ಮತ್ತೆ ಕಾಲೆಳೆದ ವೀರೇಂದ್ರ ಸೆಹವಾಗ್
Team Udayavani, Apr 15, 2022, 6:45 AM IST
ಮುಂಬಯಿ: ವೀರೇಂದ್ರ ಸೆಹವಾಗ್ ಮತ್ತೆ ಮುಂಬೈ ಇಂಡಿಯನ್ಸ್ ತಂಡದ ಕಾಲೆಳೆದಿದ್ದಾರೆ.
ಒಂದು ವಾರದ ಹಿಂದೆ “ಬಾಯಿಗೆ ಬಂದ ವಡಾಪಾವ್ ಜಾರಿತು’ ಎಂದು ಟ್ವೀಟ್ ಮಾಡಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದ ವೀರೂ, ಮುಂಬೈ ತಂಡದ ಸತತ 5ನೇ ಸೋಲಿನ ಬಳಿಕ ಮತ್ತೂಂದು ಬೌನ್ಸರ್ ಎಸೆದಿದ್ದಾರೆ.
“ಕ್ರಿಕೆಟ್ ಆಭಿಮಾನಿಗಳೇ, ನೀವು ನಿಮ್ಮ ನೆಚ್ಚಿನ ಮುಂಬೈ ತಂಡವನ್ನು ಬೆಂಬಲಿಸುವ ಬದಲು ಬೇರೊಂದು ತಂಡವನ್ನು ಬೆಂಬಲಿಸುವುದು ಉತ್ತಮ’ ಎಂದು ಕಿಚಾಯಿಸಿದ್ದಾರೆ. ಇದಕ್ಕೆ ಸಾಕಷ್ಟು ಟೀಕೆ, ಆಕ್ರೋಶ ವ್ಯಕ್ತವಾಗಿದೆ.