ನಿರ್ಣಾಯಕ ಟೆಸ್ಟ್ ಪಂದ್ಯ :ಕೊಹ್ಲಿ ವಾಟರ್ಬಾಯ್
Team Udayavani, Mar 26, 2017, 3:51 PM IST
ಧರ್ಮಶಾಲಾದ ನಿರ್ಣಾಯಕ ಟೆಸ್ಟ್ ಪಂದ್ಯದಿಂದ ಹೊರಗುಳಿದರೂ ವಿರಾಟ್ ಕೊಹ್ಲಿ ಅಂಗಳದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು.
ಆಗ ಪಂದ್ಯದ 6ನೇ ಓವರ್ ಜಾರಿಯಲ್ಲಿತ್ತು. ಬೌಲರ್ ಉಮೇಶ್ ಯಾದವ್. ಚೆಂಡಿನ ಆಕಾರದಲ್ಲೇನೋ ದೋಷ ಕಂಡುಬಂದುದರಿಂದ ಅಂಪಾಯರ್ಗಳು ಚೆಂಡನ್ನು ಪರಿಶೀಲಿಸುತ್ತಿದ್ದರು. ಹೀಗಾಗಿ ಸ್ವಲ್ಪ ಹೊತ್ತು ಪಂದ್ಯ ಸ್ಥಗಿತಗೊಂಡಿತು. ಈ ಅವಕಾಶಕ್ಕಾಗಿಯೇ ಕಾದು ಕುಳಿತಂತಿದ್ದ ಕೊಹ್ಲಿ ಅಂಗಳಕ್ಕೆ ಓಡಿ ಬಂದರು. ಆಗ ಅವರ ಕೈಯಲ್ಲಿ ಪಾನೀಯದ ಬಾಟಲ್ ಇತ್ತು!
ಅಂಗಳಕ್ಕಿಳಿಯುವ ಅವಕಾಶ ಲಭಿಸಿದ್ದರಿಂದಲೋ ಏನೋ, ಕೊಹ್ಲಿ ಮೊಗದಲ್ಲಿ ಸಂತಸ ಲಾಸ್ಯವಾಡುತ್ತಿತ್ತು. ಲಭಿಸಿದ ಒಂದೆರಡು ನಿಮಿಷಗಳ ಅವಕಾಶದಲ್ಲೇ ಅವರು ತಂಡದ ಆಟಗಾರರಿಗೆ ಕೆಲವು ಟಿಪ್ಸ್ ನೀಡಿದರು. ಮುಖ್ಯವಾಗಿ ಕರುಣ್ ನಾಯರ್ ಅವರತ್ತ ತೆರಳಿ ಸಮಾಧಾನಪಡಿಸಿದರು. ಇದಕ್ಕೊಂದು ವಿಶೇಷ ಕಾರಣವೂ ಇತ್ತು. ಪಂದ್ಯದ ಮೊದಲ ಎಸೆತದಲ್ಲೇ ವಾರ್ನರ್ ಅವರ ಕ್ಯಾಚನ್ನು 3ನೇ ಸ್ಲಿಪ್ನಲ್ಲಿದ್ದ ನಾಯರ್ ಕೈಚೆಲ್ಲಿದ್ದರು! ಅಂದಹಾಗೆ, 5.4 ಓವರ್ ಬಳಿಕ ಚೆಂಡನ್ನು ಬದಲಾಯಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?
T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ
CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ
IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ
T20 World Cup; ರೋಹಿತ್, ವಿರಾಟ್ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?
MUST WATCH
ಹೊಸ ಸೇರ್ಪಡೆ
Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ
Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ
Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ
Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ