ಲಾರ್ಡ್ಸ್ ಪಿಚ್ ನಿನ್ನ ಮನೆಯ ಹಿತ್ತಲಲ್ಲ: ಆ್ಯಂಡರ್ಸನ್ ವಿರುದ್ಧ ರೇಗಿದ ವಿರಾಟ್
Team Udayavani, Aug 16, 2021, 11:07 AM IST
ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಅಂತಿಮ ದಿನಕ್ಕೆ ಕಾಲಿಟ್ಟಿದೆ. ನಾಲ್ಕನೇ ದಿನದಾಟದಲ್ಲಿ ಪೂಜಾರ- ರಹಾನೆ ಬ್ಯಾಟಿಂಗ್ ಹೋರಾಟದ ನಡುವೆಯೂ ಟೀಂ ಇಂಡಿಯಾದ ಸ್ಥಿತಿ ಆತಂಕದಲ್ಲಿದೆ.
ಲಾರ್ಡ್ಸ್ ಟೆಸ್ಟ್ ಪಂದ್ಯ ಕೆಲವು ಸನ್ನಿವೇಶಗಳಿಗೆ ಕಾರಣವಾಗಿದೆ. ಇಂಗ್ಲೆಂಡ್ ಬ್ಯಾಟಿಂಗ್ ವೇಳೆ ಜಸ್ಪ್ರೀತ್ ಬುಮ್ರಾರ ಸತತ ಬೌನ್ಸರ್ ಗಳಿಂದ ಆ್ಯಂಡರ್ಸನ್ ಕೆರಳಿದ್ದರು. ಇದಾದ ಬಳಿಕ ಭಾರತದ ದ್ವಿತೀಯ ಇನ್ನಿಂಗ್ಸ್ ಬ್ಯಾಟಿಂಗ್ ವೇಳೆ ವಿರಾಟ್ ಕೊಹ್ಲಿ ಮತ್ತು ಜೇಮ್ಸ್ ಆ್ಯಂಡರ್ಸನ್ ನಡುವೆ ಮಾತಿನ ಚಕಮಕಿ ನಡೆದಿದೆ.
ಇದನ್ನೂ ಓದಿ:121 ಮಕ್ಕಳ ಮನೆ ಅಂಗಳದಲ್ಲೇ ಅನುರಣಿಸಿದ ರಾಷ್ಟ್ರಗೀತೆ
ಆ್ಯಂಡರ್ಸನ್ ಬೌಲಿಂಗ್ ಮಾಡುವ ವೇಳೆ ನಾನ್ ಸ್ಟ್ರೈಕ್ ನಲ್ಲಿದ್ದ ಕೊಹ್ಲಿ ಇಂಗ್ಲೆಂಡ್ ನ ಹಿರಿಯ ಬೌಲರ್ ನ ಮೇಳೆ ಕಿಡಿಕಾರಿದ್ದಾರೆ. “ನೀವು ನನ್ನ ರೇಗಿಸುತ್ತಿದ್ದೀರಾ? ಇದು ನಿಮ್ಮ ಮನೆಯ ಹಿತ್ತಲಲ್ಲ. ಇದೇನಾ ನಿನ್ನ ಹಿರಿತನ” ಎಂದು ರೇಗಿದ್ದಾರೆ.
what the hell wrong between kohli and anderson…
This could be reason of lapse of concentration for virat which eventually cast in big way…#virat #kohli #anderson #ENGvsIND #ENGvIND #jimmy #RohitSharma #pujara #LordsTest #markwood #bcci #rahane #cricket pic.twitter.com/L8kziQojNq— Dileep Kumar Sharma (@Dileep1607) August 15, 2021
ಕೊಹ್ಲಿ ವರ್ತನೆಗೆ ಪರ- ವಿರೋಧ ವ್ಯಕ್ತವಾಗಿದೆ. ಮಾತಿನ ಭರದಲ್ಲಿ ವಿರಾಟ್ ಕೊಹ್ಲಿ ನಿಂದನಾತ್ಮಕ ಪದ ಪ್ರಯೋಗ ಮಾಡಿದ್ದು, ಐಸಿಸಿ ಇದನ್ನು ಗಮನಿಸಬೇಕು ಎಂದು ಹಲವು ಅಭಿಪ್ರಾಯ ಪಟ್ಟಿದ್ದಾರೆ.
ದ್ವಿತೀಯ ಇನ್ನಿಂಗ್ಸ್ನಲ್ಲಿ ಅಗ್ರ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಭಾರತ ಲಾರ್ಡ್ಸ್ ಟೆಸ್ಟ್ ಪಂದ್ಯದ 4ನೇ ದಿನ ತೀವ್ರ ಅಪಾಯಕ್ಕೆ ಸಿಲುಕಿದೆ. 6 ವಿಕೆಟಿಗೆ 181 ರನ್ ಗಳಿಸಿ ದಿನದಾಟ ಮುಂದುವರಿಸುತ್ತಿದ್ದು, ಕೇವಲ 154 ರನ್ನುಗಳ ಮುನ್ನಡೆಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ
IPL 2024; ಏಳು ಪಂದ್ಯ ಸೋತರೂ ಇನ್ನೂ ಆರ್ ಸಿಬಿಗೆ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ