ಮಯಾಮಿ ಓಪನ್ ಟೆನಿಸ್: ವೀನಸ್ ವಿಲಿಯಮ್ಸ್ ಮುನ್ನಡೆ
Team Udayavani, Mar 23, 2019, 12:30 AM IST
ಮಯಾಮಿ: ಏಳು ಬಾರಿಯ ಗ್ರ್ಯಾನ್ಸ್ಲಾಮ್ ಚಾಂಪಿಯನ್ ಅಮೆರಿಕದ ವೀನಸ್ ವಿಲಿಯಮ್ಸ್ “ಮಯಾಮಿ ಓಪನ್’ ಕೂಟದ ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದಾರೆ. ವೀನಸ್ ವಿಲಿಯಮ್ಸ್ ಸ್ಲೋವೆನಿ ಯಾದ ಡಾಲಿಲಾ ಜಾಕುಪೊವಿಕ್ ಅವರನ್ನು ಕೇವಲ 78 ನಿಮಿಷಗಳ ಹೋರಾಟದಲ್ಲಿ 7-5, 6-8 ನೇರ ಸೆಟ್ಗಳಿಂದ ಸೋಲಿಸಿದರು. ಮುಂದಿನ ಪಂದ್ಯದಲ್ಲಿ ಅವರು ಸ್ವೀಡನ್ನ ರೆಬೆಕ್ಕಾ ಪೀಟರ್ಸನ್ ವಿರುದ್ಧ ಆಡಲಿದ್ದಾರೆ. ರೆಬೆಕ್ಕಾ ಜರ್ಮನಿಯ ಅರ್ಹತಾ ಆಟಗಾರ್ತಿ ಲಾರಾ ಸಿಗಡ್ ವಿರುದ್ಧ 6-1, 5-7, 7-5 ಅಂತರದ ಗೆಲುವು ಸಾಧಿಸಿದರು. 3 ಬಾರಿಯ ಮಯಾಮಿ ಓಪನ್ ಚಾಂಪಿಯನ್ ವೀನಸ್ ವಿಲಿಯಮ್ಸ್ ವನಿತಾ ಸಿಂಗಲ್ಸ್ ವಿಭಾಗದಲ್ಲಿ ಕಣದಲ್ಲಿರುವ ಹಿರಿಯ ಆಟಗಾರ್ತಿಯಾಗಿದ್ದಾರೆ.
ಕ್ವಿಟೋವಾಗೆ ಜಯ
ವಿಶ್ವದ 2ನೇ ರ್ಯಾಂಕಿಂಗ್ ಆಟಗಾರ್ತಿ ಪೆಟ್ರಾ ಕ್ವಿಟೋವಾ ಗ್ರೀಸ್ನ ಮರಿಯಾ ಸಕ್ಕರಿ ವಿರುದ್ಧ 6-1, 6-1 ನೇರ ಸೆಟ್ಗಳಿಂದ ಗೆದ್ದು 3ನೇ ಸುತ್ತು ಪ್ರವೇಶಿಸಿದ ಮೊದಲ ಆಟಗಾರ್ತಿ ಎನಿಸಿದರು. ಇಂಡಿಯನ್ ವೆಲ್ಸ್ ಚಾಂಪಿಯನ್ ಕೆನಡಾದ ಬಿಯಾಂಕಾ ಆ್ಯಂಡ್ರಿಸ್ಕೂ ರೊಮೇನಿಯದ ಐರಿನಾ ಕ್ಯಾಮೆಲಿಯಾ ಬೆಗು ಅವರನ್ನು 4-6, 7-6 (7-2), 6-2 ಸೆಟ್ಗಳಿಂದ ಸೋಲಿಸಿದರು. ನಂ. ವನ್ ಆಟಗಾರ್ತಿ, ಜಪಾನಿನ ನವೋಮಿ ಒಸಾಕಾ ಅವರ ಕಿರಿಯ ಸಹೋದರಿ ಮಾರಿ ಒಸಾಕಾ ಮೊದಲ ಸುತ್ತಿನಲ್ಲೇ ಎಡವಿದ್ದಾರೆ. ಅವರು ಅಮೆರಿಕದ ವಿಟ್ನಿ ಓಸುಗ್ವೆ ವಿರುದ್ಧ 2-6, 4-6 ಸೆಟ್ಗಳಿಂದ ಪರಾಭವಗೊಂಡರು.
ಪ್ರಜ್ಞೆಶ್ ಪರಾಭವ
ಅಮೋಘ ಪ್ರದರ್ಶನ ನೀಡಿ “ಮಯಾಮಿ ಓಪನ್’ ಕೂಟದ ಪ್ರಧಾನ ಸುತ್ತಿಗೆ ಪ್ರವೇಶಿಸಿದ್ದ ಭಾರತದ ಪ್ರಜ್ಞೆàಶ್ ಗುಣೇಶ್ವರನ್ ಮೊದಲ ಸುತ್ತಿನ ಪಂದ್ಯದಲ್ಲೇ ಸೋಲನುಭವಿಸಿ ಟೂರ್ನಿಯಿಂದ ನಿರ್ಗಮಿಸಿದ್ದಾರೆ. ಶುಕ್ರವಾರ ನಡೆದ ಪಂದ್ಯದಲ್ಲಿ ಪ್ರಜ್ಞೆàಶ್ ವಿಶ್ವದ 16ನೇ ರ್ಯಾಂಕಿನ, ಸ್ಪೇನಿನ ಜೂಮ್ ಮುನಾರ್ ವಿರುದ್ಧ6-7 (3-7), 4-6 ಸೆಟ್ಗಳಿಂದ ಸೋತರು. ಅರ್ಹತಾ ಸುತ್ತಿನಲ್ಲಿ ಜೇ ಕ್ಲಾರ್ಕ್ ವಿರುದ್ಧ ಗೆಲುವು ದಾಖಲಿಸಿ ಪ್ರಧಾನ ಸುತ್ತಿಗೆ ಪ್ರವೇಶಿಸಿದ್ದ ಪ್ರಜ್ಞೆàಶ್, ಮೊದಲ ಸೆಟ್ನಲ್ಲಿ ಮುನಾರ್ಗೆ ಪೈಪೋಟಿ ನೀಡಿ ಟೈ ಬ್ರೇಕರ್ಗೆ ವಿಸ್ತರಿಸಿದರು. ಆದರೆ ಟೈ ಇಲ್ಲಿ ಸೋತರು. ದ್ವಿತೀಯ ಸೆಟ್ನ ಆರಂಭದಲ್ಲೇ ಹಿಡಿತ ಸಾಧಿಸಿಕೊಂಡ ಮುನಾರ್ ಸುಲಭದಲ್ಲಿ ಜಯಿಸಿ ದ್ವಿತೀಯ ಸುತ್ತು ಪ್ರವೇಶಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು