ಕೇರಳ ಕ್ರಿಕೆಟ್ ತಂಡಕ್ಕೆ ಉತ್ತಪ್ಪ ನಾಯಕ
Team Udayavani, Aug 29, 2019, 5:23 AM IST
ತಿರುವನಂತಪುರ (ಕೇರಳ): ಕರ್ನಾಟಕದ ಖ್ಯಾತ ಕ್ರಿಕೆಟಿಗ ರಾಬಿನ್ ಉತ್ತಪ್ಪ ಪ್ರಸಕ್ತ ಋತುವಿನಿಂದ ಕೇರಳ ತಂಡದ ಪರ ಆಡುತ್ತಿದ್ದಾರೆ. ಇದೀಗ ಕೇರಳ ತಂಡದ ನಾಯಕನೂ ಆಗಿದ್ದಾರೆ!
ಕೆಲವು ಸಮಯದಿಂದ ಉತ್ತಪ್ಪ ಅವರೇ ಕೇರಳ ಸೀಮಿತ ಓವರ್ಗಳ ತಂಡದ ನಾಯಕರಾಗಬಹುದು ಎಂಬ ಸುದ್ದಿ ಹಬ್ಬಿತ್ತು. ಈಗ ಎಲ್ಲ ಗೊಂದಲಗಳಿಗೆ ತೆರೆಬಿದ್ದಿದೆ. ವಿಜಯ್ ಹಜಾರೆ ಏಕದಿನ ಕೂಟದಲ್ಲಿ, ಉತ್ತಪ್ಪ ಕೇರಳ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಕೇರಳ ಕ್ರಿಕೆಟ್ ಸಂಸ್ಥೆ ಘೋಷಿಸಿದೆ. ಅನಂತರದ ಸಯ್ಯದ್ ಮುಷ್ತಾಕ್ ಅಲಿ ಟಿ20 ಕೂಟದಲ್ಲೂ ಉತ್ತಪ್ಪ ಅವರೇ ನಾಯಕರಾಗಿ ಮುಂದುವರಿಯಲಿದ್ದಾರೆ. ಇದರಿಂದ ಸಚಿನ್ ಬೇಬಿ ಕೇರಳ ತಂಡದ ನಾಯಕನ ಸ್ಥಾನವನಜು° ಕಳೆದುಕೊಂಡಿದ್ದಾರೆ.