ಮಳೆ ಅಡಚಣೆ: ವಿಂಡೀಸ್ಗೆ 310 ರನ್ ಗುರಿ ನೀಡಿದ ಭಾರತ
Team Udayavani, Jun 26, 2017, 1:17 AM IST
ಪೋರ್ಟ್ ಆಫ್ ಸ್ಪೇನ್: ಮಳೆಯಿಂದಾಗಿ ಭಾರತ ಮತ್ತು ವೆಸ್ಟ್ಇಂಡೀಸ್ ನಡುವಣ ದ್ವಿತೀಯ ಏಕದಿನ ಪಂದ್ಯ ಎರಡು ಗಂಟೆ ತಡವಾಗಿ ಆರಂಭವಾಯಿತು. ಎರಡು ಗಂಟೆ ನಷ್ಟವಾದ ಕಾರಣ 43 ಓವರ್ಗಳಿಗೆ ಸೀಮಿತಗೊಂಡ ಪಂದ್ಯದಲ್ಲಿ ಭಾರತ 5 ವಿಕೆಟ್ಗೆ 310 ರನ್ ಗುರಿ ನೀಡಿತು.
ಟಾಸ್ ಜಯಿಸಿದ ವೆಸ್ಟ್ ಇಂಡೀಸ್ ತಂಡವು ಮೊದಲು ಫೀಲ್ಡಿಂಗ್ ನಡೆಸಲು ನಿರ್ಧರಿಸಿತು. ಬ್ಯಾಟಿಂಗ್ ಆರಂಭಿಸಿದ ಭಾರತ ಉತ್ತಮ ಆರಂಭ ಪಡೆಯಿತು. ಆರಂಭಿಕ ಬ್ಯಾಟ್ಸ್ಮನ್ಗಳಾದ ಅಜಿಂಕ್ಯ ರಹಾನೆ (103 ರನ್)ಹಾಗೂ ಶಿಖರ್ ಧವನ್ (63 ರನ್) ಉತ್ತಮ ಆರಂಭ ಪಡೆಯಿತು. ಬಳಿಕ ಬಂದ ವಿರಾಟ್ ಕೊಹ್ಲಿ (87 ರನ್ ) ಸಿಡಿಸಿದರು. ಹೀಗಾಗಿ ಭಾರತ 300 ರನ್ ಗಡಿ ದಾಟಲು ಸಾಧ್ಯವಾಯಿತು. ಎಂ.ಎಸ್ ಧೋನಿ (ಅಜೇಯ 13 ರನ್) ಹಾಗೂ ಕೇದಾರ್ ಜಾಧವ್ (ಅಜೇಯ 13 ರನ್) ಬಾರಿಸಿದರು.
ಎರಡೂ ತಂಡಗಳು ತಮ್ಮ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಮೊದಲ ಏಕದಿನ ಪಂದ್ಯಕ್ಕಾಗಿ ಆಯ್ಕೆ ಮಾಡಿದ ತಂಡವನ್ನೇ ಉಳಿಸಿಕೊಂಡಿದ್ದವು. ಮೊದಲ ಏಕದಿನ ಪಂದ್ಯ ಕೂಡ ಮಳೆಯಿಂದ ರದ್ದುಗೊಂಡಿತ್ತು. ಸದ್ಯ ಇಡೀ ಸರಣಿ ಎಲ್ಲ ಪಂದ್ಯದ ಮೇಲೆ ಮಳೆ ಭೀತಿ ಇದೆ.
ಸಂಕ್ಷಿಪ್ತ ಸ್ಕೋರ್
ಭಾರತ 43 ಓವರ್ಗೆ 310/5 (ಅಜಿಂಕ್ಯ ರಹಾನೆ 103, ವಿರಾಟ್ ಕೊಹ್ಲಿ 87, ಜೋಸೆಫ್ 73ಕ್ಕೆ2)