ಮಗನಿಗಾಗಿ ವಿಂಬಲ್ಡನ್‌, ಆಸ್ಟ್ರೇಲಿಯನ್‌ ಟೆನಿಸ್‌ ಬಿಟ್ಟ ಅಜರೆಂಕಾ


Team Udayavani, Jan 17, 2018, 11:48 AM IST

17-26.jpg

ಕ್ಯಾಲಿಫೋರ್ನಿಯಾ: ಟೆನಿಸ್‌ ಪ್ರಿಯರೆಲ್ಲ ಬೆಲಾರಸ್‌ನ ಈ ಟೆನಿಸ್‌ ಸುಂದರಿ ವಿಕ್ಟೋರಿಯಾ ಅಜರೆಂಕಾ ಹೆಸರು ಕೇಳಿರುತ್ತಾರೆ. ಮಾಜಿ ವಿಶ್ವ ನಂ.1 ಸಿಂಗಲ್ಸ್‌ ಆಟಗಾರ್ತಿ. ಆಕೆ ಏಳೆಂಟು ತಿಂಗಳಿಂದ ಟೆನಿಸ್‌ ಅಂಕಣಕ್ಕೆ ಇಳಿದಿಲ್ಲ. ವಿಂಬಲ್ಡನ್‌, ಆಸ್ಟ್ರೇಲಿಯನ್‌ ಓಪನ್‌ನಂತಹ ಗ್ರ್ಯಾನ್‌ಸ್ಲಾಮ್‌ಗಳನ್ನು ತಪ್ಪಿಸಿಕೊಂಡಿದ್ದಾರೆ.

ಇದಕ್ಕೆ ಕಾರಣವೇನು ಗೊತ್ತಾ? ತನ್ನ 1 ವರ್ಷದ ಪುತ್ರನನ್ನು ತನ್ನದೇ ಸುಪರ್ದಿಯಲ್ಲಿ ಉಳಿಸಿಕೊಳ್ಳಬೇಕೆಂಬ ತಾಯ್ತನದ ತುಡಿತ! ವಿಕ್ಟೋರಿಯಾ ಮತ್ತು ಬಿಲ್ಲಿ ಮೆಕ್‌ಕೀಗ್‌ ಸಂಬಂಧದ ಪರಿಣಾಮ ಹುಟ್ಟಿದ್ದು ಲಿಯೊ ಎಂಬ ಗಂಡುಮಗು. ಈ ಮಗುವಿನ ವಾರಸುದಾರರು ಯಾರು ಎಂಬ ಪ್ರಕರಣ ಅಮೆರಿಕದ ಲಾಸ್‌ ಏಂಜಲೀಸ್‌ ನ್ಯಾಯಾಲಯದ ಮೆಟ್ಟಿಲೇರಿತ್ತು. ಪ್ರಕರಣ  ಇತ್ಯರ್ಥವಾಗುವರೆಗೆ ಕ್ಯಾಲಿ ಫೋರ್ನಿಯಾ ಬಿಟ್ಟು ಹೋಗುವಂತಿಲ್ಲ ಎಂದು ನ್ಯಾಯಾಲಯ ಹೇಳಿದ್ದರಿಂದ ವಿಕ್ಟೋರಿಯಾ ಇಕ್ಕಟ್ಟಿಗೆ ಸಿಕ್ಕಿದ್ದರು.

ಮಗನಿಗಾಗಿ ಟೆನಿಸ್‌ ಕೂಟಗಳನ್ನೇ ತ್ಯಜಿಸಿದರು. ಇದೀಗ ನ್ಯಾಯಾಲಯ ವಿಕ್ಟೋರಿಯಾ ಪರ ತೀರ್ಪು ನೀಡಿದೆ. ಆದ್ದರಿಂದ ಆಕೆ ನಿರಾಳರಾಗಿದ್ದಾರೆ. ವಾಸ್ತವವಾಗಿ ವಿಕ್ಟೋರಿಯಾ ಬೆಲಾರಸ್‌ ದೇಶದವರು. ಆ ದೇಶದ ನ್ಯಾಯಾಲಯ, ಮಗುವನ್ನು ವಿಕ್ಟೋರಿಯಾ ನೋಡಿ ಕೊಳ್ಳಬೇಕು ಎಂದೇ ತೀರ್ಪು ನೀಡಿತ್ತು. ಆದರೆ ವಿಕ್ಟೋರಿಯಾ ಅಮೆರಿಕದಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದರಿಂದ ಮೆಕ್‌ಕೀಗ್‌ ಲಾಸ್‌ ಏಂಜಲೀಸ್‌ನಲ್ಲಿ ಪ್ರಕರಣ ಹೂಡಿದ್ದರು. ಈಗ ನ್ಯಾಯಾಲಯ, ಪ್ರಸ್ತುತ ಪ್ರಕರಣ ಅಮೆರಿಕದ ವ್ಯಾಪ್ತಿಗೆ ಬರುವುದಿಲ್ಲ. ಅದನ್ನು ಬೆಲಾರಸ್‌ನಲ್ಲೇ ಇತ್ಯರ್ಥ ಮಾಡಿಕೊಳ್ಳಿ ಎಂದಿದೆ. ಅದು ವಿಕ್ಟೋರಿಯಾ ಸಂತೋಷಕ್ಕೆ ಕಾರಣ. ಹಾಗೆಂದೇ ಕೂಡಲೇ ಎಲ್ಲವೂ  ವಿಕ್ಟೋರಿಯಾ ಪರವಾಗಿದೆ ಎಂಬ ಸ್ಥಿತಿಯೇನಿಲ್ಲ. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಮೆಕ್‌ ಕೀಗ್‌ಗೆ 3 ವಾರಗಳ ಅವಕಾಶ ನೀಡಲಾಗಿದೆ. ಅಲ್ಲಿ ಏನೂ ಇಕ್ಕಟ್ಟು ಸಂಭವಿಸಲಿಕ್ಕಿಲ್ಲ ಎನ್ನುವುದು ಅಜರೆಂಕಾ ವಕೀಲರ ಭರವಸೆ.

ಟಾಪ್ ನ್ಯೂಸ್

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.