- Sunday 15 Dec 2019
ಚೆಂಡು ವಿರೂಪ: ವಿಂಡೀಸ್ ಕ್ರಿಕೆಟಿಗ ಪೂರಣ್ಗೆ 4 ಪಂದ್ಯ ನಿಷೇಧ
Team Udayavani, Nov 13, 2019, 11:55 PM IST
ಲಕ್ನೋ: ಚೆಂಡನ್ನು ವಿರೂಪಗೊಳಿಸಲು ಪ್ರಯತ್ನಿಸಿದ ವೆಸ್ಟ್ ಇಂಡೀಸ್ ಕ್ರಿಕೆಟಿಗ ನಿಕೋಲಸ್ ಪೂರಣ್ ಅವರಿಗೆ ಐಸಿಸಿ 4 ಪಂದ್ಯಗಳ ನಿಷೇಧ ವಿಧಿಸಿದೆ.
ಸೋಮವಾರ ಅಫ್ಘಾನಿಸ್ಥಾನ-ವೆಸ್ಟ್ ಇಂಡೀಸ್ ನಡುವೆ ಲಕ್ನೋದಲ್ಲಿ ನಡೆದ 3ನೇ ಟಿ20 ಪಂದ್ಯದ ವೇಳೆ ಪೂರಣ್ ಚೆಂಡು ವಿರೂಪಗೊಳಿಸಲು ಯತ್ನಿಸಿದ್ದರು ಎನ್ನಲಾಗಿದೆ. ಇದು ಟೀವಿ ದೃಶ್ಯಾವಳಿಯಲ್ಲಿ ದಾಖಲಾಗಿತ್ತು.
ಐಸಿಸಿ ಇದನ್ನೇ ಸಾಕ್ಷಿಯನ್ನಾಗಿ ಪರಿಗಣಿಸಿದೆ. ಪಂದ್ಯದ ರೆಫ್ರಿ ಕ್ರಿಸ್ ಬ್ರಾಡ್ ಎದುರು ವಿಚಾರಣೆಗೆ ಹಾಜರಾದ ಪೂರಣ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಐಸಿಸಿ ತಿಳಿಸಿದೆ.
ನಿಷೇಧದಿಂದಾಗಿ ಅಫ್ಘಾನಿಸ್ಥಾನ ವಿರುದ್ಧ ಲಕ್ನೋದಲ್ಲಿ ನಡೆಯಲಿರುವ 3 ಪಂದ್ಯಗಳ ಟಿ20 ಸರಣಿಯಿಂದ ಪೂರಣ್ ಹೊರಗುಳಿಯಲಿದ್ದಾರೆ. ಬಳಿಕ ಭಾರತ ವಿರುದ್ಧ ಆಡಲಾಗುವ ಮೊದಲ ಟಿ20 ಪಂದ್ಯವನ್ನೂ ತಪ್ಪಿಸಿಕೊಳ್ಳಲಿದ್ದಾರೆ.
ಈ ವಿಭಾಗದಿಂದ ಇನ್ನಷ್ಟು
-
ಚೆನ್ನೈ: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ದದ ಪ್ರಥಮ ಏಕದಿನ ಪಂದ್ಯದಲ್ಲಿ ಭಾರತ ತಂಡ ಮೊದಲು ಬ್ಯಾಟಿಂಗ್ ಗೆ ಇಳಿಯಲಿದೆ. ಟಿ ಟ್ವೆಂಟಿಯಲ್ಲಿ ಉತ್ತಮ ಪ್ರದರ್ಶನ...
-
ಚೆನ್ನೈ: ಪ್ರವಾಸಿ ವೆಸ್ಟ್ ಇಂಡೀಸ್ ಎದುರಿನ ಟಿ20 ಸರಣಿಯನ್ನು ವಶಪಡಿಸಿಕೊಂಡ ಖುಷಿಯಲ್ಲಿರುವ ಭಾರತವಿನ್ನು ಏಕದಿನ ಸರಣಿಯಲ್ಲೂ ಮೇಲುಗೈ ಸಾಧಿಸುವ ಯೋಜನೆಯಲ್ಲಿದೆ....
-
ಕರಾಚಿ: ಪಾಕಿಸ್ಥಾನದಲ್ಲಿ ನಿಧಾನವಾಗಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಬಾಗಿಲು ತೆರೆಯಲ್ಪಡುತ್ತಿದೆ. ಸದ್ಯ ಶ್ರೀಲಂಕಾ ತಂಡ ದಶಕದ ಬಳಿಕ ಇಲ್ಲಿ ಟೆಸ್ಟ್ ಸರಣಿ...
-
ಹೊಸದಿಲ್ಲಿ: ಪುನಃ ಗಾಯಾಳಾಗಿ ಭಾರತ ತಂಡದಿಂದ ಬೇರ್ಪಟ್ಟಿರುವ ಪೇಸ್ ಬೌಲರ್ ಭುವನೇಶ್ವರ್ ಕುಮಾರ್ ಮುಂದಿನ ವರ್ಷದ ನ್ಯೂಜಿಲ್ಯಾಂಡ್ ಪ್ರವಾಸಕ್ಕೆ ಲಭಿಸುವ...
-
ಚೆನ್ನೈ: ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್ ಅವರ ಆತ್ಮಚರಿತ್ರೆ "ಮೈಂಡ್ ಮಾಸ್ಟರ್' ಬಿಡುಗಡೆಗೊಂಡಿದೆ. ಚೆನ್ನೈಯ ಹೊಟೇಲ್ ತಾಜ್ ಕೋರಮಂಡಲ್ನಲ್ಲಿ ನಡೆದ...
ಹೊಸ ಸೇರ್ಪಡೆ
-
ಕುಷ್ಟಗಿ: ಹಿಂದಿನ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟೀನ್ಗೆ ಪಟ್ಟಣದಲ್ಲಿ ಕೊನೆಗೂ ಜಾಗೆ ಸಿಕ್ಕಿದೆ. ಕುಷ್ಟಗಿ ಪಟ್ಟಣ ವ್ಯಾಪ್ತಿಯಲ್ಲಿ ಇಂದಿರಾ...
-
ಮಣಿಪಾಲ: 21 ದಿನದಲ್ಲಿ ಅತ್ಯಾಚಾರಿಗಳಿಗೆ ಶಿಕ್ಷೆ ವಿಧಿಸುವ ದಿಶಾ ಕಾಯ್ದೆಯನ್ನು ದೇಶಾದ್ಯಂತ ಜಾರಿಗೊಳಿಸುವ ಅಗತ್ಯ ಇದೆಯೇ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು...
-
ಹೊಸದಿಲ್ಲಿ: ಹಣ್ಣು, ತರಕಾರಿಗಳ ಸೀಸನ್ ಆರಂಭವಾದರೂ, ಸಾಕಷ್ಟು ಮಾರುಕಟ್ಟೆಗೆ ಆವಕವಾಗುತ್ತಿಲ್ಲ ಇದರಿಂದ ಈ ಬಾರಿ ತರಕಾರಿ ಬೆಲೆ ಕಳೆದ ವರ್ಷ ಚಳಿಗಾಲಕ್ಕಿಂತಲೂ...
-
ಕೋಲ್ಕತ್ತಾ: ಇತ್ತೀಚೆಗಷ್ಟೇ ರಾಷ್ಟ್ರಪತಿಗಳ ಅಂಕಿತ ಪಡೆದ ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆ ಹೆಚ್ಚಾಗಿದ್ದು, ಪಶ್ಚಿಮ ಬಂಗಾಳದಲ್ಲಿ...
-
ರಾಣಿಬೆನ್ನೂರ: ಸಹಕಾರಿ ಕ್ಷೇತ್ರದ ಮೇಲೆ ವಿಧಿಸಿರುವ ಆದಾಯ ತೆರಿಗೆ, ಟಿಡಿಎಸ್ -ಜಿಎಸ್ಟಿ ರದ್ದುಪಡಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಸ್ಟೇಟ್ ಕೋ-ಆಪ್ ಸೊಸೈಟೀಸ್...