ನಮ್ಮದು ಈಗಲೂ ಯುವ ಪಡೆ: ಬ್ರಾವೊ


Team Udayavani, Mar 28, 2019, 6:07 AM IST

Dwayne-Bravo,-Chennai-Super-Kings,

ಹೊಸದಿಲ್ಲಿ: “ನಮ್ಮದು ಈಗಲೂ ಯುವ ಪಡೆ. ನಾವೇನೂ 60 ವರ್ಷದವರಲ್ಲ. 32-35ರ ವಯಸ್ಸು ನಮ್ಮದು. ಅಪಾರ ಅನುಭವ ಹೊಂದಿದ್ದೇವೆ. ನೀವು ಏನನ್ನು ಬೇಕಾದರೂ ಸೋಲಿಸಬಹುದು, ಆದರೆ ಅನುಭವವನ್ನಲ್ಲ’ ಎಂದು ಚೆನ್ನೈ ಸೂಪರ್‌ ಕಿಂಗ್‌ ತಂಡದ ಆಲ್‌ರೌಂಡರ್‌ ಡ್ವೇನ್‌ ಬ್ರಾವೊ ಟೀಕಾಕಾರರಿಗೆ ತಿವಿದಿದ್ದಾರೆ.

ಚೆನ್ನೈ ತಂಡ ಬರೀ ಹಿರಿಯರಿಂದಲೇ ಕೂಡಿದೆ, ಟಿ20ಗೆ ಬೇಕಿರುವುದು ಯುವಕರೇ ಹೊರತು ವಯಸ್ಸಾದವರಲ್ಲ ಎಂಬ ಟೀಕೆಗೆ ಬ್ರಾವೊ ಈ ಪ್ರತಿಕ್ರಿಯೆ ನೀಡಿದ್ದಾರೆ.

“ಒತ್ತಡದ ಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ಕಲೆಗಾರಿಕೆ ಹೊಂದಿರುವುದರಿಂದಲೇ ಚೆನ್ನೈತಂಡವಿಂದು ಬಹಳ ಎತ್ತರದಲ್ಲಿದೆ. ವಿಶ್ವದ ಶ್ರೇಷ್ಠ ನಾಯಕನನ್ನು ನಮ್ಮ ತಂಡ ಹೊಂದಿದೆ. ನೀವೂ ಯಾವುದೇ ಕ್ರೀಡೆಯಲ್ಲಿ ಅನುಭವವನ್ನು ಸೋಲಿಸಲಾರಿರಿ. ನಮಗೆ ನಮ್ಮ ದೌರ್ಬಲ್ಯಗಳು ಗೊತ್ತು. ನಮ್ಮದು ಫಾಸ್ಟೆಸ್ಟ್‌ ಟೀಮ್‌ ಅಲ್ಲದೇ ಇರಬಹುದು, ಆದರೆ ಸ್ಮಾರ್ಟೆಸ್ಟ್‌ ಟೀಮ್‌ ಆಗಿದೆ ಎಂದು ಧೋನಿ ಹೇಳುವುದರಲ್ಲಿ ಅರ್ಥವಿದೆ’ ಎಂದು ಕೆರಿಬಿಯನ್‌ ಆಲ್‌ರೌಂಡರ್‌ ಹೇಳಿದರು.

ಯಾವುದೇ ಮೀಟಿಂಗ್‌ ಇಲ್ಲ
“ಪಂದ್ಯಕ್ಕೂ ಮುನ್ನ ನಾವು ಯಾವುದೇ ನಿರ್ದಿಷ್ಟ ಯೋಜನೆ ಹಾಕಿಕೊಳ್ಳುವುದಿಲ್ಲ. ಟೀಮ್‌ ಮೀಟಿಂಗ್‌ ಕೂಡ ನಡೆಸುವುದಿಲ್ಲ. ಪಂದ್ಯದ ಸನ್ನಿವೇಶಕ್ಕೆ ತಕ್ಕಂತೆ ಹೊಂದಿ ಕೊಳ್ಳುವ ಕಲೆ ಅಥವಾ ಜಾಣ್ಮೆ ನಮ್ಮದಾಗಿದೆ. ಧೋನಿ ಸಹಿತ ಎಲ್ಲರೂ ಒಂದೊಂದು ಸ್ಟೈಲ್‌ ಹೊಂದಿದ್ದೇವೆ’ ಎಂದು ಬ್ರಾವೊ ಡೆಲ್ಲಿ ವಿರುದ್ಧದ ಗೆಲುವಿನ ಬಳಿಕ ಪ್ರತಿಕ್ರಿಯಿಸಿದರು. ರಿಷಬ್‌ ಪಂತ್‌ ಮತ್ತು ಕಾಲಿನ್‌ ಇನ್‌ಗಾÅಮ್‌ ಅವರನ್ನು ಬ್ರಾವೊ ಒಂದೇ ಓವರಿನಲ್ಲಿ ಔಟ್‌ ಮಾಡುವ ಮೂಲಕ ತಂಡಕ್ಕೆ ಮೇಲುಗೈ ಒದಗಿಸಿದ್ದರು.

“ಸ್ಟೈಟರ್‌ ಲೈನ್‌ ಮೂಲಕ ನೇರವಾಗಿ ಸ್ಟಂಪ್‌ ಮೇಲೆ ದಾಳಿ ನಡೆಸುವಂತೆ ಧೋನಿ ನನಗೆ ಸೂಚಿಸಿದ್ದರು. ಸಾಮಾನ್ಯವಾಗಿ ನಾನು ನಿಧಾನ ಗತಿಯ ಎಸೆತಗಳಿಗೆ ಹೆಚ್ಚಿನ ಆದ್ಯತೆ ಕೊಡುತ್ತೇನೆ. ಆದರೆ ಇಲ್ಲಿ ಹೆಚ್ಚು ಶ್ರಮ ಹಾಗೂ ಶಕ್ತಿ ವಹಿಸಿ ಬೌಲಿಂಗ್‌ ನಡೆಸಿದ್ದೇನೆ’ ಎಂದು ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿರುವ ಬ್ರಾವೊ ಹೇಳಿದರು.

ಸಂಕ್ಷಿಪ್ತ ಸ್ಕೋರ್‌: ಡೆಲ್ಲಿ ಕ್ಯಾಪಿಟಲ್ಸ್‌-6 ವಿಕೆಟಿಗೆ 147 (ಧವನ್‌ 51, ಪಂತ್‌ 25, ಶಾ 24, ಬ್ರಾವೊ 33ಕ್ಕೆ 3). ಚೆನ್ನೈ ಸೂಪರ್‌ ಕಿಂಗ್ಸ್‌-19.4 ಓವರ್‌ಗಳಲ್ಲಿ 4 ವಿಕೆಟಿಗೆ 150 (ವಾಟ್ಸನ್‌ 44, ಧೋನಿ ಔಟಾಗದೆ 32, ರೈನಾ 30, ಜಾಧವ್‌ 27, ಮಿಶ್ರಾ 35ಕ್ಕೆ 2). ಪಂದ್ಯಶ್ರೇಷ್ಠ: ಶೇನ್‌ ವಾಟ್ಸನ್‌.

ಎಕ್ಸ್‌ಟ್ರಾ ಇನ್ನಿಂಗ್ಸ್‌
– ಈ ಪಂದ್ಯದಲ್ಲಿ ಎರಡೂ ತಂಡಗಳು 4 ಮಂದಿ ವಿದೇಶಿ ಕ್ರಿಕೆಟಿಗರ ಕೋಟಾವನ್ನು ಬಳಸಿಕೊಳ್ಳಲಿಲ್ಲ. ಇದು ಐಪಿಎಲ್‌ನಲ್ಲಿ ಕಂಡುಬಂದ ಕೇವಲ 2ನೇ ನಿದರ್ಶನ. 2017ರ ಡೆಲ್ಲಿ-ಆರ್‌ಸಿಬಿ ಪಂದ್ಯದಲ್ಲೂ ತಲಾ ಮೂವರು ವಿದೇಶಿ ಆಟಗಾರರನ್ನು ಆಡಿಸಲಾಗಿತ್ತು.
– ಈ ಪಂದ್ಯದಲ್ಲಿ ಒಟ್ಟು 6 ವಿದೇಶಿ ಆಟಗಾರರಿಗಷ್ಟೇ ಅವಕಾಶ ಸಿಕ್ಕಿತು. ಇದು ಅತೀ ಕಡಿಮೆ ವಿದೇಶಿ ಆಟಗಾರರು ಆಡಿದ 3ನೇ ಐಪಿಎಲ್‌ ಪಂದ್ಯ. 2011ರ ಚೆನ್ನೈ-ಕೋಲ್ಕತಾ (ಚೆನ್ನೈ-4, ಕೆಕೆಆರ್‌-2) ಹಾಗೂ 2017ರ ಡೆಲ್ಲಿ-ಆರ್‌ಸಿಬಿ (ಡೆಲ್ಲಿ-3, ಆರ್‌ಸಿಬಿ-3) ಈ ಸಾಲಿನ ಉಳಿದೆರಡು ಪಂದ್ಯಗಳಾಗಿವೆ.
– ಅಮಿತ್‌ ಮಿಶ್ರಾ ಒಂದೇ ತಾಣದಲ್ಲಿ 50 ವಿಕೆಟ್‌ ಉರುಳಿಸಿದ 2ನೇ ಬೌಲರ್‌ ಎನಿಸಿದರು (ಫಿರೋಜ್‌ ಶಾ ಕೋಟ್ಲಾದಲ್ಲಿ 51 ವಿಕೆಟ್‌). ಲಸಿತ ಮಾಲಿಂಗ ಮುಂಬಯಿಯ ವಾಂಖೇಡೆ ಸ್ಟೇಡಿಯಂನಲ್ಲಿ 58 ವಿಕೆಟ್‌ ಉರುಳಿಸಿದ್ದಾರೆ.
– ಇಮ್ರಾನ್‌ ತಾಹಿರ್‌ ಟಿ20ಯಲ್ಲಿ 46 ವಿಕೆಟ್‌ಗಳನ್ನು ಎಲ್‌ಬಿ ರೂಪದಲ್ಲಿ ಉರುಳಿಸಿ ಸುನೀಲ್‌ ನಾರಾಯಣ್‌ ಜತೆ ಜಂಟಿ 2ನೇ ಸ್ಥಾನದಲ್ಲಿ ಕಾಣಿಸಿಕೊಂಡರು. ದಾಖಲೆ ರಶೀದ್‌ ಖಾನ್‌ ಹೆಸರಲ್ಲಿದೆ (51 ವಿಕೆಟ್‌). ಶಾಹಿದ್‌ ಅಫ್ರಿದಿಗೆ 3ನೇ ಸ್ಥಾನ (45 ವಿಕೆಟ್‌).
– ಶೇನ್‌ ವಾಟ್ಸನ್‌ ಟಿ20ಯಲ್ಲಿ 34 ಸಲ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದು ಶಾಹಿದ್‌ ಅಫ್ರಿದಿಯೊಂದಿಗೆ ಜಂಟಿ 2ನೇ ಸ್ಥಾನ ಅಲಂಕರಿಸಿದರು. ಕ್ರಿಸ್‌ ಗೇಲ್‌ ಮೊದಲ ಸ್ಥಾನದಲ್ಲಿದ್ದಾರೆ (58).
– ಇಶಾಂತ್‌ ಶರ್ಮ ವೃತ್ತಿಪರ ಕ್ರಿಕೆಟ್‌ನಲ್ಲಿ 700 ವಿಕೆಟ್‌ ಪೂರ್ತಿಗೊಳಿಸಿದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 426, ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ 178 ಹಾಗೂ ಟಿ20 ಕ್ರಿಕೆಟ್‌ನಲ್ಲಿ 96 ವಿಕೆಟ್‌ಗಳು ಸೇರಿವೆ.
– ಸುರೇಶ್‌ ರೈನಾ 23 ರನ್‌ ಮಾಡಿದ ವೇಳೆ ವೃತ್ತಿಪರ ಕ್ರಿಕೆಟ್‌ನಲ್ಲಿ 23 ಸಾವಿರ ರನ್‌ ಪೂರ್ತಿಗೊಳಿಸಿದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 6,871, ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ 8,078 ಮತ್ತು ಟಿ20 ಕ್ರಿಕೆಟ್‌ನಲ್ಲಿ 8,058 ರನ್‌ ಒಳಗೊಂಡಿದೆ.
– ಹರ್ಭಜನ್‌ ಸಿಂಗ್‌ ಐಪಿಎಲ್‌ನಲ್ಲಿ ಅತೀ ಹೆಚ್ಚು ರನ್‌ ನೀಡಿದ ಬೌಲರ್‌ ಎನಿಸಿದರು (3,705). ಈ ಸಂದರ್ಭದಲ್ಲಿ ಅವರು ಪೀಯೂಷ್‌ ಚಾವ್ಲಾ ದಾಖಲೆ ಮುರಿದರು (3,696 ರನ್‌). ಹರ್ಭಜನ್‌ ಈವರೆಗೆ ಒಟ್ಟು 526.2 ಓವರ್‌ ಎಸೆದಿದ್ದು, ಐಪಿಎಲ್‌ನಲ್ಲಿ ಐನೂರಕ್ಕೂ ಹೆಚ್ಚು ಓವರ್‌ ಎಸೆದ ಏಕೈಕ ಬೌಲರ್‌ ಆಗಿದ್ದಾರೆ.

ಟಾಪ್ ನ್ಯೂಸ್

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

12-review

Movie Review: ಒಂದು ಸರಳ ಪ್ರೇಮ ಕಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.