ಜರ್ಮನಿಯಲ್ಲಿ ಸಿಕ್ಕಿಹಾಕಿಕೊಂಡ ಚೆಸ್ಪಟು ವಿಶ್ವನಾಥನ್ ಆನಂದ್
Team Udayavani, Mar 17, 2020, 2:33 AM IST
ಚೆನ್ನೈ: ಅಂತಾ ರಾಷ್ಟ್ರೀಯ ಚೆಸ್ ಕೂಟಕ್ಕೆಂದು ತೆರಳಿದ್ದ 5 ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಕೊರೊನಾ ಹಿನ್ನೆಲೆ ಯಲ್ಲಿ ಜರ್ಮನಿಯಲ್ಲೇ ಸಿಕ್ಕಿಹಾಕಿ ಕೊಂಡಿದ್ದಾರೆ. “ಯಾವುದೇ ಆತಂಕ ಬೇಡ, ಅವರು ಆರಾಮ ವಾಗಿದ್ದಾರೆ’ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
“ಸರಕಾರ ಪ್ರಯಾಣ ನಿರ್ಬಂಧ ಗಳನ್ನು ಹೇರಿರುವುದರಿಂದ ವಿಶಿಗೆ ಸದ್ಯ ಭಾರತಕ್ಕೆ ಮರಳಲು ಸಾಧ್ಯವಾಗುವುದಿಲ್ಲ, ಶೀಘ್ರವಾಗಿ ಕುಟುಂಬದ ಜತೆ ಸೇರಿಕೊಳ್ಳಲಿದ್ದಾರೆ. ಬುಂಡೆಸ್ಲಿಗಾ ಚೆಸ್ ಲೀಗ್ನಲ್ಲಿ ಪಾಲ್ಗೊಂಡ ಬಳಿಕ ಅವರು ಭಾರತಕ್ಕೆ ವಾಪಸ್ ಆಗಬೇಕಿತ್ತು. ಆದರೆ ಕೊರೊನಾ ವೈರಸ್ ಭೀತಿಯಿಂದಾಗಿ ಎಲ್ಲೆಡೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ವಿದೇಶಕ್ಕೆ ಹೋಗುವುದು, ಬರುವುದನ್ನು ನಿಷೇಧಿಸಲಾಗಿದೆ. ಇದರಿಂದಾಗಿ ಜರ್ಮನಿಯ ಫ್ರಾಂಕ್ಫರ್ಟ್ನಲ್ಲಿ ಆನಂದ್ ಉಳಿದುಕೊಂಡಿದ್ದಾರೆ’ ಎಂದು ಪತ್ನಿ ಅರುಣಾ ತಿಳಿಸಿದ್ದಾರೆ.
ಆನಂದ್ ಕಮೆಂಟ್ರಿ!
ರಶ್ಯದಲ್ಲಿ ನಡೆಯಲಿರುವ ಕ್ಯಾಂಡಿಡೇಟ್ಸ್ ಚೆಸ್ ಕೂಟದಲ್ಲಿ ವಿಶ್ವನಾಥನ್ ಆನಂದ್ ಕಾಮೆಂಟ್ರಿ ಮಾಡಲಿದ್ದಾರೆ ಎಂಬುದು ಇನ್ನೊಂದು ಸುದ್ದಿ.
ಈ ಬಗ್ಗೆ ಮಾಹಿತಿ ನೀಡಿದ ಅರುಣಾ, “ಇದೇ ಮೊದಲ ಬಾರಿಗೆ ವೃತ್ತಿ ಜೀವನದ ಇನ್ನೊಂದು ಮಜಲನ್ನು ಏರುತ್ತಿರುವ ವಿಶ್ವನಾಥನ್ ಆನಂದ್, ಸದ್ಯ ತಾವಿರುವ ಜಾಗದಿಂದಲೇ ಮಂಗಳವಾರದಿಂದ ವೆಬ್ಸೈಟ್ಗೆ
ಕಾಮೆಂಟ್ರಿ ಹೇಳಲಿದ್ದಾರೆ. ಇದರಿಂದ ಅವರ ಏಕಾಂಗಿತನ ಸ್ವಲ್ಪ ಕಡಿಮೆಯಾಗಬಹುದು, ಜತೆಗೆ ಸಮಯ ಸಿಕ್ಕಾಗಲೆಲ್ಲ ಮಗನ ಜತೆಗೆ ಚಾಟ್, ವೀಡಿಯೋ ಕಾಲ್ ಮೂಲಕ ಮಾತನಾಡುತ್ತಿದ್ದಾರೆ. ವಿಶಿಗೆ ಕೆಲವು ದಿನಗಳು ಉಳಿದುಕೊಳ್ಳುವಂತೆ ಸೂಚನೆ ಇದೆ. ಸದ್ಯ ಅವರು ಏಕಾಂಗಿಯಾಗಿದ್ದಾರೆ. ಕೊರೊನಾ ಹರಡುವ ಭೀತಿಯಿಂದ ಜನಸಂಪರ್ಕ ಮಾಡುತ್ತಿಲ್ಲ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್