ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಬರೋಡವನ್ನು ಕೆಡವಿದ ಕರ್ನಾಟಕ
Team Udayavani, Feb 8, 2018, 6:25 AM IST
ಬೆಂಗಳೂರು: “ವಿಜಯ್ ಹಜಾರೆ ಟ್ರೋಫಿ’ ಏಕದಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರ್ನಾಟಕ ಗೆಲುವಿನ ಆರಂಭ ಮಾಡಿದೆ. ಬುಧವಾರದ “ಎ’ ವಿಭಾಗದ ಪಂದ್ಯದಲ್ಲಿ ವಿನಯ್ ಪಡೆ ವಿಜೆಡಿ ನಿಯಮದಂತೆ ಬರೋಡವನ್ನು 85 ರನ್ನುಗಳಿಂದ ಮಣಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಮಾಯಾಂಕ್ ಅಗರ್ವಾಲ್ ಅವರ ಶತಕ ಸಾಹಸದಿಂದ 9 ವಿಕೆಟಿಗೆ 312 ರನ್ ರಾಶಿ ಹಾಕಿದರೆ, ಮಳೆಯಿಂದ ಪಂದ್ಯ ಕೊನೆಗೊಳ್ಳುವಾಗ ಬರೋಡ 37ನೇ ಓವರ್ಗಳಲ್ಲಿ 8 ವಿಕೆಟಿಗೆ 180 ರನ್ ಗಳಿಸಿತ್ತು. ಈ ಅವಧಿಯಲ್ಲಿ ಬರೋಡ 266 ರನ್ ಗಳಿಸಬೇಕಿತ್ತು.
ದೊಡ್ಡ ಮೊತ್ತವನ್ನು ಬೆನ್ನಟ್ಟಲಿಳಿದ ಬರೋಡಕ್ಕೆ ಸ್ಪಿನ್ನರ್ಗಳಾದ ಕೆ. ಗೌತಮ್ (42ಕ್ಕೆ 4) ಮತ್ತು ಶ್ರೇಯಸ್ ಗೋಪಾಲ್ (30ಕ್ಕೆ 3) ಮಾರಕವಾಗಿ ಪರಿಣಮಿಸಿದರು. ಬರೋಡ ಪರ 48 ರನ್ ಮಾಡಿದ ಆರಂಭಕಾರ ಕೇದಾರ್ ದೇವಧರ್ ಅವರದೇ ಸರ್ವಾಧಿಕ ಗಳಿಕೆ.ಗುರುವಾರ ಪಂದ್ಯದಲ್ಲಿ ಕರ್ನಾಟಕ-ಅಸ್ಸಾಮ್ ಮುಖಾಮುಖೀಯಾಗಲಿವೆ.
ಅಗರ್ವಾಲ್ ಆಕರ್ಷಕ ಶತಕ
ಕರ್ನಾಟಕದ ಬೃಹತ್ ಮೊತ್ತಕ್ಕೆ ಕಾರಣವಾದದ್ದು ಆರಂಭಕಾರ ಮಾಯಾಂಕ್ ಅಗರ್ವಾಲ್ ಬಾರಿಸಿದ ಆಕರ್ಷಕ ಶತಕ. ಕೆ.ಎಲ್. ರಾಹುಲ್ (3) ಅವರನ್ನು ಬಹಳ ಬೇಗ ಕಳೆದುಕೊಂಡ ಕರ್ನಾಟಕಕ್ಕೆ ಅಗರ್ವಾಲ್ ಆಸರೆಯಾದರು. 30ನೇ ಓವರ್ ತನಕ ಬರೋಡ ದಾಳಿಯನ್ನು ತಡೆದು ನಿಂತ ಅವರು 109 ರನ್ನುಗಳ ಕೊಡುಗೆ ಸಲ್ಲಿಸಿದರು. 90 ಎಸೆತಗಳ ಈ ಮೋಹಕ ಬ್ಯಾಟಿಂಗ್ ವೇಳೆ 14 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಯಲ್ಪಟ್ಟಿತು. ಕರುಣ್ ನಾಯರ್ (19) ಅವರಿಂದ ಉತ್ತಮ ಬೆಂಬಲ ಪಡೆದ ಅಗರ್ವಾಲ್ 2ನೇ ವಿಕೆಟಿಗೆ 63 ರನ್ ಸೇರಿಸುವಲ್ಲಿ ಯಶಸ್ವಿಯಾದರು.
ಅಗರ್ವಾಲ್ ಹೊರತುಪಡಿಸಿದರೆ ಕರ್ನಾಟಕದ ಬ್ಯಾಟಿಂಗ್ ಸರದಿಯಲ್ಲಿ ಮಿಂಚಿದ ಆಟಗಾರನೆಂದರೆ ರವಿಕುಮಾರ್ ಸಮರ್ಥ್. 4ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದ ಸಮರ್ಥ್ 77 ರನ್ ಹೊಡೆದರು (69 ಎಸೆತ, 7 ಬೌಂಡರಿ, 1 ಸಿಕ್ಸರ್). ಅಗರ್ವಾಲ್-ಸಮರ್ಥ್ ಜತೆಯಾಟದಲ್ಲಿ 3ನೇ ವಿಕೆಟಿಗೆ 95 ರನ್ ಒಟ್ಟುಗೂಡಿತು. ಪವನ್ ದೇಶಪಾಂಡೆ (27) ಜತೆ ಮತ್ತೂಂದು ಉಪಯುಕ್ತ ಜತೆಯಾಟದಲ್ಲಿ ಪಾಲ್ಗೊಂಡ ಅಗರ್ವಾಲ್ 4ನೇ ವಿಕೆಟಿಗೆ 64 ರನ್ ಪೇರಿಸಿದರು. ಆದರೆ 40ನೇ ಓವರ್ ಆಸುಪಾಸಿನಲ್ಲಿ ಕರ್ನಾಟಕ ಕ್ಷಿಪ್ರ ಕುಸಿತವೊಂದನ್ನು ಕಂಡಿತು. 7 ರನ್ ಅಂತರದಲ್ಲಿ ದೇಶಪಾಂಡೆ, ಸಿ.ಎಂ. ಗೌತಮ್ (1) ಮತ್ತು ಸಮರ್ಥ್ ವಿಕೆಟ್ ಉರುಳಿತು.
ಈ ಹಂತದಲ್ಲಿ ಬೌಲಿಂಗ್ ಆಲ್ರೌಂಡರ್ಗಳಾದ ಶ್ರೇಯಸ್ ಗೋಪಾಲ್ (16), ಕೆ. ಗೌತಮ್ (18) ಮತ್ತು ಆರ್. ವಿನಯ್ ಕುಮಾರ್ (34) ಉತ್ತಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ತಂಡದ ಮೊತ್ತವನ್ನು ಮುನ್ನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ವಿನಯ್ ಬ್ಯಾಟಿಂಗ್ ಬಿರುಸಿನಿಂದ ಕೂಡಿತು (21 ಎಸೆತ, 34 ರನ್, 4 ಬೌಂಡರಿ, 1 ಸಿಕ್ಸರ್). ಬರೋಡ ಪರ ಎಡಗೈ ಮಧ್ಯಮ ವೇಗಿ ರಿಷಿ ಅರೋತೆ 4, ಅತೀತ್ ಸೇಥ್ 2 ವಿಕೆಟ್ ಉರುಳಿಸಿದರು).
ಸಂಕ್ಷಿಪ್ತ ಸ್ಕೋರ್: ಕರ್ನಾಟಕ-9 ವಿಕೆಟಿಗೆ 312 (ಅಗರ್ವಾಲ್ 109, ಸಮರ್ಥ್ 77, ವಿನಯ್ 34, ಅರೋತೆ 59ಕ್ಕೆ 4, ಶೇಥ್ 54ಕ್ಕೆ 2). ಬರೋಡ-37 ಓವರ್ಗಳಲ್ಲಿ 8 ವಿಕೆಟಿಗೆ 180 (ದೇವಧರ್ 48, ಕೃಣಾಲ್ ಪಾಂಡ್ಯ 39, ಸೇಥ್ 29, ಕೆ. ಗೌತಮ್ 42ಕ್ಕೆ 4, ಶ್ರೇಯಸ್ ಗೋಪಾಲ್ 30ಕ್ಕೆ 3).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ