ಆರು ದಿನ ಕೋಮಾದಲ್ಲಿ ಮಲಗಿದ್ದ ವಿಶ್ವನಾಥ ಚಿನ್ನ ಎತ್ತಿದ!


Team Udayavani, Sep 20, 2019, 6:15 AM IST

Big-s

ಕುಂದಾಪುರ: ಸಾಧನೆ ಅತ್ಯದ್ಭುತ ಸಂಗತಿ. ಅದರ ಹಿಂದೆ ನೋವಿನ ಮತ್ತು ಸ್ಫೂರ್ತಿಯ ಕತೆಗಳಿರುತ್ತವೆ. ಅಂಥವುಗಳಲ್ಲಿ ಒಂದು ಕುಂದಾಪುರದ ವಿಶ್ವನಾಥ ಭಾಸ್ಕರ ಗಾಣಿಗ ಅವರದು.

ಕೆನಡದಲ್ಲಿ ನಡೆದ ಪವರ್‌ ಲಿಫ್ಟಿಂಗ್‌ ಕಾಮನ್‌ವೆಲ್ತ್‌ ಚಾಂಪಿಯನ್‌ ಶಿಪ್‌ನಲ್ಲಿ ಬುಧವಾರವಷ್ಟೇ ಅವರು ಹೊಸ ದಾಖಲೆ ನಿರ್ಮಿಸಿ ಬಂಗಾರ ಗೆದ್ದಿದ್ದಾರೆ. ಇದೇ ವಿಶ್ವನಾಥ ಗಾಣಿಗರು ಕಳೆದ ವರ್ಷದ ಮಾರ್ಚ್‌ ತಿಂಗಳಲ್ಲಿ ಆರು ದಿನಗಳ ಕಾಲ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಕೋಮಾ ಸ್ಥಿತಿಯಲ್ಲಿ ನಿಶ್ಚಲನಾಗಿ ಮಲಗಿದ್ದರು.

ಬೂದಿಯಿಂದ ಮೇಲೆದ್ದ ಫೀನಿಕ್ಸ್‌ ಹಕ್ಕಿಯಂಥ ವಿಶ್ವನಾಥ ಗಾಣಿಗರು ಕುಂದಾಪುರ ತಾಲೂಕಿನ ದೇವಲ್ಕುಂದ ಗ್ರಾಮದ ಬಾಳಿಕೆರೆಯವರು.

ಸತತ ಪರಿಶ್ರಮದಿಂದ ಚೇತರಿಸಿಕೊಂಡವರೀಗ ಪವರ್‌ ಲಿಫ್ಟಿಂಗ್‌ ಕಾಮನ್‌ವೆಲ್ತ್‌ ಚಾಂಪಿಯನ್‌ ಶಿಪ್‌ನಲ್ಲಿ ಡೆಡ್‌ಲಿಫ್ಟ್‌ನಲ್ಲಿ ಬರೋಬ್ಬರಿ 327.5 ಕೆಜಿ ಭಾರ ಎತ್ತಿ ಕೂಟದ ಹೊಸ ದಾಖಲೆ ನಿರ್ಮಿಸಿ  ದ್ದಾರೆ. 2011ರಲ್ಲಿ ಇಂಗ್ಲೆಂಡಿನ ಸ್ಟೀಫ‌ನ್‌ ಮ್ಯಾನ್ಯುವೆಲ್‌ ನಿರ್ಮಿಸಿದ್ದ 315 ಕೆಜಿ ಎತ್ತು ಗಡೆಯ ದಾಖಲೆ ಮುರಿದುಹೋಗಿದೆ. ಸ್ನ್ಯಾಚ್‌ನಲ್ಲಿ 295.1 ಕೆಜಿ, ಬೆಂಚ್‌ಪ್ರಸ್‌ನಲ್ಲಿ 180 ಕೆಜಿ ಭಾರವೆತ್ತಿ 2 ಬೆಳ್ಳಿ ಪದಕವನ್ನೂ ಗೆದ್ದಿದ್ದಾರೆ. ಒಟ್ಟಾರೆ 802.5 ಕೆಜಿ ಎತ್ತಿದ ಸಾಧನೆಯೊಂದಿಗೆ ಸಮಗ್ರ ಚಿನ್ನದ ಪದಕವೂ ಅವರ ಕೊರಳ ಹಾರವಾಗಿದೆ.

ಮಾರ್ಚ್‌ ಮೂರರ ದುರ್ಘ‌ಟನೆ
ಅದು 2018ರ ಮಾ.3. ಗಾಣಿಗರು ಬೆಂಗಳೂರಿ ನಿಂದ ಊರಿಗೆ ಬರು ತ್ತಿದ್ದರು. ಅವರಿದ್ದ ವೋಲ್ವೊ ಬಸ್‌ಗೆ ಮಂಗಳೂರಿನ ಹೊರವಲಯದ ಬೈಕಂಪಾಡಿ ಬಳಿ ಕ್ರೇನ್‌ ಢಿಕ್ಕಿ ಹೊಡೆದಿತ್ತು. ಕಿಟಿಕಿ ಬದಿಯಲ್ಲಿ ಕುಳಿತಿದ್ದ ಗಾಣಿಗರು ಗಂಭೀರವಾಗಿ ಗಾಯಗೊಂಡಿದ್ದರು. ಕಿವಿಯ ತಮಟೆ ಒಡೆದು ಚೂರಾಗಿತ್ತು. ಸತತ 6 ದಿನ ಅವರು ನಿಶ್ಚಲನಾಗಿ ಕೋಮಾದಲ್ಲಿ ಮಲಗಿದ್ದರು.

ಅವರು ಹೊರಜಗತ್ತಿಗೆ ಸ್ಪಂದಿಸಿದ್ದು 13 ದಿನದ ಬಳಿಕ. ಕಳೆದ ಮೇ ತಿಂಗಳಿನಲ್ಲಿ ಕಿವಿಯ ನೋವು ಮತ್ತೆ ಉಲ್ಬಣಿಸಿ ಶಸ್ತ್ರಚಿಕಿತ್ಸೆ ನಡೆದಿತ್ತು.

ಕೈತಪ್ಪಿತ್ತು ಏಶ್ಯನ್‌
ಚಾಂಪಿಯನ್‌ಶಿಪ್‌
ಗಂಭೀರ ಗಾಯಗೊಂಡಿದ್ದ ವಿಶ್ವನಾಥ ಗಾಣಿಗರ ಅಂದಿನ ಸ್ಥಿತಿಗತಿಯನ್ನು ಕಂಡವರು ಅವರ ಕ್ರೀಡಾಬಾಳುವೆ ಮುಗಿಯಿತು ಎಂದೇ ಭಾವಿಸಿದ್ದರು. ನೂರಾರು ಕೆಜಿ ಭಾರ ಎತ್ತುವ ಕ್ರೀಡೆ ಪವರ್‌ಲಿಫ್ಟಿಂಗ್‌ ಕಠಿನ ಪರಿಶ್ರಮ, ತೀವ್ರ ಅಭ್ಯಾಸ, ದೇಹದಂಡನೆಯಿಂದ ಮಾತ್ರ ಯಶಸ್ಸು ಕೊಡುತ್ತದೆ. ಆದರೆ ಆ ಕ್ರೀಡೆಯಂತೆ ವಿಶ್ವನಾಥ್‌ ಕೂಡ ಕಠಿನ, ದೃಢ ಮನಸ್ಕರು. ತನ್ನ ಗುರಿಯಿಂದ ಇಂಚು ಕೂಡ ಹಿಂದೆ ಸರಿಯಲೇ ಇಲ್ಲ. ಗಾಯದಿಂದಾಗಿ ಕಳೆದ ವರ್ಷ ಏಶ್ಯನ್‌ ಪವರ್‌ ಲಿಫ್ಟಿಂಗ್‌ ಚಾಂಪಿಯನ್‌ ಶಿಪ್‌ ಪಂದ್ಯಾವಳಿಯನ್ನು ಕಳೆದು ಕೊಂಡಿದ್ದರೂ ಈಗ ಮತ್ತೂಂದು ಮೈಲಿಗಲ್ಲು ನೆಟ್ಟಿದ್ದಾರೆ.

ಬಡತನದಲ್ಲಿ ಅರಳಿದ ಪ್ರತಿಭೆ
ಬೆಂಗಳೂರಿನ ಜಿ.ಟಿ. ನೆಕ್ಸಸ್‌ ಸಾಫ್ಟ್‌ವೇರ್‌ ಕಂಪೆನಿಯ ಉದ್ಯೋಗಿ ವಿಶ್ವನಾಥ ಗಾಣಿಗ ಕುಟುಂಬದ ಆಧಾರಸ್ತಂಭವೂ ಹೌದು. ತಂದೆ ಭಾಸ್ಕರ ಗಾಣಿಗ ಅಸೌಖ್ಯದಿಂದ ಮನೆ ಯಲ್ಲಿಯೇ ಇದ್ದಾರೆ. ವಿಶ್ವನಾಥ್‌ ಬಡತನದಿಂದಲೇ ಮೇಲೆ ಬಂದವರು.

ಕಣ್ಣೀರಾದ ತಾಯಿ
ವಿಶ್ವನಾಥ ಅವರ ತಾಯಿ ಪದ್ಮಾವತಿ ಅವರನ್ನು “ಉದಯವಾಣಿ’ ಮಾತ ನಾಡಿಸಿದಾಗ, ಮಗ ವಿಶ್ವ ಮಟ್ಟದಲ್ಲಿ ಸಾಧನೆಗೈದ ಹೆಮ್ಮೆಯಿದೆ. ತುಂಬಾ ಖುಷಿಯಾಗಿದೆ. ಇಷ್ಟು ವರ್ಷಗಳ ಅವನ ಪರಿಶ್ರಮದಿಂದಲೇ ಈ ಸಾಧನೆ ಸಾಧ್ಯವಾಗಿದೆ. ಚಿಕ್ಕವನಿರುವಾಗ ಗೇರು ಬೀಜ ಹೆಕ್ಕಿ ತುಂಬಾ ಕಷ್ಟಪಟ್ಟು ಶಾಲೆ ಓದಿದ್ದಾನೆ. ಕೆನಡಕ್ಕೆ ಹೋಗಲು ಕಷ್ಟಪಟ್ಟು ಹಣ ಹೊಂದಿಸಿದ್ದೆವು. ಅಪಘಾತದಲ್ಲಿ ಗಾಯಗೊಂಡಿದ್ದಾಗ ಅವನ ಸ್ಥಿತಿಯನ್ನು ನೋಡಲಾಗುತ್ತಿರಲಿಲ್ಲ. ತುಂಬಾ ನೋವು ಅನುಭವಿಸಿದ್ದಾನೆ. ಆ ನೋವನ್ನೆಲ್ಲ ಈ ಸಾಧನೆ ಮರೆಮಾಚಿದೆ ಎನ್ನುತ್ತಾ ಕಣ್ಣೀರಾದರು.

- ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

Apex

CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

11-kushtagi

Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1-asaas

Mumbai Indians; ಹಾರ್ದಿಕ್‌ ಪಾಂಡ್ಯ, ಬೌಷರ್‌ ಮೌನ!

1-wewewqe

‘Bangaluru’: ಅನ್‌ಬಾಕ್ಸ್‌  ಸಮಾರಂಭದಲ್ಲಿ ಆರ್‌ಸಿಬಿ ವನಿತೆಯರು

1-saddas-aa-4

IPL:ರಾಹುಲ್‌ ಫಿಟ್‌; ಕೀಪಿಂಗ್‌ ಡೌಟ್‌

1-saddas-aa-3

IPL; ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿದ ಕೊಹ್ಲಿ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Apex

CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

11-kushtagi

Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.