ಗುಜರಾತ್‌ಗೆ ಸಾಟಿಯಾಗದ ಯು ಮುಂಬಾ


Team Udayavani, Sep 21, 2017, 10:15 AM IST

21STATE–25.jpg

ರಾಂಚಿ: ಪ್ರೊ ಕಬಡ್ಡಿ ಮಾಜಿ ಚಾಂಪಿಯನ್‌ ಯು ಮುಂಬಾ ಪರಿಸ್ಥಿತಿ ಈ ಬಾರಿ ಬಹಳ ಕಷ್ಟದಲ್ಲಿದೆ. 5ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಅದರ ಗ್ರಹಗತಿಗಳು ಸ್ಥಿರವಾಗಿಲ್ಲ. ಒಂದು ಪಂದ್ಯ ಗೆದ್ದರೆ 2 ಪಂದ್ಯ ಸೋಲುವಂತಹ ಹಣೆ ಬರಹ ಹೊಂದಿದಂತಿದೆ. ಬುಧವಾರ ಅದು ವಲಯ 1ರ ಅಗ್ರಸ್ಥಾನಿ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ವಿರುದ್ಧ ಅನುಭವಿಸಿದ 23-45 ಅಂತರದ ಹೀನಾಯ ಸೋಲು ಇದನ್ನು ಮತ್ತೂಮ್ಮೆ ಸಾಬೀತುಪಡಿಸಿತು.

ಪ್ರೊ ಕಬಡ್ಡಿ 5ನೇ ಆವೃತ್ತಿ ರಾಂಚಿ ಚರಣದ ಬುಧ ವಾರದ ಮೊದಲ ಪಂದ್ಯದಲ್ಲಿ ಯು ಮುಂಬಾ ತಂಡ ಮೂರು ಬಾರಿ ಆಲೌಟಾಗಿ, ಪಂದ್ಯದ ಕೊನೆಯ ನಿಮಿಷದಲ್ಲಿ ಒಮ್ಮೆ ಆಲೌಟ್‌ ತಪ್ಪಿಸಿಕೊಂಡು ನಿಟ್ಟುಸಿರುಬಿಟ್ಟಿತು. ಇದಕ್ಕೆ ತದ್ವಿರುದ್ಧವಾಗಿ ನಾಯಕ ಸುಕೇಶ್‌ ಹೆಗ್ಡೆ ಅನುಪಸ್ಥಿತಿಯಲ್ಲಿ ಆಡಿದರೂ ಗುಜರಾತ್‌ ಅಬ್ಬರ ಸ್ವಲ್ಪವೂ ಕಡಿಮೆಯಾಗಲಿಲ್ಲ. ಅಗ್ರಸ್ಥಾನಿ ಪಟ್ಟಕ್ಕೆ ಸರಿಯಾಗಿ ಆಡಿದ ಅದು ಅಕ್ಷರಶಃ ಮುಂಬೈಯನ್ನು ಹೊಸಕಿ ಹಾಕಿತು. ಒಮ್ಮೆಯೂ ಆಲೌಟಾಗದೆ ಅದು ಮೆರೆದಾಡಿತು.

ಪಂದ್ಯದ ಮೊದಲರ್ಧದ 11ನೇ ಮತ್ತು 19ನೇ ನಿಮಿಷದಲ್ಲಿ ಮುಂಬಾ 2 ಬಾರಿ ಆಲೌಟಾಯಿತು. ಆಗ ಗುಜರಾತ್‌ 23, ಮುಂಬಾ 12 ಅಂಕ ಗಳಿಸಿದ್ದವು. ಇಂತಹ ಭಾರೀ ಅಂತರವನ್ನು 2ನೇ ಅವಧಿಯಲ್ಲಿ ಹಿಂದಿಕ್ಕುವುದು ಯಾವುದೇ ತಂಡಕ್ಕಾದರೂ ಕಷ್ಟಕರ. ಅದರಲ್ಲೂ ಗುಜರಾತ್‌ನಂತಹ ಬಲಿಷ್ಠ ತಂಡದೆದುರು ಬಹುತೇಕ ಸಾಧ್ಯವೇ ಇಲ್ಲ. ಈ ಹಂತದಲ್ಲೇ ಮುಂಬಾ ಸೋತಾಗಿತ್ತು!

2ನೇ ಅವಧಿಯಲ್ಲಿ ಮುಂಬಾ ತಿರುಗಿ ಬೀಳುವ ಯತ್ನವನ್ನೇ ಮಾಡಲಿಲ್ಲ. ನಾಯಕ ಅನೂಪ್‌ ಕುಮಾರ್‌ ದಾಳಿಯಲ್ಲಿ ಪೂರ್ಣ ವಿಫ‌ಲರಾಗಿದ್ದು, ಕಾಶಿಲಿಂಗ್‌ ಕೂಡ ಸಾಮರ್ಥ್ಯಕ್ಕೆ ತಕ್ಕ ಆಟವಾಡ ದಿದ್ದದ್ದು ಮುಂಬೈಗೆ ಮುಳುವಾಯಿತು. ಇನ್ನು ಗುಜರಾತ್‌ ಪ್ರದರ್ಶನವನ್ನು ವರ್ಣಿ ಸುವುದೇ ಅಗತ್ಯವಿಲ್ಲ. ಬಹುತೇಕ ಹೊಸ ಹುಡುಗರಿಂದ ತುಂಬಿದ್ದರೂ ಅನುಭವಿಗಳ ಪಡೆಯಂತೆ ಆಡಿತು. ದಾಳಿಯಲ್ಲಿ ಸಚಿನ್‌ ಕೆಲ ಆಕರ್ಷಕ ಪ್ರದರ್ಶನ ನೀಡಿ ದರು. ರಕ್ಷಣೆಯಲ್ಲಿ ಎಂದಿನಂತೆ ಅದರ ಪ್ರಮುಖ ಕ್ಯಾಚರ್‌ ಫ‌ಜೆಲ್‌ ಅಟ್ರಾಚೆಲಿ ಮಿರಿಮಿರಿ ಮಿಂಚಿದರು.

ಪಾಟ್ನಾ ಜಯಭೇರಿ
ರಾಂಚಿ: ತವರಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಪಾಟ್ನಾ ಪೈರೇಟ್ಸ್‌ ಭರ್ಜರಿ ಆಟದ ಪ್ರದರ್ಶನ ನೀಡಿದೆ. ತನ್ನ ವಲಯದ ಕೊನೆಯ ಸ್ಥಾನಿ ತಮಿಳ್‌ ತಲೈವಾಸ್‌ ವಿರುದ್ಧ ಬುಧವಾರ ನಡೆದ ಪಂದ್ಯದ ಆರಂಭದಲ್ಲಿ ಆಲೌಟ್‌ ಆದರೂ ಪಾಟ್ನಾ ತಿರುಗೇಟು ನೀಡಿ ಪಂದ್ಯವನ್ನು 41-39 ಅಂಕಗಳಿಂದ ಗೆಲ್ಲಲು ಯಶಸ್ವಿ ಯಾಯಿತು.  

ಆರಂಭದಲ್ಲಿ ತಲೈವಾಸ್‌ ಭರ್ಜರಿ ಆಟವಾಡಿತು. ಆದರೆ ಪಾಟ್ನಾ ತಂಡವನ್ನು ಆಲೌಟ್‌ ಮಾಡಿಸಿ ಮೇಲುಗೈ ಸಾಧಿಸಿದ್ದ ತಲೈವಾಸ್‌ ಕೊನೆ ಹಂತದಲ್ಲಿ ಎಡವಿತು. ಇದರಿಂದ ಗೆಲ್ಲುವ ಪಂದ್ಯವನ್ನು ತಲೈವಾಸ್‌ ಕಳೆದುಕೊಂಡಿತು. ಪಾಟ್ನಾ ಗುರುವಾರ ನಡೆಯುವ ಪಂದ್ಯ ದಲ್ಲಿ ಯುಪಿಯನ್ನು ಎದುರಿಸಲಿದೆ.

ಕೆ.ಪೃಥ್ವಿಜಿತ್‌

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.