ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌-2021: ತಮಿಳುನಾಡು-ಹಿಮಾಚಲ ನಡುವೆ ಫೈನಲ್‌


Team Udayavani, Dec 25, 2021, 5:00 AM IST

ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌-2021: ತಮಿಳುನಾಡು-ಹಿಮಾಚಲ ನಡುವೆ ಫೈನಲ್‌

ಜೈಪುರ: ತಮಿಳುನಾಡು ಮತ್ತು ಹಿಮಾಚಲ ಪ್ರದೇಶ ತಂಡಗಳು “ವಿಜಯ್‌ ಹಜಾರೆ ಟ್ರೋಫಿ’ ಏಕದಿನ ಫೈನಲ್‌ನಲ್ಲಿ ಸೆಣಸಲಿವೆ.

ಶುಕ್ರವಾರದ ಸೆಮಿಫೈನಲ್‌ ಮುಖಾಮುಖೀಯಲ್ಲಿ ಈ ತಂಡಗಳು ಕ್ರಮವಾಗಿ ಸೌರಾಷ್ಟ್ರ ಮತ್ತು ಸರ್ವೀಸಸ್‌ ತಂಡಗಳನ್ನು ಮಣಿಸಿದವು. ರವಿವಾರ ಪ್ರಶಸ್ತಿ ಸಮರ ಏರ್ಪಡಲಿದೆ.

ಇವುಗಳಲ್ಲಿ ತಮಿಳುನಾಡು-ಸೌರಾಷ್ಟ್ರ ನಡುವಿನ ಮುಖಾಮುಖೀ ಅತ್ಯಂತ ರೋಚಕವಾಗಿತ್ತು. ದೊಡ್ಡ ಮೊತ್ತದ ಈ ಪಂದ್ಯದಲ್ಲಿ ತಮಿಳುನಾಡು ಅಮೋಘ ಬ್ಯಾಟಿಂಗ್‌ ಪ್ರದರ್ಶಿಸಿ 2 ವಿಕೆಟ್‌ಗಳ ಗೆಲುವು ಸಾಧಿಸಿತು. ಇನ್ನೊಂದು ಪಂದ್ಯದಲ್ಲಿ ಹಿಮಾಚಲ ಪ್ರದೇಶ 77 ರನ್ನುಗಳಿಂದ ಸರ್ವೀಸಸ್‌ಗೆ ಸೋಲುಣಿಸಿತು.

ತಮಿಳುನಾಡು-ಸೌರಾಷ್ಟ್ರ ನಡುವಿನ ಪಂದ್ಯ 2 ಶತಕ, 4 ಅರ್ಧ ಶತಕಗಳಿಗೆ ಸಾಕ್ಷಿಯಾಯಿತು. ಸೌರಾಷ್ಟ್ರ 8 ವಿಕೆಟಿಗೆ 310 ರನ್‌ ಪೇರಿಸಿದರೆ, ದಿಟ್ಟ ರೀತಿಯಲ್ಲಿ ಬೆನ್ನಟ್ಟಿದ ತಮಿಳುನಾಡು 8 ವಿಕೆಟಿಗೆ 314 ರನ್‌ ಬಾರಿಸಿತು. ಸಾಯಿ ಕಿಶೋರ್‌ ಅಂತಿಮ ಎಸೆತದಲ್ಲಿ ಬೌಂಡರಿ ಬಾರಿಸಿ ತಂಡದ ಗೆಲುವನ್ನು ಸಾರಿದರು. ಈ ಎಸೆತದಲ್ಲಿ ತಮಿಳುನಾಡು ಜಯಕ್ಕೆ ಕೇವಲ ಒಂದು ರನ್‌ ಅಗತ್ಯವಿತ್ತು.

ಇದನ್ನೂ ಓದಿ:ಐಪಿಎಲ್‌ ಮಾಲಕರ ಜತೆ ಬಿಸಿಸಿಐ ಸಭೆ

ಸೌರಾಷ್ಟ್ರ ಪರ ಶೆಲ್ಡನ್‌ ಜಾಕ್ಸನ್‌ ಆಕ್ರಮಣಕಾರಿ ಆಟದ ಮೂಲಕ 134 ರನ್‌ ಸಿಡಿಸಿದರು (125 ಎಸೆತ, 11 ಬೌಂಡರಿ, 4 ಸಿಕ್ಸರ್‌). ಅರ್ಪಿತ್‌ ವಸವಾಡ 57, ವಿಶ್ವರಾಜ್‌ ಜಡೇಜ 52 ರನ್‌ ಕೊಡುಗೆ ಸಲ್ಲಿಸಿದರು.

ಚೇಸಿಂಗ್‌ ವೇಳೆ ತಮಿಳುನಾಡು 23 ರನ್‌ ಆಗುವಷ್ಟರಲ್ಲಿ 2 ವಿಕೆಟ್‌ ಕಳೆದುಕೊಂಡಿತು. ಆದರೆ ಆರಂಭಕಾರ ಬಾಬಾ ಅಪರಾಜಿತ್‌ 123 (124 ಎಸೆತ, 12 ಬೌಂಡರಿ, 3 ಸಿಕ್ಸರ್‌), ಬಾಬಾ ಇಂದ್ರಜಿತ್‌ (50), ವಾಷಿಂಗ್ಟನ್‌ ಸುಂದರ್‌ (70) ಅಮೋಘ ಹೋರಾಟ ಪ್ರದರ್ಶಿಸಿದರು. ಅಪಾಯಕಾರಿ ಶಾರೂಖ್‌ ಖಾನ್‌ ಕೇವಲ 17 ರನ್ನಿಗೆ ಔಟಾದಾಗ ಸೌರಾಷ್ಟ್ರಕ್ಕೆ ಮೇಲುಗೈ ಅವಕಾಶವಿತ್ತು.

ಹಿಮಾಚಲಕ್ಕೆ ಮೊದಲ ಫೈನಲ್‌
ಸರ್ವೀಸಸ್‌ ವಿರುದ್ಧ ಮೊದಲು ಬ್ಯಾಟಿಂಗ್‌ ನಡೆಸಿದ ಹಿಮಾಚಲ ಪ್ರದೇಶ 6 ವಿಕೆಟಿಗೆ 281 ರನ್‌ ಗಳಿಸಿತು. ಜವಾಬಿತ್ತ ಸರ್ವೀಸಸ್‌ 46.1 ಓವರ್‌ಗಳಲ್ಲಿ 204ಕ್ಕೆ ಆಲೌಟ್‌ ಆಯಿತು. ಇದು ಹಿಮಾಚಲಕ್ಕೆ ಮೊದಲ ಫೈನಲ್‌ ಆಗಿದೆ.
ಪ್ರಶಾಂತ್‌ ಚೋಪ್ರಾ 78, ನಾಯಕ ರಿಷಿ ಧವನ್‌ 84 ರನ್‌ ಬಾರಿಸಿ ಹಿಮಾಚಲದ ದೊಡ್ಡ ಮೊತ್ತಕ್ಕೆ ಕಾರಣರಾದರು. ಬೌಲಿಂಗ್‌ನಲ್ಲೂ ಮಿಂಚಿದ ಧವನ್‌ 27 ರನ್ನಿಗೆ 4 ವಿಕೆಟ್‌ ಕೆಡವಿ ಗೆಲುವಿನ ರೂವಾರಿ ಎನಿಸಿದರು.

ಟಾಪ್ ನ್ಯೂಸ್

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12–uv-fusion

Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.