ಧೋನಿಗೆ 30 ಲಕ್ಷ ರೂ. ಗಳಿಸಿದ್ದರೆ ಸಾಕಿತ್ತಂತೆ; ಧೋನಿ ರಹಸ್ಯ ಬಿಚ್ಚಿಟ್ಟ ಜಾಫರ್
Team Udayavani, Mar 31, 2020, 11:18 AM IST
ಮುಂಬೈ: ಇವತ್ತು ಎಂ.ಎಸ್.ಧೋನಿ ವಿಶ್ವ ಕ್ರಿಕೆಟ್ ಕಂಡ ಸರ್ವಶ್ರೇಷ್ಠ ನಾಯಕರಲ್ಲೊಬ್ಬ. ಅವರು ಕ್ರಿಕೆಟ್ ಮೈದಾನಕ್ಕಿಳಿಯದೇ ಹೆಚ್ಚುಕಡಿಮೆ ಒಂದುವರ್ಷ ಕಳೆದಿದೆ. ಆದರೂ ಜಗತ್ತಿನ ಜನಪ್ರಿಯ ಕ್ರಿಕೆಟಿಗ. ಅಂತಹ ವ್ಯಕ್ತಿ ಮೊದಲು ಅಂತಾ ರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದಾಗ ಮಹತ್ವಾಕಾಂಕ್ಷೆಗಳೇ ಇರಲಿಲ್ಲವಂತೆ! ಹೆಚ್ಚು ಅಂದರೆ ಒಂದು 30 ಲಕ್ಷ ರೂ. ಗಳಿಸಿದರೆ ಸಾಕು, ರಾಂಚಿಯಲ್ಲಿ ನೆಮ್ಮದಿಯಿಂದ ಬದುಕಿಬಿಡಬಹುದು ಎಂದು ಅಂದುಕೊಂಡಿದ್ದರಂತೆ. ಇದನ್ನು ಬಹಿರಂಗಪಡಿಸಿದ್ದು ದೇಶೀಯ ಕ್ರಿಕೆಟ್ನ ಖ್ಯಾತ ಬ್ಯಾಟ್ಸ್ಮನ್ ವಾಸಿಂ ಜಾಫರ್.
2004ರಲ್ಲಿ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದ ಮೇಲೆ ಏನಾಯಿತು ಎನ್ನುವುದು ಎಲ್ಲರಿಗೂ ಗೊತ್ತು. ಅವರು ಸಕ್ರಿಯರಾಗಿ ಆಡುವವರೆಗೆ ಅವರೇ ಜಾಹೀರಾತು ಜಗತ್ತಿನ ದೊರೆಯಾಗಿದ್ದರು. ಜಗತ್ತಿನ ಶ್ರೀಮಂತ ಕ್ರಿಕೆಟಿಗರಾಗಿದ್ದರು. ಶ್ರೀಮಂತ ಕ್ರೀಡಾಪಟುಗಳ ಸಾಲಿನಲ್ಲೂ ಸ್ಥಾನ ಪಡೆದಿದ್ದರು.
ವಾಸಿಂ ಜಾಫರ್ ಇತ್ತೀಚೆಗಷ್ಟೇ ಎಲ್ಲ ರೀತಿಯ ಕ್ರಿಕೆಟ್ಗೆ ನಿವೃತ್ತಿ ಹೇಳಿದ್ದಾರೆ. ಟ್ವೀಟರ್ನಲ್ಲಿ ಅಭಿಮಾನಿಗಳೊಂದಿಗೆ ಅವರು ಸಂವಾದ ನಡೆಸಿದ ವೇಳೆ, ಹಲವು ಪ್ರಶ್ನೆಗಳಿಗೆ ಉತ್ತರಿಸುವಾಗ ಈ ರೀತಿಯ ಅಚ್ಚರಿಯ ಮಾಹಿತಿಯನ್ನು ನೀಡಿದರು.
ಧೋನಿಗಿಂತ ರೋಹಿತ್ ಬುದ್ಧಿವಂತ
ಟ್ವೀಟರ್ ಸಂಭಾಷಣೆಯಲ್ಲಿ ಜಾಫರ್ ನೀಡಿದ ಇನ್ನೊಂದು ಮಹತ್ವದ ಉತ್ತರವೆಂದರೆ, ಜಗತ್ತಿನ ಅತಿ ಬುದ್ಧಿವಂತ ಕ್ರಿಕೆಟಿಗ ಯಾರು ಎನ್ನುವುದು. ಸಾಮಾನ್ಯವಾಗಿ ಜನ ಈ ಪ್ರಶ್ನೆ ಬಂದರೆ, ಎಂ.ಎಸ್.ಧೋನಿ ಹೇಳಿ ಬಿಡುತ್ತಾರೆ. ಜಾಫರ್ ಪ್ರಕಾರ, ರೋಹಿತ್ ಶರ್ಮ ಅತ್ಯಂತ ಬುದ್ಧಿವಂತರಂತೆ. ರೋಹಿತ್ ನಾಯಕರಾಗಿದ್ದಾಗ ಅದನ್ನು ತೋರಿಸಿ ಕೊಂಡಿದ್ದಾರೆ ಕೂಡ ಎನ್ನುವುದನ್ನು ನಾವಿಲ್ಲಿ ಗಮನಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಿಂಬಾಬ್ವೆಗೆ ಆಗಮಿಸಿದ ಟೀಮ್ ಇಂಡಿಯಾ: ಆಗಸ್ಟ್ 18ರಿಂದ 3 ಪಂದ್ಯಗಳ ಏಕದಿನ ಸರಣಿ
ನಾನು ನಿಜಕ್ಕೂ ಅದೃಷ್ಟವಂತೆ,ಈ ಬಾರಿ ಹ್ಯಾಟ್ರಿಕ್ ತಪ್ಪಲಿಲ್ಲ: ಅಲಾನಾ ಕಿಂಗ್
ಟೆಸ್ಟ್ ಸರಣಿ: ದಕ್ಷಿಣ ಆಫ್ರಿಕಾ ತಂಡದ ಬಲಗೈ ಪೇಸ್ ಬೌಲರ್ ಡ್ನೂನ್ ಒಲಿವರ್ ಔಟ್
ಕೆನಡಿಯನ್ ಮಾಸ್ಟರ್: ಹ್ಯೂಬರ್ಟ್ ಹುರ್ಕಾಝ್- ಪಾಬ್ಲೊ ಕರೆನೊ ಬುಸ್ಟ ಮುಖಾಮುಖಿ
ಖ್ಯಾತ ಟೆನಿಸಿಗ ನೊವಾಕ್ ಜೊಕೋವಿಕ್: ಮತ್ತೆ ಲಸಿಕೆ ವಿವಾದ
MUST WATCH
ಹೊಸ ಸೇರ್ಪಡೆ
1947ರ ಸ್ವಾತಂತ್ರ್ಯೋತ್ಸವದಲ್ಲಿ ಆರೋಹಣಗೊಂಡ ರಾಷ್ಟ್ರಧ್ವಜ ಕಲ್ಮಾಡಿ ಮನೆಯಲ್ಲಿ ಸುರಕ್ಷಿತ
ಸ್ವಾತಂತ್ರ್ಯ ದಿನಾಚರಣೆ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಚಾಮರಾಜಪೇಟೆ ಮೈದಾನ
ಮೂಲ್ಕಿ-ಮೂಡುಬಿದಿರೆ 30 ಕಿ.ಮೀ. ತಿರಂಗಾ ಯಾತ್ರೆ ಸಂಪನ್ನ : 100 ಮೀ. ಉದ್ದದ ಧ್ವಜ ಬಳಕೆ
ಅಮರಸುಳ್ಯ ದಂಗೆ ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮ
ಕೊಡಗು, ದ.ಕ. ಗಡಿಯಲ್ಲಿ ಮತ್ತೆ ಭೂ ಕಂಪನ ಅನುಭವ