ತಲೆಗೆ ಏಟು ತಿಂದು ನೆಲಕ್ಕೆ ಬಿದ್ದ ವೆಂಕಟೇಶ್ ಅಯ್ಯರ್; ಮೈದಾನಕ್ಕೆ ಬಂದ ಆ್ಯಂಬುಲೆನ್ಸ್
Team Udayavani, Sep 16, 2022, 5:32 PM IST
ಕೊಯಮತ್ತೂರು: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರಸಿದ್ಧ ಆಟಗಾರ ವೆಂಕಟೇಶ್ ಅಯ್ಯರ್ ಅವರು ಮೈದಾನದಲ್ಲಿ ತೆಲೆಗೆ ಏಟು ತಿಂದು ಬಿದ್ದ ಘಟನೆ ಇಂದು ನಡೆದಿದೆ. ದುಲೀಪ್ ಟ್ರೋಫಿಯ ಕೇಂದ್ರ ವಲಯವನ್ನು ಪ್ರತಿನಿಧಿಸುವ ವೆಂಕಟೇಶ್ ಅಯ್ಯರ್ ಅವರನ್ನು ಆ್ಯಂಬುಲೆನ್ಸ್ ನಲ್ಲಿ ಮೈದಾನದಿಂದ ಹೊರಕ್ಕೆ ಕರೆದುಕೊಂಡು ಹೋಗಲಾಗಿದೆ ಎಂದು ವರದಿಯಾಗಿದೆ.
ಇಲ್ಲಿನ ಎಸ್ ಎನ್ಆರ್ ಕ್ರಿಕೆಟ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಈ ಘಟನೆ ನಡೆದಿದೆ.
ಬೌಲರ್ ಚಿಂತನ್ ಗಜ ಎಸೆತವನ್ನು ಅಯ್ಯರ್ ಸಿಕ್ಸರ್ ಗೆ ಬಾರಿಸಿದರು. ಮುಂದಿನ ಎಸೆತವನ್ನು ನೇರವಾಗಿ ಹೊಡೆದರು. ತನ್ನೆಡೆಗೆ ಬಂದ ಚೆಂಡನ್ನು ಬೌಲರ್ ಗಜ ಮತ್ತೆ ಸ್ಟಂಪ್ ನೆಡೆಗೆ ಜೋರಾಗಿ ಎಸೆದರು. ಆದರೆ ಚೆಂಡು ನೇರವಾಗಿ ವೆಂಕಟೇಶ್ ಅಯ್ಯರ್ ತಲೆಗೆ ಬಡಿದಿದೆ. ಚೆಂಡು ಬಡಿದ ಕೂಡಲೇ ಅಯ್ಯರ್ ಮೈದಾನಕ್ಕೆ ಬಿದ್ದು ನೋವಿನಿಂದ ಒದ್ದಾಡಿದರು.
ಇದನ್ನೂ ಓದಿ:ಒಂದೇ ವಾರದಲ್ಲಿ 300 ಕೋಟಿ ಬಾಚಿದ ಬ್ರಹ್ಮಾಸ್ತ್ರ; ಬಾಯ್ಕಾಟ್ ನಡುವೆ ಚಿತ್ರ ಗೆದ್ದಿದ್ಹೇಗೆ?
ಚಿಕಿತ್ಸೆ ಪಡೆದ ನಂತರ ಅಯ್ಯರ್ ಮತ್ತೆ ಆಟಕ್ಕೆ ಹಿಂತಿರುಗಿದರು. ಆದರೆ ಒಂದು ಸಿಕ್ಸರ್ ಮತ್ತು ಒಂದೆರಡು ಬೌಂಡರಿಗಳ ಸಹಾಯದಿಂದ ಅವರು 9 ಎಸೆತಗಳಲ್ಲಿ 14 ರನ್ ಗಳಿಸಿ 37ನೇ ಓವರ್ನಲ್ಲಿ ತನುಷ್ ಕೋಟ್ಯಾನ್ ಬೌಲಿಂಗ್ ನಲ್ಲಿ ಔಟಾದರು.
Venkatesh Iyer is back on the field but what Gaja did is unacceptable.
?: @peri_periasamy pic.twitter.com/oLTR0Y0aml
— KnightRidersXtra (@knightridersxtr) September 16, 2022