ಭಾರತವನ್ನು ಮಗುಚಿದ ಹೆಟ್ ಮೈರ್ – ಹೋಪ್ ಶತಕದಾಟ ; 8 ವಿಕೆಟ್ ಗಳಿಂದ ಗೆದ್ದ ವೆಸ್ಟ್ ಇಂಡೀಸ್

ಎರಡನೇ ವಿಕೆಟಿಗೆ 218 ರನ್ ಜೊತೆಯಾಟ ನೀಡಿದ ಸೂಪರ್ ಜೋಡಿ

Team Udayavani, Dec 15, 2019, 9:51 PM IST

One-Day-Match-WI-730

ಚೆನ್ನೈ: ವೆಸ್ಟ್ ಇಂಡೀಸ್ ತಂಡದ ವಿರುದ್ಧದ ಟಿ20 ಸರಣಿಯನ್ನು 2-1 ಅಂತರದಿಂದ ಗೆದ್ದು ಬೀಗಿದ್ದ ಟೀಂ ಇಂಡಿಯಾಗೆ ಪ್ರಥಮ ಏಕದಿನ ಪಂದ್ಯದಲ್ಲಿ ಸೋಲಿನ ಬಿಸಿ ಮುಟ್ಟಿದೆ. ಭಾರತ ನೀಡಿದ 288 ರನ್ ಸವಾಲನ್ನು ಆತ್ಮವಿಶ್ವಾಸದಿಂದಲೇ ಬೆನ್ನಟ್ಟಿದ ಪೊಲಾರ್ಡ್ ಪಡೆ 08 ವಿಕೆಟ್ ಗಳ ಅಧಿಕಾರಯುತ ಜಯವನ್ನು ತನ್ನದಾಗಿಸಿಕೊಂಡಿತು.

ಆರಂಭಿಕ ಆಟಗಾರ ಶೈ ಹೋಪ್ ಅವರ ತಾಳ್ಮೆಯ ಶತಕ ಮತ್ತು ಒನ್ ಡೌನ್ ಬ್ಯಾಟ್ಸ್ ಮನ್ ಶಿಮ್ರನ್ ಹೈಟ್ ಮೇರ್ ಅವರ ಭರ್ಜರಿ ಶತಕ ಮತ್ತು ಎರಡನೇ ವಿಕೆಟಿಗೆ ಈ ಜೋಡಿ ನೀಡಿದ 218 ರನ್ ಗಳ ಭರ್ಜರಿ ಜೊತೆಯಾಟ ಪ್ರವಾಸಿಗರಿಗೆ ಚಿಪಾಕ್ ಅಂಗಳದಲ್ಲಿ ಭರ್ಜರಿ ಗೆಲುವನ್ನು ತಂದುಕೊಡುವಲ್ಲಿ ನೆರವಾಯಿತು.

ಅಂತಿಮವಾಗಿ ವೆಸ್ಟ್ ಇಂಡೀಸ್ 47.5 ಓವರ್ ಗಳಲ್ಲಿ 2 ವಿಕೆಟ್ ಗಳನ್ನು ಕಳೆದುಕೊಂಡು 291 ರನ್ ಗಳಿಸುವ ಮೂಲಕ ಗೆಲುವಿನ ಗುರಿಯನ್ನು ತಲುಪಿತು. ಭರ್ಜರಿ ಶತಕ ಬಾರಿಸಿದ ಶಿಮ್ರನ್ ಹೆಟ್ ಮೆರ್ (139) ಪಂದ್ಯಶ್ರೇಷ್ಠ ಪುರಸ್ಕಾರಕ್ಕೆ ಪಾತ್ರರಾದರು.

ಭಾರತ-ವೆಸ್ಟ್ ಇಂಡೀಸ್ ಏಕದಿನ: ಅಯ್ಯರ್, ಪಂತ್ ಹೋರಾಟ ; ವೆಸ್ಟ್ ಇಂಡೀಸ್ ಗೆಲುವಿಗೆ 288 ಗುರಿ


ವೆಸ್ಟ್ ಇಂಡೀಸ್ ಗೆ ಆರಂಭಿಕ ಹೊಡೆತ ನೀಡುವಲ್ಲಿ ಭಾರತೀಯ ಬೌಲರ್ ಗಳು ಯಶಕಂಡರು. ಓಪನರ್ ಸುನೀಲ್ ಆ್ಯಂಬ್ರಿಸ್ (09) ಅವರನ್ನು ಚಾಹರ್ ಎಲ್.ಬಿ. ಬಲೆಗೆ ಕೆಡವಿದರು. ಆದರೆ ಆ ಬಳಿಕ ಜೊತೆಯಾದ ಹೋಪ್ (ಅಜೇಯ 102) ಮತ್ತು ಹೆಟ್ ಮೈರ್ (139) ಜೋಡಿ ಭಾರತೀಯ ಬೌಲರ್ ಗಳಿಗೆ ಮತ್ಯಾವುದೇ ಮೇಲುಗೈ ದೊರೆಯದಂತೆ ನೋಡಿಕೊಂಡರು.

ವಿಕೆಟ್ ಕೀಪರ್ ಶೈ ಹೋಪ್ ನಿಧಾನಗತಿಯ ಆಟಕ್ಕೆ ತೊಡಗಿದರೆ ಹೇಟ್ ಮೇರ್ ಭಾರತೀಯ ಬೌಲರ್ ಗಳನ್ನು ಮುಲಾಜಿಲ್ಲದೇ ದಂಡಿಸುತ್ತಾ ಹೋದರು. ಈ ಪರ್ಫೆಕ್ಟ್ ಕಾಂಬಿನೇಷನ್ ಮುರಿಯುವ ಕ್ಯಾಪ್ಟನ್ ಕೊಹ್ಲಿಯ ಯಾವ ತಂತ್ರವೂ ಫಲನೀಡಲಿಲ್ಲ. ಹೆಟ್ ಮೈರ್ ಕೇವಲ 106 ಎಸೆತಗಳಲ್ಲಿ 139 ರನ್ ಬಾರಿಸಿದರು. ಇದರಲ್ಲಿ 11 ಬೌಂಡರಿ ಹಾಗೂ 07 ಭರ್ಜರಿ ಸಿಕ್ಸರ್ ಗಳು ಒಳಗೊಂಡಿತ್ತು.

39ನೇ ಓವರಿನಲ್ಲಿ ಹೆಟ್ ಮೈರ್ ಔಟಾದರು, ಅಂದರೆ ಈ ಜೋಡಿ ಸುಮಾರು 28 ಓವರುಗಳವರೆಗೆ ಕ್ರೀಸ್ ಆಕ್ರಮಿಸಿಕೊಂಡು ಭಾರತೀಯ ಬೌಲರ್ ಗಳನ್ನು ಕಾಡಿದರು. ಹೋಪ್ ಅವರು 151 ಎಸೆತಗಳಲ್ಲಿ 102 ರನ್ ಬಾರಿಸಿ ಅಜೇಯರಾಗಿ ಉಳಿದರು. ಹೆಟ್ ಮೇರ್ ಔಟಾದ ಬಳಿಕ ಹೋಪ್ ಜೊತೆಗೂಡಿದ ನಿಕೋಲಸ್ ಪೂರಣ್ ಅವರು (29) ಬಿರುಸಿನ ಆಟವಾಡಿ ತಂಡದ ಜಯವನ್ನು ಸರಾಗಗೊಳಿಸಿದರು. ಪೂರಣ್ 23 ಎಸೆತಗಳಲ್ಲಿ 29 ರನ್ ಬಾರಿಸಿದರು.

ವೆಸ್ಟ್ ಇಂಡೀಸ್ ಬೌಲಿಂಗ್ ಗೆ ಹೋಲಿಸಿದರೆ ಭಾರತದ ಬೌಲಿಂಗ್ ಇಂದು ಮೊನಚು ಕಳೆದುಕೊಂಡಿತ್ತು. ದೀಪಕ್ ಚಹರ್ ಮತ್ತ ಕುಲದೀಪ್ ಯಾದವ್ ಅವರ ಬೌಲಿಂಗ್ ಮಾತ್ರ ಇದ್ದುದರಲ್ಲೇ ಸ್ವಲ್ಪ ಪರಿಣಾಮಕಾರಿಯಾಗಿತ್ತು. ಎರಡು ವಿಕೆಟ್ ಗಳನ್ನು ಚಹರ್ ಮತ್ತು ಮಹಮ್ಮದ್ ಶಮಿ ಹಂಚಿಕೊಂಡರು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.