ವಿರಾಟ್‌ ಕೊಹ್ಲಿ ಮತ್ತೆ ನಂಬರ್‌ 1


Team Udayavani, Dec 5, 2019, 12:46 AM IST

VK

ದುಬಾೖ: ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಮತ್ತೆ ನಂಬರ್‌ ವನ್‌ ಟೆಸ್ಟ್‌ ಬ್ಯಾಟ್ಸ್‌ ಮನ್‌ ಆಗಿ ಮೂಡಿಬಂದಿದ್ದಾರೆ. ಬುಧವಾರ ಪ್ರಕಟ ಗೊಂಡ ನೂತನ ಐಸಿಸಿ ರ್‍ಯಾಂಕಿಂಗ್‌ ಯಾದಿಯಲ್ಲಿ ಕೊಹ್ಲಿ ಆಸ್ಟ್ರೇಲಿಯದ ಸ್ಟೀವನ್‌ ಸ್ಮಿತ್‌ ಅವರನ್ನು ಹಿಂದಿಕ್ಕಿ ಮರಳಿ ಉನ್ನತ ಬ್ಯಾಟ್ಸ್‌ಮನ್‌ ಗೌರವ ಸಂಪಾದಿಸಿದರು.

ಬಾಂಗ್ಲಾ ವಿರುದ್ಧ ಕೋಲ್ಕತಾದಲ್ಲಿ ಆಡಲಾದ ಡೇ-ನೈಟ್‌ ಟೆಸ್ಟ್‌ ಪಂದ್ಯದಲ್ಲಿ 136 ರನ್‌ ಬಾರಿಸುವ ಮೂಲಕ ಕೊಹ್ಲಿ ತಮ್ಮ ರೇಟಿಂಗ್‌ ಅಂಕವನ್ನು 928ಕ್ಕೆ ಏರಿಸಿಕೊಂಡರು. ಇನ್ನೊಂದೆಡೆ ಅಡಿಲೇಡ್‌ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯದಲ್ಲಿ 36 ರನ್‌ ಮಾಡಿದ ಸ್ಮಿತ್‌ 923 ಅಂಕಗಳಿಗೆ ಕುಸಿದರು. ಈ ಪಂದ್ಯಕ್ಕೂ ಮುನ್ನ ಅವರು 931 ಅಂಕ ಹೊಂದಿದ್ದರು.
ಟಾಪ್‌-10 ಬ್ಯಾಟಿಂಗ್‌ ಯಾದಿಯಲ್ಲಿ ರುವ ಭಾರತದ ಮತ್ತಿಬ್ಬರು ಆಟಗಾರ ರೆಂದರೆ ಚೇತೇಶ್ವರ್‌ ಪೂಜಾರ ಮತ್ತು ರಹಾನೆ. ಇವರಲ್ಲಿ ಪೂಜಾರ 4ನೇ ಸ್ಥಾನ ಉಳಿಸಿಕೊಂಡರೆ, ವಾರ್ನರ್‌ ಅಬ್ಬರದಿಂದಾಗಿ ರಹಾನೆ ಒಂದು ಸ್ಥಾನ ಕುಸಿತ ಕಂಡಿದ್ದಾರೆ (6).

ಡೇವಿಡ್‌ ವಾರ್ನರ್‌, ಲಬುಶೇನ್‌ ಪ್ರಗತಿ
ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ಭರ್ಜರಿ ಪ್ರಗತಿ ಕಂಡವರೆಂದರೆ ಆಸ್ಟ್ರೇಲಿಯದ ವಾರ್ನರ್‌ ಮತ್ತು ಮಾರ್ನಸ್‌ ಲಬುಶೇನ್‌. ಅಡಿಲೇಡ್‌ ಟೆಸ್ಟ್‌ನಲ್ಲಿ ಅಮೋಘ ತ್ರಿಶತಕ ಬಾರಿಸಿದ ವಾರ್ನರ್‌ 12 ಸ್ಥಾನ ನೆಗೆದು 5ನೇ ಸ್ಥಾನಕ್ಕೆ ಬಂದಿದ್ದಾರೆ. ಹಾಗೆಯೇ ಪಾಕಿಸ್ಥಾನ ವಿರುದ್ಧದ ಸರಣಿಯಲ್ಲಿ ಸತತ 2 ಶತಕ ಬಾರಿಸಿದ ಮಾರ್ನಸ್‌ ಲಬುಶೇನ್‌ ಮೊದಲ ಸಲ ಟಾಪ್‌-10 ಯಾದಿಯನ್ನು ಪ್ರವೇಶಿಸಿದರು (8). ಈ ವರ್ಷದ ಆರಂಭದಲ್ಲಿ ಲಬುಶೇನ್‌ 110ರಷ್ಟು ಕೆಳಸ್ಥಾನದಲ್ಲಿದ್ದರು.

ನ್ಯೂಜಿಲ್ಯಾಂಡ್‌ ಎದುರಿನ ದ್ವಿತೀಯಟೆಸ್ಟ್‌ ಪಂದ್ಯದಲ್ಲಿ ದ್ವಿಶತಕ ದಾಖಲಿಸುವ ಮೂಲಕ ಇಂಗ್ಲೆಂಡಿನ ನಾಯಕ ಜೋ ರೂಟ್‌ ಮರಳಿ ಅಗ್ರ ಹತ್ತರಲ್ಲಿ ಕಾಣಿಸಿಕೊಂಡರು.

ಕಮಿನ್ಸ್‌ ಅಗ್ರ ಬೌಲರ್‌
ಬೌಲಿಂಗ್‌ ವಿಭಾಗದ ನಂಬರ್‌ ವನ್‌ ಪಟ್ಟವನ್ನು ಪ್ಯಾಟ್‌ ಕಮಿನ್ಸ್‌ ಉಳಿಸಿಕೊಂಡಿದ್ದಾರೆ. ಈ ಆಸೀಸ್‌ ವೇಗಿ ಖಾತೆಯಲ್ಲಿ ಭರ್ತಿ 900 ಅಂಕ ಇದೆ.

ಟಾಪ್‌-10 ಯಾದಿಯಲ್ಲಿರುವ ಭಾರತದ ಮೂವರು ಬೌಲರ್‌ಗಳೆಂದರೆ ಜಸ್‌ಪ್ರೀತ್‌ ಬುಮ್ರಾ (5), ಆರ್‌. ಅಶ್ವಿ‌ನ್‌ (9), ಮೊಹಮ್ಮದ್‌ ಶಮಿ (10). ಜಾಸನ್‌ ಹೋಲ್ಡರ್‌ ಜೀವನಶ್ರೇಷ್ಠ 830 ಅಂಕಗಳೊಂದಿಗೆ 3ನೇ ಸ್ಥಾನಿಯಾಗಿದ್ದಾರೆ. ಜತೆಗೆ ನಂ.1 ಆಲ್‌ರೌಂಡರ್‌ ಸ್ಥಾನವನ್ನೂ ಗಟ್ಟಿ ಗೊಳಿಸಿದ್ದಾರೆ. ಆಲ್‌ರೌಂಡರ್‌ಗಳ ಅಗ್ರ ಐದರ ಯಾದಿಯಲ್ಲಿರುವ ಭಾರತೀಯರೆಂದರೆ ರವೀಂದ್ರ ಜಡೇಜ (2) ಮತ್ತು ಆರ್‌. ಅಶ್ವಿ‌ನ್‌ (5).

ಮೂರರಲ್ಲೂ ನಂ.1 ಆಗುವರೇ ಕೊಹ್ಲಿ?
ಕೊಹ್ಲಿ ಈಗ ಏಕದಿನ ಹಾಗೂ ಟೆಸ್ಟ್‌ನಲ್ಲಿ ನಂ.1 ಆಗಿದ್ದಾರೆ. ಟಿ20ಯಲ್ಲೂ ಅಗ್ರಸ್ಥಾನಕ್ಕೇರುವು ದೊಂದು ಬಾಕಿ ಇದೆ. ಏಕಕಾಲದಲ್ಲಿ ಕ್ರಿಕೆಟಿನ ಮೂರು ಮಾದರಿಗಳಲ್ಲಿ ಈ ಎತ್ತರಕ್ಕೇರಿದರೆ ಅದು ಕ್ರಿಕೆಟಿನ ವಿಶಿಷ್ಟ ದಾಖಲೆ ಎನಿಸಲಿದೆ.

ಟಾಪ್ ನ್ಯೂಸ್

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

1-ewqe

Olympics ಅರ್ಹತೆ ತಪ್ಪುವ ಭೀತಿಯಲ್ಲಿ ದೀಪಕ್‌, ಸುಜೀತ್‌

1-wqewqewq

Doping: ಶಾಲು ಚೌಧರಿ ದೋಷಮುಕ್ತ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.