ಪಶ್ಚಿಮ ವಲಯಕ್ಕೆ ದುಲೀಪ್‌ ಪಟ್ಟ; ದಕ್ಷಿಣ ವಲಯ ವಿರುದ್ಧ  294 ರನ್‌ ಗೆಲುವು


Team Udayavani, Sep 25, 2022, 11:00 PM IST

ಪಶ್ಚಿಮ ವಲಯಕ್ಕೆ ದುಲೀಪ್‌ ಪಟ್ಟ; ದಕ್ಷಿಣ ವಲಯ ವಿರುದ್ಧ  294 ರನ್‌ ಗೆಲುವು

ಕೊಯಮತ್ತೂರು: ಇನ್ನಿಂಗ್ಸ್‌ ಮುನ್ನಡೆ ಹೊಂದಿದ್ದ ಆತಿಥೇಯ ದಕ್ಷಿಣ ವಲಯವನ್ನು 294 ರನ್ನುಗಳ ಭಾರೀ ಅಂತರದಿಂದ ಕೆಡವಿದ ಪಶ್ಚಿಮ ವಲಯ “ದುಲೀಪ್‌ ಟ್ರೋಫಿ’ ಪಟ್ಟ ಅಲಂಕರಿಸಿದೆ.

ಗೆಲುವಿಗೆ 529 ರನ್ನುಗಳ ಕಠಿನ ಗುರಿ ಪಡೆದಿದ್ದ ದಕ್ಷಿಣ ವಲಯ, ಪಂದ್ಯದ ಅಂತಿಮ ದಿನ ಭೋಜನ ವಿರಾಮದೊಳಗಾಗಿ 234ಕ್ಕೆ ಸರ್ವಪತನ ಕಂಡಿತು. 4ನೇ ದಿನದಾಟದ ಅಂತ್ಯಕ್ಕೆ 154 ರನ್ನಿಗೆ 6 ವಿಕೆಟ್‌ ಕಳೆದುಕೊಂಡಾಗಲೇ ದಕ್ಷಿಣ ವಲಯದ ಸೋಲು ಖಾತ್ರಿಯಾಗಿತ್ತು. ಸ್ಟಾರ್‌ ಆಟಗಾರರೆಲ್ಲ ಪಶ್ಚಿಮದ ಬೌಲಿಂಗ್‌ ದಾಳಿಗೆ ಸಿಲುಕಿ ಪೆವಿಲಿಯನ್‌ ಸೇರಿ ಕೊಂಡಿದ್ದರು. ನಾಟೌಟ್‌ ಬ್ಯಾಟರ್‌ಗಳಾದ ಟಿ. ರವಿತೇಜ ಮತ್ತು ಆರ್‌. ಸಾಯಿ ಕಿಶೋರ್‌ ಎರಡು ಗಂಟೆಗಳ ಕಾಲ ಹೋರಾಟ ಸಂಘಟಿಸಿ ಕ್ರೀಸ್‌ ಆಕ್ರಮಿಸಿಕೊಳ್ಳುವ ಸೂಚನೆ ನೀಡಿದರು. ಈ ಜೋಡಿಯಿಂದ 157 ಎಸೆತಗಳಿಂದ 57 ರನ್‌ ಒಟ್ಟುಗೂಡಿತು. ಸ್ಕೋರ್‌ 203ಕ್ಕೆ ಏರಿದಾಗ ಮಧ್ಯಮ ವೇಗಿ ಚಿಂತನ್‌ ಗಜ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು.

ಬಳಿಕ ರವಿತೇಜ ಮತ್ತು ಕೃಷ್ಣಪ್ಪ ಗೌತಮ್‌ 8 ಓವರ್‌ಗಳ ತನಕ ಪಶ್ಚಿಮದ ದಾಳಿಯನ್ನು ತಡೆದು ನಿಂತರು. ಇವರು ದ್ವಿತೀಯ ಅವಧಿಗೆ ಪಂದ್ಯವನ್ನು ವಿಸ್ತರಿಸುವ ನಿರೀಕ್ಷೆ ಮೂಡಿಸಿದರು. ಆದರೆ ಇದರಲ್ಲಿ ಯಶಸ್ಸು ಕಾಣಲಿಲ್ಲ. ಸ್ಕೋರ್‌ 226ಕ್ಕೆ ಏರಿದಾಗ ಶಮ್ಸ್‌ ಮುಲಾನಿ ದೊಡ್ಡದೊಂದು ಬ್ರೇಕ್‌ ಒದಗಿಸಿದರು. ಕ್ರೀಸ್‌ ಆಕ್ರಮಿಸಿಕೊಂಡಿದ್ದ ರವಿತೇಜ ಅವರನ್ನು ಲೆಗ್‌ ಬಿಫೋರ್‌ ಬಲೆಗೆ ಬೀಳಿಸಿದರು. ರವಿತೇಜ 97 ಎಸೆತ ಎದುರಿಸಿ 53 ರನ್‌ ಹೊಡೆದರು (3 ಬೌಂಡರಿ, 1 ಸಿಕ್ಸರ್‌). ಬಾಸಿಲ್‌ ಥಂಪಿ ಖಾತೆ ತೆರೆಯದೆ ವಾಪಸಾದರು. ಕೆ. ಗೌತಮ್‌ ವಿಕೆಟ್‌ ಕಿತ್ತ ತನುಷ್‌ ಕೋಟ್ಯಾನ್‌ ಪಶ್ಚಿಮ ವಲಯದ ಜಯಭೇರಿ ಮೊಳಗಿಸಿದರು. ಗೌತಮ್‌ ಗಳಿಕೆ 28 ಎಸೆತಗಳಿಂದ 17 ರನ್‌ (3 ಬೌಂಡರಿ).

51ಕ್ಕೆ 4 ವಿಕೆಟ್‌ ಕಿತ್ತ ಶಮ್ಸ್‌ ಮುಲಾನಿ ಪಶ್ಚಿಮ ವಲಯದ ಅತ್ಯಂತ ಯಶಸ್ವಿ ಬೌಲರ್‌ ಎನಿಸಿದರು. 93 ರನ್‌ ಮಾಡಿದ ಕೇರಳದ ಓಪನರ್‌ ರೋಹನ್‌ ಕುನ್ನುಮ್ಮಾಳ್‌ ದಕ್ಷಿಣ ವಲಯದ ದ್ವಿತೀಯ ಸರದಿಯ ಟಾಪ್‌ ಸ್ಕೋರರ್‌. ಅಮೋಘ ದ್ವಿಶತಕ ಬಾರಿಸಿ ಪಶ್ಚಿಮ ವಲಯವನ್ನು ಹಳಿ ಏರಿಸಿದ ಯಶಸ್ವಿ ಜೈಸ್ವಾಲ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ದುಲೀಪ್‌ ಟ್ರೋಫಿ ಪಂದ್ಯಾವಳಿ ಪ್ರಸಕ್ತ ಋತುವಿನಿಂದ ವಲಯ ಮಾದರಿಗೆ ಮರಳಿತ್ತು. ಕಳೆದ ಕೆಲವು ವರ್ಷಗಳಿಂದ 3 ತಂಡಗಳ ನಡುವೆ ಈ ಪಂದ್ಯಾವಳಿ ನಡೆಯುತ್ತಿತ್ತು.

ಸಂಕ್ಷಿಪ್ತ ಸ್ಕೋರ್‌: ಪಶ್ಚಿಮ ವಲಯ-270 ಮತ್ತು 4 ವಿಕೆಟಿಗೆ 585 ಡಿಕ್ಲೇರ್‌. ದಕ್ಷಿಣ ವಲಯ-327 ಮತ್ತು 234 (ರೋಹನ್‌ ಕುನ್ನುಮ್ಮಾಳ್‌ 93, ಟಿ. ರವಿತೇಜ 53, ಕೆ. ಗೌತಮ್‌ 17, ಶಮ್ಸ್‌ ಮುಲಾನಿ 51ಕ್ಕೆ 4, ಜೈದೇವ್‌ ಉನಾದ್ಕತ್‌ 28ಕ್ಕೆ 2, ಅಜಿತ್‌ ಶೇs… 29ಕ್ಕೆ 2).
ಪಂದ್ಯಶ್ರೇಷ್ಠ: ಯಶಸ್ವಿ ಜೈಸ್ವಾಲ್‌.
ಸರಣಿಶ್ರೇಷ್ಠ: ಜೈದೇವ್‌ ಉನಾದ್ಕತ್‌.

ಟಾಪ್ ನ್ಯೂಸ್

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

17

ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್‌ ರೋಲ್ ನಲ್ಲಿ ಫಾಫಾ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

Apex

CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1-asaas

Mumbai Indians; ಹಾರ್ದಿಕ್‌ ಪಾಂಡ್ಯ, ಬೌಷರ್‌ ಮೌನ!

1-wewewqe

‘Bangaluru’: ಅನ್‌ಬಾಕ್ಸ್‌  ಸಮಾರಂಭದಲ್ಲಿ ಆರ್‌ಸಿಬಿ ವನಿತೆಯರು

1-saddas-aa-4

IPL:ರಾಹುಲ್‌ ಫಿಟ್‌; ಕೀಪಿಂಗ್‌ ಡೌಟ್‌

1-saddas-aa-3

IPL; ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿದ ಕೊಹ್ಲಿ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

17

ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್‌ ರೋಲ್ ನಲ್ಲಿ ಫಾಫಾ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

12-malpe

Malpe: ಶ್ರೀ ವಡಭಾಂಡ ಬಲರಾಮ ದೇವಸ್ಥಾನ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಂಪನ್ನ

Apex

CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.