ಜಿಂಬಾಬ್ವೆ ವಿರುದ್ಧ ವಿಂಡೀಸ್ ವಿಜಯ; “ಬಿ’ ವಿಭಾಗದಲ್ಲೀಗ ಎಲ್ಲ ತಂಡಗಳಿಗೂ ಎರಡು ಅಂಕ
Team Udayavani, Oct 19, 2022, 6:45 PM IST
ಹೋಬರ್ಟ್: ಟಿ20 ವಿಶ್ವಕಪ್ ಅರ್ಹತಾ ಪಂದ್ಯದ “ಬಿ’ ಗ್ರೂಪ್ ಪಂದ್ಯದಲ್ಲಿ ಜಿಂಬಾಬ್ವೆಯನ್ನು 31 ರನ್ನುಗಳಿಂದ ಮಣಿಸುವ ಮೂಲಕ ವೆಸ್ಟ್ ಇಂಡೀಸ್ ಖಾತೆ ತೆರೆದಿದೆ. ಇದರೊಂದಿಗೆ ಈ ಗುಂಪಿನ ಎಲ್ಲ ತಂಡಗಳು ಒಂದು ಜಯದೊಂದಿಗೆ ಎರಡು ಅಂಕ ಸಂಪಾದಿಸಿದ್ದು, ಮುನ್ನಡೆಯ ಲೆಕ್ಕಾಚಾರ ತೀವ್ರ ಕುತೂಹಲ ಮೂಡಿಸಿದೆ.
ರನ್ರೇಟ್ನಲ್ಲಿ ಸ್ಕಾಟ್ಲೆಂಡ್ ಮುಂದಿದೆ (+0.759). ಜಿಂಬಾಬ್ವೆಗೆ ದ್ವಿತೀಯ ಸ್ಥಾನ (0.000). ವೆಸ್ಟ್ ಇಂಡೀಸ್ ಮೂರಕ್ಕೇರಿತು (-0.275). ಐರ್ಲೆಂಡ್ಗೆ ಅಂತಿಮ ಸ್ಥಾನ (-0.468). ಎಲ್ಲ ತಂಡಗಳು ಇನ್ನೊಂದು ಪಂದ್ಯವನ್ನು ಆಡಲಿಕ್ಕಿದೆ. ಮೊದಲೆರಡು ಸ್ಥಾನ ಸಂಪಾದಿಸುವ ಅವಕಾಶ ಯಾರಿಗಿದೆ ಎಂಬುದು ಎಲ್ಲರ ನಿರೀಕ್ಷೆ.
ಮೊದಲ ಜಯ
ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್ಗೆ ಶರಣಾಗಿದ್ದ ವೆಸ್ಟ್ ಇಂಡೀಸ್ ಇಲ್ಲಿ 7 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತು. ಜಿಂಬಾಬ್ವೆ 18.2 ಓವರ್ಗಳಲ್ಲಿ 122ಕ್ಕೆ ಕುಸಿಯಿತು.
45 ರನ್ ಮಾಡಿದ ಆರಂಭಕಾರ ಜಾನ್ಸನ್ ಚಾರ್ಲ್ಸ್ ವಿಂಡೀಸ್ ಸರದಿಯ ಟಾಪ್ ಸ್ಕೋರರ್. ರೋವ¾ನ್ ಪೊವೆಲ್ 28 ರನ್ ಹೊಡೆದರು. ಸಿಕಂದರ್ ರಝಾ 19ಕ್ಕೆ 3 ವಿಕೆಟ್ ಉರುಳಿಸಿ ಹೆಚ್ಚಿನ ಯಶಸ್ಸು ಸಾಧಿಸಿದ್ದು ಜಿಂಬಾಬ್ವೆ ಬೌಲಿಂಗ್ ಸರದಿಯ ವಿಶೇಷವಾಗಿತ್ತು.
ಆದರೆ ಸಿಕಂದರ್ ರಝಾ ಬ್ಯಾಟಿಂಗ್ನಲ್ಲಿ ಕ್ಲಿಕ್ ಆಗಲಿಲ್ಲ (14). ಸೀನ್ ವಿಲಿಯಮ್ಸ್ (1), ನಾಯಕ ರೇಗಿಸ್ ಚಕಬÌ (13) ಕೂಡ ಯಶಸ್ಸು ಕಾಣಲಿಲ್ಲ. ಅಲ್ಜಾರಿ ಜೋಸೆಫ್ (16ಕ್ಕೆ 4) ಮತ್ತು ಜೇಸನ್ ಹೋಲ್ಡರ್ (12ಕ್ಕೆ 3) ಬೌಲಿಂಗ್ ದಾಳಿಗೆ ಸಿಲುಕಿದ ಜಿಂಬಾಬ್ವೆ, ಯಾವ ಹಂತದಲ್ಲೂ ಗೆಲ್ಲುವ ಸೂಚನೆ ನೀಡಲಿಲ್ಲ.
ಸಂಕ್ಷಿಪ್ತ ಸ್ಕೋರ್: ವೆಸ್ಟ್ ಇಂಡೀಸ್-7 ವಿಕೆಟಿಗೆ 153 (ಚಾರ್ಲ್ಸ್ 45, ಪೊವೆಲ್ 28, ಅಖೀಲ್ ಹುಸೇನ್ ಔಟಾಗದೆ 23, ರಝಾ 19ಕ್ಕೆ 3, ಮುಝರಬನಿ 38ಕ್ಕೆ 2). ಜಿಂಬಾಬ್ವೆ-18.2 ಓವರ್ಗಳಲ್ಲಿ 122 (ಜೊಂಗ್ವೆ 29, ಮದೆವೇರ್ 27, ಜೋಸೆಫ್ 16ಕ್ಕೆ 4, ಹೋಲ್ಡರ್ 12ಕ್ಕೆ 3).
ಪಂದ್ಯಶ್ರೇಷ್ಠ: ಅಲ್ಜಾರಿ ಜೋಸೆಫ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ
IPL 2024; ಏಳು ಪಂದ್ಯ ಸೋತರೂ ಇನ್ನೂ ಆರ್ ಸಿಬಿಗೆ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!