ಹಜಾರೆ ಟ್ರೋಫಿ: ಮತ್ತೆ ಮೇಲೇರಿದ ಕರ್ನಾಟಕ
Team Udayavani, Nov 21, 2022, 10:35 PM IST
ಕೋಲ್ಕತಾ: ಕರ್ನಾಟಕ 6ನೇ ಪಂದ್ಯದಲ್ಲಿ ಸಿಕ್ಕಿಂಗೆ 6 ವಿಕೆಟ್ ಸೋಲುಣಿಸಿ ವಿಜಯ್ ಹಜಾರೆ ಟ್ರೋಫಿ “ಬಿ’ ವಿಭಾಗದ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನ ಅಲಂಕರಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಸಿಕ್ಕಿಂ 46.2 ಓವರ್ಗಳಲ್ಲಿ 117ಕ್ಕೆ ಆಲೌಟ್ ಆಯಿತು. ಕರ್ನಾಟಕ 24.4 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 121 ರನ್ ಹೊಡೆಯಿತು.
ಇದು ಮಾಯಾಂಕ್ ಅಗರ್ವಾಲ್ ಬಳಗಕ್ಕೆ ಒಲಿದ 5ನೇ ಗೆಲುವು. ಅಸ್ಸಾಂ ಕೂಡ 5 ಜಯ ಸಾಧಿಸಿದೆ. ಎರಡೂ ತಂಡಗಳು 10 ಅಂಕ ಹೊಂದಿವೆ. ಕರ್ನಾಟಕ ರನ್ರೇಟ್ನಲ್ಲಿ ಮುಂದಿದೆ (+1.861). ಅಸ್ಸಾಂ +1.510 ರನ್ರೇಟ್ ಹೊಂದಿದೆ.
ಚೇಸಿಂಗ್ ವೇಳೆ ಕರ್ನಾಟಕ ಕೂಡ ಭಾರೀ ಕುಸಿತಕ್ಕೆ ಸಿಲುಕಿತು. 12ಕ್ಕೆ 3 ವಿಕೆಟ್, 37ಕ್ಕೆ 4 ವಿಕೆಟ್ ಹಾರಿ ಹೋಗಿತ್ತು. ಆದರೆ ಮಾಯಾಂಗ್ ಅಗರ್ವಾಲ್ (ಅಜೇಯ 54) ಮತ್ತು ನಿಕಿನ್ ಜೋಸ್ (ಅಜೇಯ 46) ಮುರಿಯದ 5ನೇ ವಿಕೆಟಿಗೆ 84 ರನ್ ಪೇರಿಸಿ ತಂಡವನ್ನು ದಡ ಮುಟ್ಟಿಸಿದರು.
ಸಿಕ್ಕಿಂಗೆ ವಿ. ಕೌಶಿಕ್, ಶ್ರೇಯಸ್ ಗೋಪಾಲ್ ಹಾಗೂ ಕೆ. ಗೌತಮ್ ಸೇರಿ ಆಘಾತವಿಕ್ಕಿದರು. ಮೂವರೂ ತಲಾ 3 ವಿಕೆಟ್ ಕೆಡವಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
“ನೀವು ಯಾರನ್ನಾದರೂ ಡೇಟ್ ಮಾಡಿ”.. ಸಮಂತಾಗೆ ಅಭಿಮಾನಿಯ ಮನವಿ; ನಟಿಯ ಪ್ರತಿಕ್ರಿಯೆ ವೈರಲ್
ಚಿಕ್ಕಮಗಳೂರು: ಕಾರಿನಲ್ಲಿ ಮದ್ಯದ ಬಾಟಲ್, ಸಿ.ಟಿ.ರವಿ ಕ್ಯಾಲೆಂಡರ್, ಲಾಂಗ್ ಪತ್ತೆ
4 ಮಕ್ಕಳೊಂದಿಗೆ ಬಾವಿಗೆ ಹಾರಿ,ಹಗ್ಗ ಹಿಡಿದು ತನ್ನನು ಹಾಗೂ ಹಿರಿ ಮಗಳನ್ನು ರಕ್ಷಿಸಿದ ತಾಯಿ.!
ಸಾವರ್ಕರ್ ಅವರನ್ನು ಅವಮಾನಿಸಿದರೆ… ರಾಹುಲ್ ಗಾಂಧಿ ಹೇಳಿಕೆಗೆ ಉದ್ಧವ್ ಠಾಕ್ರೆ ಆಕ್ರೋಶ
ಮಲಯಾಳಂ ಖ್ಯಾತ ನಟ ಇನೋಸೆಂಟ್ ನಿಧನ: ದುಃಖದಲ್ಲಿ ಮಾಲಿವುಡ್ ಚಿತ್ರರಂಗ