಗ್ಲಾದೇಶ ಪಾಲಿಗೆ ಇದೊಂದು “ಬಿಗ್‌ ಗೇಮ್‌’. 2018ರ ಕ್ವಾರ್ಟರ್‌ ಫೈನಲ್‌ನಲ್ಲಿ ಎಡವಿದ ಬಳಿಕ ಬಾಂಗ್ಲಾದ ಕಿರಿಯರ ಕ್ರಿಕೆಟ್‌ ಪ್ರಗತಿಯ ಪಥದಲ್ಲಿ ಸಾಗಿದೆ. ಒತ್ತಡ ಬಿಟ್ಟು ಬಿಂದಾಸ್‌ ಆಗಿ ಆಡಿದರೆ ಅದು ಭಾರತಕ್ಕೆ ಸವಾಲಾಗುವುದರಲ್ಲಿ ಅನುಮಾನವಿಲ್ಲ.

“ಯಾವುದೇ ಅನಗತ್ಯ ಒತ್ತಡವನ್ನು ನಾವು ಹೇರಿಕೊಳ್ಳಲು ಬಯಸುವುದಿಲ್ಲ. ಭಾರತ ಅತ್ಯುತ್ತಮ ತಂಡ. ನಾವೂ ಮೂರೂ ವಿಭಾಗಗಳಲ್ಲಿ “ಎ’ ದರ್ಜೆಯ ಪ್ರದರ್ಶನ ನೀಡಬೇಕಿದೆ. ನಿಮ್ಮ ಬೆಂಬಲ ನಮಗಿರಲಿ ಎಂದು ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದೇನೆ’ ಎಂಬುದಾಗಿ ಬಾಂಗ್ಲಾ ತಂಡದ ನಾಯಕ ಅಕºರ್‌ ಅಲಿ ಹೇಳಿದ್ದಾರೆ.

ಹೊಸ ಹುರುಪಿನ ತಂಡ
ಭಾರತ ಈ ಪಂದ್ಯಾವಳಿಯಲ್ಲಿ “ಫ್ರೆಶ್‌ ಮುಖ’ಗಳನ್ನು ಹೊಂದಿರುವ ಏಕೈಕ ತಂಡವೆಂಬುದು ವಿಶೇಷ. ಉಳಿದ ಕೆಲವು ತಂಡಗಳಲ್ಲಿ ಹಿಂದಿನ ಸಲದ ಕೂಟದಲ್ಲಿ ಆಡಿದ ಕೆಲವು ಆಟಗಾರರನ್ನು ಕಾಣಬಹುದಾಗಿದೆ. ಈ ಪಂದ್ಯಾವಳಿಗೆ ಆಗಮಿಸುವ ಮುನ್ನ ಭಾರತದ ಕಿರಿಯ ಕ್ರಿಕೆಟಿಗರು ವಿಶ್ವದ ವಿವಿಧ ಭಾಗಗಳಲ್ಲಿ 30ಕ್ಕೂ ಹೆಚ್ಚು ಪಂದ್ಯಗಳನ್ನಾಡಿ ಅನುಭವ ಗಳಿಸಿದ್ದರು.

ಟಾಪ್ ನ್ಯೂಸ್

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.