ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌ ಕರ್ನಾಟಕಕ್ಕೆ ನಾಕೌಟ್‌ ಟಿಕೆಟ್‌


Team Udayavani, Feb 17, 2018, 6:50 AM IST

M.-Prasidh-Krishna.jpg

ಬೆಂಗಳೂರು: ಆರನೇ ಹಾಗೂ ಅಂತಿಮ ಲೀಗ್‌ ಪಂದ್ಯದಲ್ಲಿ ರೈಲ್ವೇಸ್‌ ತಂಡವನ್ನು 16 ರನ್ನುಗಳಿಂದ ಮಣಿಸುವ ಮೂಲಕ ಕರ್ನಾಟಕ “ವಿಜಯ್‌ ಹಜಾರೆ ಟ್ರೋಫಿ’ ಏಕದಿನ ಕ್ರಿಕೆಟ್‌ ಪಂದ್ಯಾವಳಿಯ ಕ್ವಾರ್ಟರ್‌ ಫೈನಲ್‌ ತಲಪುವಲ್ಲಿ ಯಶಸ್ವಿಯಾಗಿದೆ.

ಕರ್ನಾಟಕ ಒಟ್ಟು 6 ಪಂದ್ಯಗಳಿಂದ 18 ಅಂಕ ಸಂಪಾದಿಸಿ “ಎ’ ವಿಭಾಗದ ದ್ವಿತೀಯ ಸ್ಥಾನಿಯಾಗಿ ನಾಕೌಟ್‌ ಪ್ರವೇಶಿಸಿತು (4 ಗೆಲುವು, 1 ಸೋಲು, 1 ರದ್ದು). ಬರೋಡ 20 ಅಂಕಗಳೊಂದಿಗೆ ಅಗ್ರಸ್ಥಾನ ಅಲಂಕರಿಸಿತು (5 ಗೆಲುವು, 1 ಸೋಲು).

ಶುಕ್ರವಾರ ಆಲೂರಿನ ಕೆಎಸ್‌ಸಿಎ (2) ಮೈದಾನದಲ್ಲಿ ನಡೆದ ಈ ನಿರ್ಣಾಯಕ ಮುಖಾಮುಖೀಯಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಕರ್ನಾಟಕ 48.1 ಓವರ್‌ಗಳಲ್ಲಿ 257ಕ್ಕೆ ಆಲೌಟಾದರೆ, ತೀವ್ರ ಆರಂಭಿಕ ಕುಸಿತಕ್ಕೊಳಗಾಗಿ ಚೇತರಿಸಿದ ರೈಲ್ವೇಸ್‌ 47.1 ಓವರ್‌ಗಳಲ್ಲಿ 241 ರನ್‌ ಮಾಡಿ ಶರಣಾಯಿತು. 12 ಅಂಕಗಳೊಂದಿಗೆ ಲೀಗ್‌ನಲ್ಲಿ 5ನೇ ಸ್ಥಾನಿಯಾಯಿತು.

ಮಾಯಾಂಕ್‌ ಅಗರ್ವಾಲ್‌, ಪವನ್‌ ದೇಶಪಾಂಡೆ ಅವರ ಜವಾಬ್ದಾರಿಯುತ ಬ್ಯಾಟಿಂಗ್‌, ಪ್ರಸಿದ್ಧ್ ಕೃಷ್ಣ ಮತ್ತು ಪ್ರದೀಪ್‌ ಟಿ. ಅವರ ಘಾತಕ ಬೌಲಿಂಗ್‌ ಕರ್ನಾಟಕದ ಜಯದಲ್ಲಿ ಮುಖ್ಯ ಪಾತ್ರ ವಹಿಸಿತು. ಗಾಯಾಳು ವಿನಯ್‌ ಕುಮಾರ್‌ ಗೈರಲ್ಲಿ ಕರುಣ್‌ ನಾಯರ್‌ ರಾಜ್ಯ ತಂಡವನ್ನು ಮುನ್ನಡೆಸಿದ್ದರು.

ಶ್ರೇಷ್ಠ ಫಾರ್ಮ್ ಅನ್ನು ಅಂತಿಮ ಲೀಗ್‌ ಪಂದ್ಯಕ್ಕೂ ವಿಸ್ತರಿಸಿದ ಅಗರ್ವಾಲ್‌ 94 ಎಸೆತಗಳಿಂದ ಸರ್ವಾಧಿಕ 89 ರನ್‌ ಬಾರಿಸಿದರು. 94 ಎಸೆತಗಳ ಈ ಆಕ್ರಮಣಕಾರಿ ಬ್ಯಾಟಿಂಗ್‌ 15 ಬೌಂಡರಿಗಳಿಗೆ ಸಾಕ್ಷಿಯಾಯಿತು. ಕರುಣ್‌ ನಾಯರ್‌ (13), ಶರತ್‌ ಬಿ.ಆರ್‌. (6) ಮತ್ತು ಆರ್‌. ಸಮರ್ಥ್ (0) ಅವರನ್ನು 41 ರನ್‌ ಆಗುವಷ್ಟರಲ್ಲಿ ಕಳೆದುಕೊಂಡ ರಾಜ್ಯ ತಂಡಕ್ಕೆ ಅಗರ್ವಾಲ್‌-ದೇಶಪಾಂಡೆ ಆಸರೆಯಾದರು. ಇವರಿಂದ 4ನೇ ವಿಕೆಟಿಗೆ 132 ರನ್‌ ಒಟ್ಟುಗೂಡಿತು. ದೇಶಪಾಂಡೆ 67 ಎಸೆತ ಎದುರಿಸಿ 65 ರನ್‌ ಬಾರಿಸಿದರು (9 ಬೌಂಡರಿ, 1 ಸಿಕ್ಸರ್‌). ಕೆ. ಗೌತಮ್‌ 25, ಜೆ. ಸುಚಿತ್‌ 19, ಜೋಶಿ 14, ಮೋರೆ 10 ರನ್‌ ಮಾಡಿದರು.

54 ರನ್ನಿಗೆ ಬಿತ್ತು 6 ವಿಕೆಟ್‌
ಪ್ರದೀಪ್‌ ಟಿ., ಪ್ರಸಿದ್ಧ್ ಕೃಷ್ಣ ಮತ್ತು ರೋನಿತ್‌ ಮೋರೆ ಅವರ ಆರಂಭಿಕ ದಾಳಿಗೆ ತತ್ತರಿಸಿದ ರೈಲ್ವೇಸ್‌ 13 ಓವರ್‌ಗಳಲ್ಲಿ 54ಕ್ಕೆ 6 ವಿಕೆಟ್‌ ಉದುರಿಸಿಕೊಂಡು ಚಿಂತಾಜನಕ ಸ್ಥಿತಿ ತಲುಪಿತ್ತು. ಆರಂಭಿಕರಾದ ಸೌರಭ್‌ ವಕಾಸ್ಕರ್‌, ಅಸದ್‌ ಪಠಾಣ್‌, ಮಧ್ಯಮ ಕ್ರಮಾಂಕದ ಚಂದರ್‌ಪಾಲ್‌ ಸೈನಿ ಖಾತೆಯನ್ನೇ ತೆರೆದಿರಲಿಲ್ಲ. ಆಗ ಕರ್ನಾಟಕ ಸುಲಭದಲ್ಲಿ ಗೆಲ್ಲಬಹುದೆಂಬ ನಿರೀಕ್ಷೆ ಮೂಡಿತ್ತು. ಆದರೆ ರೈಲ್ವೇಸ್‌ನ ಕೆಳ ಸರದಿಯ ಆಟಗಾರರು ತಿರುಗಿ ಬಿದ್ದರು. ಅಂಕಿತ್‌ ಯಾದವ್‌ 51, ಅನುರೀತ್‌ ಸಿಂಗ್‌ 59, ಅವಿನಾಶ್‌ ಯಾದವ್‌ 40, ಎಸಿಪಿ ಮಿಶ್ರಾ 28 ರನ್‌ ಬಾರಿಸಿ ತಂಡವನ್ನು ಗೆಲುವಿನ ಬಾಗಿಲ ತನಕ ತಂದು ನಿಲ್ಲಿಸಿದರು. ಆದರೆ ಅದೃಷ್ಟ ಮಾತ್ರ ಇರಲಿಲ್ಲ.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ-48.1 ಓವರ್‌ಗಳಲ್ಲಿ 257 (ಅಗರ್ವಾಲ್‌ 89, ದೇಶಪಾಂಡೆ 65, ಕೆ. ಗೌತಮ್‌ 25, ಅನುರೀತ್‌ 36ಕ್ಕೆ 3, ಮಿಶ್ರಾ 45ಕ್ಕೆ 3, ಮನ್‌ಜಿàತ್‌ 44ಕ್ಕೆ 2). ರೈಲ್ವೇಸ್‌-47.1 ಓವರ್‌ಗಳಲ್ಲಿ 241 (ಅನುರೀತ್‌ 59, ಅಂಕಿತ್‌ 51, ಅವಿನಾಶ್‌ 40, ಪ್ರಸಿದ್ಧ್ ಕೃಷ್ಣ 35ಕ್ಕೆ 4, ಪ್ರದೀಪ್‌ 48ಕ್ಕೆ 4, ಮೋರೆ 49ಕ್ಕೆ 2).

ಟಾಪ್ ನ್ಯೂಸ್

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Virat Kohli Fan: ಕೊಹ್ಲಿ ಕಾಲಿಗೆರಗಿದ ಅಭಿಮಾನಿಗೆ ಭದ್ರತಾ ಸಿಬಂದಿಯಿಂದ ಹಲ್ಲೆ?

Virat Kohli Fan: ಕೊಹ್ಲಿ ಕಾಲಿಗೆರಗಿದ ಅಭಿಮಾನಿಗೆ ಭದ್ರತಾ ಸಿಬಂದಿಯಿಂದ ಹಲ್ಲೆ?

MS Dhoni Catch: 42ರ ಧೋನಿಯ ಡೈವಿಂಗ್‌ ಕ್ಯಾಚ್‌!

MS Dhoni Catch: 42ರ ಧೋನಿಯ ಡೈವಿಂಗ್‌ ಕ್ಯಾಚ್‌!

Ipl: ಪಂತ್‌ ಪಡೆಗೆ ರಾಜಸ್ಥಾನ್‌ ರಾಯಲ್ಸ್‌ ಚಾಲೆಂಜ್‌

Ipl: ಪಂತ್‌ ಪಡೆಗೆ ರಾಜಸ್ಥಾನ್‌ ರಾಯಲ್ಸ್‌ ಚಾಲೆಂಜ್‌

IPL 2024: ಧೋನಿ ಸೂಚನೆಯಂತೆ ಆಡಿದೆ: ರಿಝ್ವಿ

IPL 2024: ಧೋನಿ ಸೂಚನೆಯಂತೆ ಆಡಿದೆ: ರಿಝ್ವಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.