ಒಬ್ಬ ವೇಗಿಯಾಗಿ ನಾನಿದನ್ನು ವಿರೋಧಿಸುತ್ತೇನೆ: ಐಸಿಸಿ ವಿರುದ್ಧ ಕಿಡಿಕಾರಿದ ವಾಖರ್ ಯೂನಿಸ್
Team Udayavani, Apr 28, 2020, 1:29 PM IST
ಇಸ್ಲಮಾಬಾದ್: ಪಾಕಿಸ್ಥಾನದ ಮಾಜಿ ವೇಗಿ ವಾಖರ್ ಯೂನಿಸ್ ಅವರು ಐಸಿಸಿ ( ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ)ಯ ನಡೆಯೊಂದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ನಡೆಸ ಸಭೆಯಲ್ಲಿ ಐಸಿಸಿ, ಇನ್ನು ಮುಂದೆ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ಚೆಂಡಿಗೆ ಎಂಜಲು ಅಥವಾ ಬೆವರು ತಾಗಿಸಬಾರದು ಎಂಬ ನಿರ್ಧಾರ ಮಾಡಿದೆ. ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿರುವ ವಾಖರ್ ಯೂನಿಸ್, ಒಬ್ಬ ವೇಗಿಯಾಗಿ ನನಗೆ ಇದಕ್ಕೆ ವಿರೋಧವಿದೆ ಎಂದಿದ್ದಾರೆ.
ಬೌಲರ್ ಗಳು ಚೆಂಡಿನ ಹೊಳಪಿಗಾಗಿ ಎಂಜಲು ಅಥವಾ ಬೆವರಿನಿಂದ ಚೆಂಡನ್ನು ಒರೆಸುತ್ತಾರೆ. ಆದರೆ ಎಂಜಲು ಅಥವಾ ಬೆವರಿನ ಬದಲು ಬೇರೆ ಕೃತಕ ವಸ್ತು ಬಳಸಬೇಕು ಎಂದು ಐಸಿಸಿ ಸಭೆಯಲ್ಲಿ ನಿರ್ಧರಿಸಲಾಗಿತ್ತು
ಈ ಬಗ್ಗೆ ಮಾತನಾಡಿರುವ ಯೂನಿಸ್, ಚೆಂಡಿಗೆ ಎಂಜಲು ಸವರುವುದು ಸ್ವಾಭಾವಿಕ ಪ್ರಕ್ರಿಯೆ. ಪಂದ್ಯದಲ್ಲಿ ಚೆಂಡು ಹಲವರ ಕೈ ಸೇರುತ್ತದೆ. ನಿಮಗೆ ಓಡುವಾಗ ಬೆವರುವುದು ಸಹಜ. ಸ್ವಾಭಾವಿಕವಾಗಿಯೇ ಅದು ಚೆಂಡಿಗೆ ತಾಗುತ್ತದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ