ವಿಜಯ್ ಶಂಕರ್ ರನೌಟ್: ಅಂಬಾಟಿ ರಾಯುಡು ವಿರುದ್ಧ ಟ್ವೀಟಿಗರು ಗರಂ
Team Udayavani, Feb 5, 2019, 12:45 AM IST
ಹ್ಯಾಮಿಲ್ಟನ್: ಆತಿಥೇಯ ನ್ಯೂಜಿಲೆಂಡ್ ವಿರುದ್ಧದ 5ನೇ ಏಕದಿನ ಕ್ರಿಕೆಟ್ ಪಂದ್ಯದ ವೇಳೆ ಭಾರತ 18ಕ್ಕೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಹಂತದಲ್ಲಿ 5ನೇ ವಿಕೆಟ್ಗೆ ಅಂಬಾಟಿ ರಾಯುಡು (90 ರನ್) ಹಾಗೂ ವಿಜಯ್ ಶಂಕರ್ (45 ರನ್) 98 ರನ್ ಜತೆಯಾಟ ನಿರ್ವಹಿಸಿ ತಂಡಕ್ಕೆ ಚೇತರಿಕೆ ನೀಡಿದ್ದರು.
ಈ ವೇಳೆ ರನ್ ಕದಿಯುವ ಸಂದರ್ಭ ಆಟಗಾರರ ನಡುವಿನ ಹೊಂದಾಣಿಕೆ ಕೊರತೆಯಿಂದಾಗಿ ವಿಜಯ್ ಶಂಕರ್ ರನೌಟಾಗಿದ್ದರು. ಇದರಿಂದ ಅತ್ಯುತ್ತಮವಾಗಿ ಸಾಗುತ್ತಿದ್ದ ಜತೆಯಾಟ ವೊಂದು ಮುರಿದು ಬಿದ್ದಿತ್ತು. 32ನೇ ಓವರ್ನಲ್ಲಿ ಈ ಘಟನೆ ನಡೆದಿತ್ತು. ರನೌಟ್ಗೆ ಅಂಬಾಟಿ ರಾಯುಡು ಕಾರಣ ಎಂದು ಟ್ವೀಟರ್ನಲ್ಲಿ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಂಕರ್ ಉತ್ತಮ ಲಯದಲ್ಲಿದ್ದರು. ಅವರು ಔಟಾಗಿರುವುದಕ್ಕೆ ರಾಯುಡು ಮಾಡಿದ ತಪ್ಪೇ ಕಾರಣ ಎಂದು ಹೆಚ್ಚಿನವರು ಸಿಡಿಸಿಡಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ