ಚೆಂಡು ವಿರೂಪ ಮಾಡಲು ಸೂಚಿಸಿದ್ದು ವಾರ್ನರ್: ಬ್ಯಾನ್ಕ್ರಾಫ್ಟ್
Team Udayavani, Dec 27, 2018, 6:50 AM IST
ಸಿಡ್ನಿ: ಚೆಂಡು ವಿರೂಪ ಪ್ರಕರಣದ ಹಿಂದಿರುವ ಮಾಸ್ಟರ್ ಮೈಂಡ್ ತಂಡದ ಉಪನಾಯಕನಾಗಿದ್ದ ಡೇವಿಡ್ ವಾರ್ನರ್ ಎಂದು ಪ್ರಕರಣದ ಕೇಂದ್ರ ಬಿಂದು ಬ್ಯಾನ್ಕ್ರಾಫ್ಟ್ ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯದ ವೇಳೆಗಿನ ಸನ್ನಿವೇಶವನ್ನು ನೆನಪಿಸಿಕೊಂಡ ಅವರು,”ಚೆಂಡನ್ನು ವಿರೂಪಗೊಳಿಸಲು ನನಗೆ ಉಪನಾಯಕ ವಾರ್ನರ್ ಹೇಳಿದ್ದರು. ಅವರ ಅಣತಿಯಂತೆ ಮುಂದುವರಿದೆ. ಆ ಕ್ಷಣದಲ್ಲಿ ಅವರ ಸೂಚನೆಯನ್ನು ಪಾಲಿಸುವುದಷ್ಟೇ ಕೆಲಸವಾಗಿತ್ತು. ಇದು ಇಷ್ಟು ದೊಡ್ಡ ತಪ್ಪಿಗೆ ದಾರಿಯಾಗುತ್ತದೆ ಎಂದು ನನಗೆ ತಿಳಿದಿರಲಿಲ್ಲ ಎಂದು ಬ್ಯಾನ್ಕ್ರಾಫ್ಟ್ ತಿಳಿಸಿದ್ದಾರೆ