ಪದಕ ಗೆದ್ದ ಲಿಫ್ಟರ್ಗಳಿಗೆ ವಿಮಾನ ನಿಲ್ದಾಣದಲ್ಲಿ ಸ್ವಾಗತ
Team Udayavani, Dec 11, 2019, 12:27 AM IST
ಮಂಗಳೂರು: ಕಜಕಿಸ್ಥಾನದಲ್ಲಿ ನಡೆದ ಏಶ್ಯನ್ ಪವರ್ಲಿಫ್ಟಿಂಗ್ ಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಚಿನ್ನ, ಬೆಳ್ಳಿ ಪದಕ ಗೆದ್ದ ಪವರ್ಲಿಫ್ಟರ್ಗಳನ್ನು ಮಂಗಳೂರು ವಿಮಾನನಿಲ್ದಾಣದಲ್ಲಿ ಮಂಗಳವಾರ ಸ್ವಾಗತಿಸಲಾಯಿತು.
ಚಿನ್ನದ ಪದಕ ಪಡೆದ ಅರೆನ್ ಫೆರ್ನಾಂಡಿಸ್, ಶರತ್ ಪೂಜಾರಿ, ಸುಲೋಚನಾ, ಸತೀಶ್ ಖಾರ್ವಿ, ನಾಲ್ಕು ಬೆಳ್ಳಿ ಪದಕ ಪಡೆದ ದೀಪಾ ಕೆ.ಎಸ್., ನಾಗಶ್ರೀ ಅವರನ್ನು ಕೋಚ್ ಪ್ರದೀಪ್ ಆಚಾರ್ಯ, ಕಾರ್ಪೊರೇಟರ್ ಶಕೀಲಾ ಕಾವ ಸ್ವಾಗತಿಸಿದರು.
ಈ ಸಂದರ್ಭ ಮಾಜಿ ಕಾರ್ಪೊರೇಟರ್ ರೂಪಾ ಡಿ. ಬಂಗೇರ, ಭಾರತೀಯ ಜನ ಸೇವಾ ಟ್ರಸ್ಟ್ ಸಂಚಾಲಕಿ ವಿಜಯಶ್ರೀ ಗಟ್ಟಿ, ಕುಂಜತ್ತೋಡಿ ವಾಸುದೇವ ಕದ್ರಿ, ವಿಪ್ರ ಸಮಾಗಮ ವೇದಿಕೆ ಅಧ್ಯಕ್ಷ ರಾಮಕೃಷ್ಣ ರಾವ್ ಇದ್ದರು.