- Tuesday 10 Dec 2019
ವಿಜಯ್ ಹಜಾರೆ: ಇಂದು ಮುಂಬಯಿ- ದಿಲ್ಲಿ ಫೈನಲ್
Team Udayavani, Oct 20, 2018, 8:51 AM IST
ಬೆಂಗಳೂರು: ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಕೂಟ ಫೈನಲ್ ಹಂತಕ್ಕೆ ಬಂದು ತಲುಪಿದೆ. ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಬಲಿಷ್ಠ ಮುಂಬಯಿ ತಂಡವನ್ನು ದಿಲ್ಲಿ ತಂಡ ಎದುರಿಸಲಿದೆ.
3ನೇ ಸಲ ಪ್ರಶಸ್ತಿ ಗೆಲ್ಲುವುದೇ ಮುಂಬಯಿ?
ಮುಂಬಯಿ 11 ವರ್ಷದ ಬಳಿಕ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದೆ. 2006-07ರಲ್ಲಿ ಮುಂಬಯಿ ಫೈನಲ್ನಲ್ಲಿ ರಾಜಸ್ಥಾನ ತಂಡವನ್ನು ಸೋಲಿಸಿ 2ನೇ ಬಾರಿಗೆ ವಿಜಯ್ ಹಜಾರೆ ಟ್ರೋಫಿ ಗೆದ್ದಿತ್ತು. ಆ ಬಳಿಕ 2011-12ರಲ್ಲಿ ಮುಂಬಯಿ ಫೈನಲ್ ಪ್ರವೇಶಿಸಿತ್ತಾದರೂ ಬಂಗಾಲ್ ವಿರುದ್ಧ ಸೋಲುಂಡು ರನ್ನರ್ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. ಇದಕ್ಕೂ ಮೊದಲು 2003-04ರಲ್ಲಿ ಮುಂಬಯಿ ಬಂಗಾಲ್ ತಂಡವನ್ನು ಮಣಿಸಿ ಮೊದಲ ಸಲ ಮುಂಬಯಿ ಟ್ರೋಫಿ ಗೆದ್ದಿತ್ತು. ಈ ಸಲ ಪೃಥ್ವಿ ಶಾ, ಶ್ರೇಯಸ್ ಅಯ್ಯರ್, ಅಜಿಂಕ್ಯ ರಹಾನೆ ಒಳಗೊಂಡ ಮುಂಬಯಿ ತಂಡ ಬಲಿಷ್ಠವಾಗಿದ್ದು 3ನೇ ಸಲ ಟ್ರೋಫಿ ಗೆಲ್ಲುವ ಕನಸನ್ನು ಕಾಣುತ್ತಿದೆ.
ದಿಲ್ಲಿಗೆ 2ನೇ ಸಲ ಟ್ರೋಫಿ ನಿರೀಕ್ಷೆ
2012-13ರಲ್ಲಿ ದಿಲ್ಲಿ ಫೈನಲ್ನಲ್ಲಿ ಅಸ್ಸಾಂ ತಂಡವನ್ನು ಸೋಲಿಸಿ ಮೊದಲ ಸಲ ಟ್ರೋಫಿಗೆ ಮುತ್ತಿಕ್ಕಿತ್ತು. ಆ ಬಳಿಕ 2015-16ರಲ್ಲಿ ಪೈನಲ್ ಪ್ರವೇಶಿಸಿದ್ದ ದಿಲ್ಲಿ ತಂಡವು ಗುಜರಾತ್ ವಿರುದ್ಧ ಸೋತು ರನ್ನರ್ಅಪ್ ಪ್ರಶಸ್ತಿಗೆ ಸಮಾಧಾನ ಪಟ್ಟುಕೊಂಡಿತ್ತು. ಗೌತಮ್ ಗಂಭೀರ್ ನಾಯಕತ್ವ ಹೊಂದಿರುವ ದಿಲ್ಲಿ ತಂಡದಲ್ಲಿ ಉನ್ಮುಕ್¤ ಚಾಂದ್, ನಿತೀಶ್ ರಾಣಾ ಬ್ಯಾಟಿಂಗ್ ಭರವಸೆಯಾಗಿದ್ದಾರೆ.
ಈ ವಿಭಾಗದಿಂದ ಇನ್ನಷ್ಟು
-
ಮುಂಬೈ: ಗಾಯದ ಸಮಸ್ಯೆಯಿಂದಾಗಿ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಟಿ ಟ್ವೆಂಟಿ ಸರಣಿಯಿಂದ ಹೊರಬಿದ್ದಿರುವ ಶಿಖರ್ ಧವನ್ ಮುಂದಿನ ಏಕದಿನ ಸರಣಿಯನ್ನು ಆಡುವುದೂ...
-
ತಿರುವನಂತಪುರಂ: ಸಾಮರ್ಥ್ಯವೊಂದಿದ್ದರೆ ಸಾಕು, ಯಾವುದೇ ಮೈದಾನ ದಲ್ಲೂ ಸಿಕ್ಸರ್ ಬಾರಿಸಬಹುದು ಎಂದು ಆಲ್ರೌಂಡರ್ ಶಿವಂ ದುಬೆ ಹೇಳಿದ್ದಾರೆ. ವಿಂಡೀಸ್ ವಿರುದ್ದದ...
-
ತಿರುವನಂತಪುರಂ: ಭಾನುವಾರ ಭಾರತ-ವಿಂಡೀಸ್ ನಡುವೆ ನಡೆದ 2ನೇ ಟಿ20 ಪಂದ್ಯದ ವೇಳೆ, ರಿಷಭ್ ಪಂತ್ರನ್ನು ಅಣಕಿಸುತ್ತಿದ್ದ ಅಭಿಮಾನಿಗಳಿಗೆ ಸುಮ್ಮನಿರುವಂತೆ ನಾಯಕ...
-
ಸೌತ್ ಏಶ್ಯನ್ ಗೇಮ್ಸ್ : ಭಾರತ 159 ಚಿನ್ನ, 91 ಬೆಳ್ಳಿ, 44 ಕಂಚು ಕಾಠ್ಮಂಡು (ನೇಪಾಲ), ಡಿ. 9: ಸೌತ್ ಏಶ್ಯನ್ ಗೇಮ್ಸ್ ಕಬಡ್ಡಿ ಪಂದ್ಯಾವಳಿಯಲ್ಲಿ ಭಾರತ ಅವಳಿ ಚಿನ್ನವನ್ನು...
-
ಮಾಸ್ಕೊ (ರಶ್ಯ): ರಶ್ಯಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಮುಖಭಂಗ ಎದುರಾಗಿದೆ. ಮುಂದಿನ 4 ವರ್ಷಗಳ ಕಾಲ ಅದು ಯಾವುದೇ ಕ್ರೀಡಾಕೂಟಗಳಲ್ಲಿ ಭಾಗವಹಿಸುವಂತಿಲ್ಲ...
ಹೊಸ ಸೇರ್ಪಡೆ
-
ಉಜಿರೆ: ಡ್ರಗ್ಸ್, ಕುಡಿತ, ಅತ್ಯಾಚಾರ, ಕಳ್ಳತನ ಇವೆಲ್ಲ ದೋಷಗಳು ದೌರ್ಬಲ್ಯಗಳಾಗಿದ್ದು, ಮುಚ್ಚಿಟ್ಟಷ್ಟು ಜಟಿಲವಾದ ಅನಾಹುತಗಳಿಗೆ ಕಾರಣವಾಗುತ್ತವೆ. ಇವೆಲ್ಲವನ್ನು...
-
ಕಾಸರಗೋಡು: 2020ನೇ ಇಸವಿಯ ಡಿಸೆಂಬರ್ ತಿಂಗಳಲ್ಲಿ ಮನೆ ಯಿಲ್ಲದ ಎಲ್ಲರಿಗೂ ವಸತಿ ಭಾಗ್ಯ ಒದಗಲಿದೆ ಎಂದು ಸ್ಥಳೀಯಾಡಳಿತ ಸಚಿವ ಎ.ಸಿ. ಮೊಯ್ದಿನ್ ಭರವಸೆ ನೀಡಿದರು. ವೆಸ್ಟ್...
-
ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವವರಿಗೆ ಸಿಹಿ ಸುದ್ದಿಯೊಂದು ಲಭಿಸಿದೆ. 2020ರ ಜನವರಿಯಿಂದ ಮೆಟ್ರೋ ಸಂಚಾರ ಸಮಯದಲ್ಲಿ ವಿಸ್ತರಣೆಯಾಗಿದೆ. ಇನ್ನು ಮೆಟ್ರೋ...
-
ಯುನೈಟೆಡ್ ಕಿಂಗ್ ಡಮ್: 2015ರ ಭೂಕಂಪದಿಂದ ನೇಪಾಳ ಜನರ ಬದುಕು ತತ್ತರಿಸಿ ಹೋಗಿದ್ದು, ಸ್ಥಳೀಯ ಜನರ ಆರೋಗ್ಯ, ಶಿಕ್ಷಣ ಹಾಗೂ ಕುಟುಂಬಗಳಿಗೆ ನೆರವು(ದೇಣಿಗೆ ಸಂಗ್ರಹ)...
-
ಬೆಂಗಳೂರು: ಪುಣೆ-ಬೆಂಗಳೂರು ಷಟ್ಪಥ ರಸ್ತೆ ಕಾಮಗಾರಿಯನ್ನು ಅತಿ ಶೀಘ್ರದಲ್ಲಿ ಕೈಗೊಳ್ಳಲಿದ್ದೇವೆ ಮತ್ತು ಇದಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ಆರಂಭಿಸಲಾಗುವುದು...